Thursday, March 28, 2024
Google search engine
Homeಜನಮನಆವೊತ್ತು ಭಿಕ್ಷೆ ಬೇಡಿದವ ಇಂದು ಉದ್ಯಮಿ

ಆವೊತ್ತು ಭಿಕ್ಷೆ ಬೇಡಿದವ ಇಂದು ಉದ್ಯಮಿ


ಸಣ್ಣದರಲ್ಲಿ ಭಿಕ್ಷೆ ಬೇಡಿಕೊಂಡು ಓದು ಪೂರೈಸಿದವರು ಇವರು. ಇಂದು ತಿಪಟೂರಿನಲ್ಲಿ ಯಶಸ್ವಿ ಉದ್ಯಮಿ. ಕಷ್ಟದಿಂದಲೇ ಮೇಲೆ ಬರಬಹುದು, ಛಲವೇ ಮುಖ್ಯ ಎಂಬುದಕ್ಕೆ ತಿಪಟೂರು ಕೃಷ್ಣ ಉದಾಹರಣೆಯಾಗಿ ನಿಂತಿದ್ದಾರೆ. ಯುವಕರು ಉದ್ಯಮಪತಿಗಳಾಗಲು ಅವರಿಗೆ ತರಬೇತಿ, ಸಹಾಯ ನೀಡುವ ಕೆಲಸದಲ್ಲೂ ಅವರು ಸಕ್ರಿಯರು. ಅವರ ಮಾತುಗಳಲ್ಲಿ ಓದಿ

ಇವತ್ತು ರವಿವಾರ..
ಏನೋ ಒಂದು ತರಹದ ಸಮಾಧಾನದ ದಿನ.
ನಮ್ಮ ಫ್ಯಾಕ್ಟರಿಗೆ ಬೆಳಿಗ್ಗೆ ಒಂದು ವಿಸಿಟ್ ಕೊಟ್ಟೆ..

ಒಬ್ಬನೇ.. ಕಳೆದ ಭಾನುವಾರ ರಜಾ ಅನುಭವಿಸದೇ ಹೊಲದ ಕಡೆ ಹೋಗಿದ್ದೆ. ಇವತ್ತು, ಇಲ್ಲಿ.

ಆಗೇ ಒಬ್ಬನೇ ಕುಳಿತಾಗ ಇಡೀ ಬದುಕು ಕಣ್ಣಾ ಮುಂದೆ ಬರ ತೊಡಗಿತು…

ದೇಶದ ತುಂಬಾ, ಅಲ್ಲಾ ಜಗದ ತುಂಬಾ ಕರೋನಾ ಆವರಿಸಿಕೊಳ್ಳುವ ಹೊತ್ತಲ್ಲಿ ನಾನು ನನ್ನ ಆರೋಗ್ಯದ ಬಗ್ಗೆ ಗಮನ ಹರಿಸಿದೆ.
ಹೌದು, ಎಷ್ಟೊಂದು ಆರೋಗ್ಯವಾಗಿದ್ದೇನೆ.
52 ಆದರೂ ಅದೇ 30 ರ ಉತ್ಸಾಹ, ಹುಮ್ಮಸ್ಸು, ಹಠ, ಛಲ, ಸಾಧನೆಯೆಡೆಗೆ ಮನದ ತುಡಿತ.

ಸ್ವಾಭಿಮಾನ,ಸ್ವಾವಲಂಬಿತನ,ಶ್ರಮ, ಸತತ ಪ್ರಯತ್ನ…
ಹೌದು ನಾನು ಬದುಕಿನಲ್ಲಿ ಒಂದು ಪ್ರಿನ್ಸಿಪಲ್ ಇಟ್ಟುಕೊಂಡು, ಜೀವನ ನಡೆಸಿಕೊಂಡು ಬಂದವನು.

