Friday, March 29, 2024
Google search engine
Homeತುಮಕೂರು ಲೈವ್ಕೊಳೆಗೇರಿಗಳ ಜನರ‌‌‌ ಕೈ ಹಿಡಿದ ಮಾಜಿ ಶಾಸಕ ರಫೀಕ್

ಕೊಳೆಗೇರಿಗಳ ಜನರ‌‌‌ ಕೈ ಹಿಡಿದ ಮಾಜಿ ಶಾಸಕ ರಫೀಕ್

Publicstory. in


ತುಮಕೂರು: ನಗರದ ವಿವಿಧ ಸ್ಲಂ ಗಳಲ್ಲಿ ವಾಸವಾಗಿರುವ ಪಡಿತರ ಕಾರ್ಡುರಹಿತ ಸುಮಾರು 120 ಕುಟುಂಬಗಳಿಗೆ ಮಾಜಿ ಶಾಸಕ ಡಾ.ರಫೀಕ್ ಅಹಮದ್ ದಿನಸಿ ಕಿಟ್ ಗಳನ್ನು ವಿತರಿಸಿದರು.

ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಮನವಿ ಮೇರೆಗೆ ತಮ್ಮ ಗೃಹ ಕಚೇರಿಯಲ್ಲಿ ಬನಶಂಕರಿಯ ಹಂದಿಜೋಗಿ ಕಾಲೋನಿ, ದಿಬ್ಬೂರು ದೇವರಾಜ ಅರಸು ಬಡಾವಣೆ, ಮರಿಯಮ್ಮ ನಗರ, ಎಸ್.ಎನ್.ಪಾಳ್ಯ, ಡಿ.ಎಂ.ಪಾಳ್ಯ, ನಾಗಣ್ಣನ ಪಾಳ್ಯ, ಹರಳಿಮರದ ಪಾಳ್ಯ,ನಿರ್ವಾಣಿ ಲೇಔಟ್, ಅಂಬೇಡ್ಕರ್ ನಗರ, ಎನ್.ಆರ್.ಕಾಲೋನಿ ಹಾಗೂ ಶಿರಾಗೇಟ್ ನಲ್ಲಿ ವಾಸವಾಗಿರುವ ಸುಮಾರು 120 ಕುಟುಂಬಗಳಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ನೀಡುವ ಮೂಲಕ ಬಡವರಿಗೆ ನೆರವಾದರು.

ಸಾಂಕೇತಿಕವಾಗಿ ಕೊಳಗೇರಿ ನಿವಾಸಿಗಳಿಗೆ ಪುಡ್ ಕಿಟ್ ವಿತರಿಸಿ ಮಾತನಾಡಿದ ಮಾಜಿ ಶಾಸಕ ಡಾ.ರಫೀಕ್ ಅಹಮದ್, ತುಮಕೂರು ಜಿಲ್ಲೆಯಲ್ಲಿ ಇದುವರೆಗೂ 11 ಕೋರೋನ ಕೇಸ್‍ಗಳಿದ್ದು,ಎರಡು ಏರಿಯಾಗಳನ್ನು ಸೀಲ್‍ಡೌನ್ ಮಾಡಲಾಗಿದೆ.

ಕೋವಿಡ್ -19 ನಿಂದ ಜನರು ಸಾಕಷ್ಟು ತೊಂದರೆಗೆ ಒಳಗಾಗಿದ್ದು, ಅವರಿಗೆ ನೆರವಾಗುವ ಉದ್ದೇಶದಿಂದ ಪುಡ್ ಕಿಟ್‍ಗಳನ್ನು ವಿತರಿಸಲಾಗುತ್ತಿದೆ.ಇದು ನನ್ನ ಅಳಿಲು ಸೇವೆ.ಮುಂದೆಯೂ ಕೂಡ ನಿಮ್ಮೊಂದಿಗೆ ನಾನು ಇರಲಿದ್ದೇನೆ. ನಿಮ್ಮ ಕಷ್ಟ ಸುಖಃಗಳಿಗೆ ಸ್ಪಂದಿಸಿ ಕೆಲಸ ಮಾಡುತೇನೆ ಎಂದು ಭರವಸೆ ನೀಡಿದರು.

ರೋಗದಿಂದ ಮುಕ್ತರಾಗಬೇಕೆಂದರೆ ಮನೆಯಲ್ಲಿಯೇ ಇರುವುದು, ಶುಚಿತ್ವದಿಂದ ಇರುವುದೇ ಆಗಿದೆ. ಲಾಕ್‍ಡೌನ್, ಸೀಲ್ ಡೌನ್ ನಿಂದ ಕೂಲಿ ನಾಲಿ ಮಾಡಿ ಬದುಕುತಿದ್ದ ಜನರಿಗೆ ಸಂಕಷ್ಟ ಎದುರಾಗಿದೆ ಎಂದರು.

ಜನರು ಅನಾವಶ್ಯಕವಾಗಿ ಓಡಾಡದೆ, ಮನೆಯಲ್ಲಿಯೇ ಇದ್ದು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಜನರಲ್ಲಿ ಡಾ.ರಫೀಕ್ ಅಹಮದ್ ಮನವಿ ಮಾಡಿದರು.

ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ ಮಾತನಾಡಿ, ಸ್ಲಂಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರಫಿಕ್ ಶ್ರಮಿಸಿದ್ದಾರೆ. ನಮ್ಮ ಮನವಿಗೆ ಸ್ಪಂದಿಸಿ, ಇಂದು ಪುಡ್ ಕಿಟ್ ನೀಡುವ ಮೂಲಕ ಬಡವರಿಗೆ ನೆರವಾಗಿದ್ದಾರೆ.ಇದಕ್ಕಾಗಿ ಅವರಿಗೆ ಹೃಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?