Saturday, April 20, 2024
Google search engine
Homeಜಸ್ಟ್ ನ್ಯೂಸ್ಕೊರೊನಾ-ಮೈಸೂರು, ತುಮಕೂರು ಒಂದಾ, ಬೆಳಗಾವಿ ಬೇರೇನಾ?

ಕೊರೊನಾ-ಮೈಸೂರು, ತುಮಕೂರು ಒಂದಾ, ಬೆಳಗಾವಿ ಬೇರೇನಾ?

Publicstory


ಬೆಂಗಳೂರು: ಕೊರೊನಾ ಪಾಸಿಟಿವ್ ಸಂಖ್ಯೆಯಲ್ಲಿ ತುಮಕೂರು, ಹಾಸನ, ಮೈಸೂರು ಜಿಲ್ಲೆ ಒಂದಾದರೆ ಬೆಳಗಾವಿ ಜಿಲ್ಲೆ ಬೇರೇನಾ ಎಂಬ ಅನುಮಾನ ಮೂಡತೊಡಗಿದೆ.

ಭೌಗೋಳಿಕವಾಗಿ ಬೆಳಗಾವಿ, ತುಮಕೂರಿಗಿಂತ ದುಪಟ್ಟು ಇದೆ. ಜನಸಂಖ್ಯೆಯಲ್ಲೂ ಅಷ್ಟೇ. ತುಮಕೂರು ಜಿಲ್ಲೆಯಲ್ಲಿ 27. ಲಕ್ಷ ಜನರಿದ್ದರೆ, ಬೆಳಗಾವಿಯಲ್ಲಿ 46 ಲಕ್ಷ ಜನರಿದ್ದಾರೆ. ಇಂಥ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ ಪ್ರತಿ ದಿನ 900 ಆಸು ಪಾಸಿನಲ್ಲಿರುವುದನ್ನು ಸರ್ಕಾರ ಗಮನಿಸಬೇಕಾಗಿದೆ.

ತುಮಕೂರಿನಲ್ಲಿ‌ ನಿನ್ನೆ 3040 ಸೋಂಕಿತರಿದ್ದರು. ಹಾಸನ 2040, ಮೈಸೂರು 2047 ಇತ್ತು.
ಜನಸಂಖ್ಯೆಯಲ್ಲಿ ಈ ಮೂರು ಜಿಲ್ಲೆಗಳಿಗಿಂತ ಹೆಚ್ಚಿರುವ ಬೆಳಗಾವಿಯಲ್ಲಿ ಮಾತ್ರ ಸೋಂಕಿತರು ಕಡಿಮೆಯಾಗಲು ಅಲ್ಲಿನ ಡಿಎಚ್ ಒ ಏನು ಕ್ರಮಗೊಂಡಿರಬಹುದು?

ತುಮಕೂರು, ಮೈಸೂರು, ಹಾಸನದಲ್ಲಿ ಯಾಕೆ ಇದು ಆಗುತ್ತಿಲ್ಲ. ಸೋಂಕು ನಿಯಂತ್ರಣದಲ್ಲಿ ಬೆಳಗಾವಿ ಡಿಎಚ್ ಒ ಸರಿಯಾಗಿ ಟೆಸ್ಟಿಂಗ್ ಮಾಡ್ತಾ ಇದ್ದಾರಾ, ಮಾಡಿಯೂ ಸೋಂಕು ನಿಯಂತ್ರಣದಲ್ಲಿದೆಯೇ? ಇಲ್ಲವೇ ತುಮಕೂರಿನವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರಾ, ಹೆಚ್ಚೆಚ್ಚು ಟೆಸ್ಟಿಂಗ್ ಮಾಡ್ತಾ ಇದ್ದಾರ ಎಂಬುದನ್ನು ಸರ್ಕಾರ ನೋಡಬೇಕಾಗಿದೆ.