ಹೇಗೆಲ್ಲಾ ನಿರರ್ಥಕ ಬದುಕು ನಡೆಸುವುದಕ್ಕಿಂತ, ಹೀಗೆ ಬದುಕ ಬೇಕು ನಡೆಸಬೇಕು ಎಂದು ಹಠಕ್ಕೆ ಬಿದ್ದವರು.
ನಿಧಾನವಾಗಿ ಆದರೂ ನಾನು ಸಾಧಿಸಿ, ತೃಪ್ತಿ ಜೊತೆಗೆ ಆತ್ಮ ಸಂತೋಷ ಕಂಡವನು.

ನನ್ನ ಏಳನೇ ವಯಸ್ಸಿಂದಲೇ ಕಷ್ಟದ ಸರಮಾಲೆ ಹೊದ್ದು, ಗೆದ್ದವನು..
ಹಸಿದಾಗ ಬಿಕ್ಷೆ ಬೇಡಿ ತಿಂದವನು, ಹೋಟೆಲ್‌ನಲ್ಲಿ ಎಂಜಲು ಲೋಟ ತೊಳೆದವನು, ಕಾಡಿನಿಂದ ಕಟ್ಟಿಗೆ ಹೊತ್ತವನು, ಎಮ್ಮೆ, ದನ ಕಾಯ್ದವನು, ಇಟ್ಟಿಗೆ, ಮರಳು ಹೊತ್ತವನು, ದಿನಸಿ ಅಂಗಡಿಯಲ್ಲಿ, ಕೈಗಾರಿಕೆಗಳಲ್ಲಿ ಹೀಗೆ ಹತ್ತು ಹಲವು ಕೆಲಸ ಮಾಡಿಕೊಂಡು ಹಸಿವ ನೀಗಿಸಿಕೊಳ್ಳುವ ಜೊತೆಗೆ ವಿದ್ಯಾ ದಾಹ ಪೋರೈಸಿಕೊಂಡವನು.

ದುಡಿಮೆಗಾಗಿ ಊರೂರು ಸುತ್ತಿದವನು. ಬದುಕ ಗೆದ್ದವನು.
ಯಾರಿಗೂ ಮೋಸ, ವಂಚನೆ ಮಾಡದೇ ಛಲದಿಂದ ಬದುಕ ಕಟ್ಟಿಕೊಂಡವನು.

ಹೆದರಿಸುವವರಿಗೆ ಹೆದರಿಸಿ, ಪ್ರೀತಿಸುವವರಿಗೆ ಜೀವವನ್ನು ಒತ್ತೆ ಇಟ್ಟು, ಗೆಳೆತನಕ್ಕೆ ಗೆಳೆತನ, ವಿರೋಧಕ್ಕೆ ವಿರೋಧದಲ್ಲೇ ಧಂ ನಿಂದ ಬದುಕನ್ನು ರಕ್ಷಣಾತ್ಮಕವಾಗಿ ಕಟ್ಟಿಕೊಂಡವನು.

ಸಮಾಜದ ಸೇವೆಗೆ ಮುಂದಾಗಿ, ಕುಟುಂಬಕ್ಕೂ ಆಸರೆಯಾಗಿ, ಮಕ್ಕಳ ದಡ ಮುಟ್ಟಿಸಿ ಮಾದರಿಯಾದವನು.

ಕಲೆ, ಸಾಹಿತ್ಯ, ನಾಟಕ, ಸಿನಿಮಾ, ಚಳುವಳಿ, ಹೋರಾಟ, ಸತ್ಯಾಗ್ರಹ, ಮಾದ್ಯಮ, ವ್ಯಾಪಾರ, ಉದ್ಯಮ ಕ್ಷೇತ್ರಗಳಲ್ಲಿ ಎಡತಾಕಿ ಬಂದವನು.
ಸುಮಾರು 35ಕ್ಕೂ ಹೆಚ್ಚು ಕಸುಬುಗಳನ್ನು ಮಾಡಿ, ಅನುಭವ ಪಡೆದವನು.

