ತುಮಕೂರು ಲೈವ್

ಅಪಘಾತ: ದ್ವಿಚಕ್ರವಾಹನ ಸವಾರರು ಸಾವು

Publicstory. in


ತುರುವೇಕೆರೆ : ದ್ವಿಚಕ್ರವಾಹನ ಮತ್ತು ಕ್ಯಾಂಟರ್ ಗಾಡಿಯ ನಡುವೆ ಮುಖಾಮುಖಿ ಡಿಕ್ಕಿಯಾಗಿ ದ್ವಿ ಚಕ್ರವಾಹನ ಚಾಲಕ ಮತ್ತು ಹಿಂಬದಿಯ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಬದ್ರಿಕಾಶ್ರಮ ಸಮೀಪ ಭಾನುವಾರ ಸಂಜೆ ನಡೆದಿದೆ.

ಮೃತರು ಹಳ್ಳದಹೊಸಹಳ್ಳಿ ಹರೀಶ್(25) ಮತ್ತು ಬೆಂಗಳೂರು ಮೂಲದ ಹೇಮಂತ್ಕುಮಾರ್(24).ಹಳ್ಳದಹೊಸಹಳ್ಳಿ ಹರೀಶ್ ಮತ್ತು ಆತನ ಸ್ನೇಹಿತ ಹೇಮಂತ್ಕುಮಾರ್ನೊಂದಿಗೆ ಸಂಬಂಧಿಕರ ನಾಮಕರಣಕ್ಕೆಂದು ಟಿ.ಬಿ.ಕ್ರಾಸ್ ಕಡೆಗೆ ಹಳ್ಳದ ಹೊಸಹಳ್ಳಿಯಿಂದ ದ್ವಿ ಚಕ್ರವಾಹನದಲ್ಲಿ ತೆರಳುತ್ತಿರುವಾಗ ಮಾಯಸಂದ್ರದ ಕಡೆಯಿಂದೆ ತುರುವೇಕೆರೆಗೆ ಹೋಗುತ್ತಿದ್ದ ಕ್ಯಾಂಡರ್ ಗಾಡಿ ಮತ್ತು ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comment here