ಬೆಳಗಾವಿ ಜಿಲ್ಲೆ ಮಹಾರಾಷ್ಟ್ರಕ್ಕೆ ಹತ್ತಿರವಿದೆ. ವಲಸೆ ಕಾರ್ಮಿಕರ ಸಂಖ್ಯೆಯೂ ಹೆಚ್ಚು. ಜನಸಂಖ್ಯೆಯೂ ಹೆಚ್ಚು. ಆದರೆ ಸೋಂಕು ಮಾತ್ರ ಕಡಿಮೆ.‌ಈ ಬಗ್ಗೆ ಗಮನ ಹರಿಸುವುದು ಒಳಿತು. ಒಂದು ವೇಳೆ, ಅಲ್ಲಿ ಸೋಂಕು ನಿಯಂತ್ರಿಸುವಲ್ಲಿ ಅಲ್ಲಿನ ಡಿಎಚ್ ಒ ಯಶಸ್ವಿಯಾಗಿದ್ದರೆ ಅದೇ ಮಾದರಿ ಈ ಜಿಲ್ಲೆಗಳಿಗೂ ಅಳವಡಿಸಿಕೊಳ್ಳಬಹುದಾಗಿದೆ.

ಮಹಾರಾಷ್ಟ್ರ ದ ಮುಂಬೈ ಮಹಾ‌ನಗರ ಪಾಲಿಕೆ ಸೋಂಕು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲಿನ ಮಾದರಿಯನ್ನೇ ಬೆಳಗಾವಿ ಜಿಲ್ಲೆಯಲ್ಲೂ ಅಲ್ಲಿನ ಆಡಳಿತ ಅನುಸರಿಸುತ್ತಿದೆಯೇ?

ತುಮಕೂರು, ಹಾಸನ, ಮೈಸೂರು ಡಿ ಎಚ್ ಒ ಅವರುಗಳು ಚೆನ್ನಾಗಿ ಕೆಲಸ ಮಾಡುತ್ತಾ ಸೋಂಕು ಪತ್ತೆ ಹಚ್ಚುವಲ್ಲಿ ಮುಂದಿದ್ದಾರಾ? ಇಲ್ಲವೇ ಬೆಳಗಾವಿಯವರು ಚೆನ್ನಾಗಿ ಕೆಲಸ ಮಾಡುತ್ತಾ ಸೋಂಕು ನಿಯಂತ್ರಣ ಮಾಡಿದ್ದಾರ ನೋಡಿಕೊಂಡು ಗೆಲುವಿನ ಕಿರೀಟ ಕೊಡಬೇಕಾಗಿದೆ.

ಟೆಸ್ಟಿಂಗ್ ಮಾರ್ಗದರ್ಶಿ ಸೂತ್ರ ಬದಲು: ಈ ಹಿಂದೆ ಇದ್ದ ರ್ಯಾಂಡಮ್ ಪರೀಕ್ಷೆಯನ್ನು ಸರ್ಕಾರ ಕೈ ಬಿಟ್ಟು ಹೊಸ ಆದೇಶ ಹೊರಡಿಸಿದೆ. ಕೊರೊನಾ ಲಕ್ಷಣ ರಹಿತರನ್ನು (A Symatamatic) ಕೊರೊನಾ ಪರೀಕ್ಷೆ ಮಾಡುವಂತಿಲ್ಲ.

ಈ ರೀತಿಯ asymptomatic testing ನಿಲ್ಲಿಸಿದಾಗ ಪಾಸಿಟಿವ್ ಬರುವ ಸಂಖ್ಯೆ ಕಡಿಮೆ ಆಗುತ್ತದೆ. ಆಗ ಪಾಸಿಟಿವ್ ಸಂಖ್ಯೆ ಕಡಿಮೆ ಆಗುತ್ತದೆ ಎಂದು ಜನರು ಅಸಡ್ಡೆ ಮಾಡಬಾರದು.ಇದು ನಮ್ಮ ಕಳಕಳಿ.ಆರೋಗ್ಯ ಇಲಾಖೆ ಕೂಡ ಈ ವಿಷಯವನ್ನು ಕೂಲಂಕುಷ ವಾಗಿ ಪರಿಶೀಲಿಸಬೇಕು.ಹಿಂದೆ ಜನರು ಟೆಸ್ಟ್ ಮಾಡಿಸಿಕೊಳ್ಳಲು ನಿರಾಕರಿಸುತ್ತಾ ಇದ್ದರು.ಈಗ ಅವರೇ ಮುಂದೆ ಬಂದು ಕ್ಯೂ ನಿಲ್ಲುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?