ಎಂತಹ ಕಷ್ಟಕ್ಕೂ ಸವಾಲಿಗೆ ಬಗ್ಗದೇ ಬಂಡೆಯ ಜೀವನ ನಡೆಸಿದವನು.
ಕುಡುಕ, ಪೋಲಿ, ಒರಟನಾಗಿ ಸಮಾಜದ ಒರಟುತನಕ್ಕೆ ತಡೆಹೊಡ್ಡಿದವನು.

ಅಹಂಕಾರಿಗಳ ಬಡಿದು ಜೈಲಿಗೂ ಹೋದವನು. ದುಷ್ಟರ, ನಿಷ್ಠರ ಗೆಳತನ ಹೊಂದಿದ್ದವನು. ಅತ್ಯಂತ ಕಷ್ಟಕರ ಜೀವನ, ಅತ್ಯಂತ ಸುಖ, ಭೋಗಗಳನ್ನೂ ಅನುಭವಿಸಿದವನು.

ನಾನಾ ಘಟನೆ, ಷಡ್ಯಂತ್ರ, ಪಿತೂರಿ, ವೈರತ್ವ,ಅಪಘಾತಗಳಿಂದ ಅನೇಕ ಬಾರಿ ಸಾವನ್ನು ಗೆದ್ದವನು. ನೂರಾರು ಸ್ನೇಹಿತರ ಕಳೆದುಕೊಂಡು, ಸಾವಿರಾರು ಸ್ನೇಹಿತರ ಪಡೆದುಕೊಂಡವನು.
ಇಡೀ ಜೀವನದ ಕಥೆ ಮೂರು ಸಾವಿರ ಪುಟಗಳಾಗಿವೆ.

ಆದರೂ ಈಗ ಆರೋಗ್ಯಕರ, ಆನಂದಕರ ಜೀವನ ನಡೆಸುತ್ತಿರೋದು ನನ್ನೊಳಗೇ ಅಚ್ಚರಿ ಮೂಡಿಸಿದೆ.
ಇಡೀ ಬದುಕಿನ ಪುಟಗಳನ್ನು ನಿಮ್ಮ ಮುಂದೆ ತೆರೆದಿಟ್ಟು, ಆತ್ಮವಿಶ್ವಾಸದಿಂದ ಬದುಕ ನಡೆಸುವ ಬಗ್ಗೆ ಅನುಭವ ಹಂಚಿಕೊಳ್ಳುವ ಮಹದಾಸೆ ಇದೆ.

ಜಿಗುಪ್ಸೆ, ನಿರುತ್ಸಾಹ, ಸಾಲುಗಟ್ಟಿದ ಸೊಲುಗಳ ಮೆಟ್ಟಿ ನಿಂತ ನನಗೆ ಪ್ರಶಂಸೆ, ಗೌರವ, ಮನ್ನಣೆಗಳು ಸಿಕ್ಕಿ ಜೀವನ ಸಾರ್ಥಕಗೊಳಿಸಿದೆ.

ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ, ಕಾರಣವೂ ಅಲ್ಲ. ಅದು ಬದುಕಿನ ಪಲಾಯನದ ನೆಪ ಮಾತ್ರ. ಇಂತಹ ಅನೇಕ ಸಂದರ್ಭಗಳನ್ನು ಎದುರಿಸಿ ಗೆದ್ದಾಗ, ಕಾರಣರಾದವರು ಉದುರಿ ಹೋಗಿದ್ದರು.

ಶ್ರೇಷ್ಠ ಬದುಕನ್ನು ಶ್ರೇಷ್ಠವಾಗಿಯೇ ಕಳೆಯಬೇಕು
ಮಾದರಿಯಾಗಿ ಮನುಷ್ಯರಂತೆ..

ಭಾನುವಾರದ ಶುಭಾಶಯಗಳು
ಮತ್ತೊಮ್ಮೆ ಬಿಡುವಾದಾಗ, ಇನ್ನೊಂದಿಷ್ಟು
ನಿಮ್ಮವ
ತಿಪಟೂರುಕೃಷ್ಣ
9448416550

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?