Friday, March 29, 2024
Google search engine
Homeಜಸ್ಟ್ ನ್ಯೂಸ್ಎಂಪ್ರೆಸ್ ಕೆಪಿಎಸ್ ಶಾಲೆಯಲ್ಲಿ 'ಕೇಳು ಮಗುವೆ ಕಥೆಯಾ' ಕಾರ್ಯಕ್ರಮ

ಎಂಪ್ರೆಸ್ ಕೆಪಿಎಸ್ ಶಾಲೆಯಲ್ಲಿ ‘ಕೇಳು ಮಗುವೆ ಕಥೆಯಾ’ ಕಾರ್ಯಕ್ರಮ

ಕರ್ನಾಟಕ ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆಯಿಂದ ಹಮ್ಮಿಕೊಂಡಿರುವ “ಕೇಳು ಮಗುವೆ ಕಥೆಯಾ” ಸರಣಿಯ ಕಾರ್ಯಕ್ರಮ- 4
ಎಂಪ್ರೆಸ್ ಕೆಪಿಎಸ್ ಶಾಲೆಯಲ್ಲಿ ನಡೆಯಿತು.

ಕುವೆಂಪು ರವರ,’ನರಿಗಳಿಗೇಕೆ ಕೋಡಿಲ್ಲ ‘ಕಥೆಯನ್ನು ಸಿ.ಎಲ್.ಸುನಂದಮ್ಮ ಮಕ್ಕಳಿಗೆ ಆಕರ್ಷಕವಾಗಿ, ಸ್ವಾರಸ್ಯಕರವಾಗಿ ಹೇಳಿದರು .
ಕುವೆಂಪು ಈ ಕಥೆಯನ್ನು ಅತ್ಯಂತ ಅದ್ಬುತವಾಗಿ ಒಡಮೂಡಿಸಿದ್ದಾರೆ ಎಂದು ಹೇಳುವ ಮೂಲಕ ಕತೆಯ ಸಾರಾಂಶವನ್ನು ಮಕ್ಕಳಿಗೆ ಮನವರಿಕೆ ಮಾಡಿಸಿದರು.

ಅತಿಥಿಗಳಾಗಿ ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ಮಾತನಾಡಿ, ಮಕ್ಕಳು ಒಳ್ಳೆಯ ಕತೆಗಳನ್ನು ಕೇಳಬೇಕು ಮತ್ತು ಓದಬೇಕು ಆಗ ಜ್ಞಾನವೃದ್ದಿಯಾಗುತ್ತದೆ ಎಂದರು..ಕತೆಯೆಂದರೆ ಹಾಗೇ ಹಸಿವು ಬಾಯಾರಿಕೆ ಮರೆತು ಮಕ್ಕಳು ಕೇಳಿದವು
ಅಳುತ್ತಿದ್ದ ಮಗು ಕತೆ ಕೇಳಿ ನಕ್ಕಿತು.

ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಜಿ.ಮಲ್ಲಿಕಾ ಬಸವರಾಜು ಮಾತನಾಡಿ, ನಮ್ಮ ಸಂಘಟನೆ ಇಂತಹ ಅಪರೂಪದ ಕಾರ್ಯಕ್ರಮವನ್ನು ಎಲ್ಲಾ ಶಾಲೆಗಳಲ್ಲಿ ಆಯೋಜಿಸಲು ಸಿದ್ದತೆ ಮಾಡಿಕೊಂಡು ಬರುತ್ತಿದೆ. ಇದು ನಾಲ್ಕನೇ ಕಾರ್ಯಕ್ರಮ. ಕೇಳು ಮಗುವೇ ಕತೆಯ ಸರಣಿ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಹೇಳಿದರು.

ಮಕ್ಕಳು ಕತೆಯನ್ನು ಗ್ರಹಿಸಿ ತಾವೂ ಹೇಳಿದರು.ಎಲ್ಲ ಮಕ್ಕಳಿಗೂ ಬಣ್ಣದ ಕ್ರಿಯಾನ್ ಹಾಗೂ ಬಿಸ್ಕತ್ ಹಂಚಲಾಯಿತು.

ಕಾಯ೯ಕ್ರಮದ ರೂವಾರಿ ಮಲ್ಲಿಕಾ ಬಸವರಾಜು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಭಾಗಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?