Tumkur: ನಿರ್ದೇಶಕ ರಮಾನಂದ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಗುಲಾಮಗಿರಿ ಚಿತ್ರದ ಮುಹೂರ್ತ ತುಮಕೂರಿನಲ್ಲಿ ಅದ್ದೂರಿಯಾಗಿ ನಡೆಯಿತು.
ನಟ ಮತ್ತು ನಿರ್ಮಾಪಕ ರೂಪೇಶ್ ಜೆ ರಾಜ್ ನೂತನ ಚಿತ್ರಕ್ಕೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ಹೊಸ ಚಿತ್ರ ಗುಲಾಮಗಿರಿ ಮುಹೂರ್ತಕ್ಕೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಶುಭ ಹಾರೈಸಿದರು.
ಕಲ್ಪತರು ಅಭಿನಯ ತರಬೇತಿ ಶಾಲೆಯ ತಂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದೆ. ಎಲ್ಲರೂ ಹೊಸಬರೇ ಆಗಿದ್ದು ಚಿತ್ರ ತುಮಕೂರು ಸೇರಿದಂತೆ ರಾಜ್ಯದ ಹಲವಡೆ ಚಿತ್ರೀಕರಿಸಲು ತಂಡ ನಿರ್ಧರಿಸಿದೆ.
ಚಿತ್ರದ ಮುಹೂರ್ತ ಸಮಾರಂಭದಲ್ಲಿ ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ವಾಲೆ ಚಂದ್ರಯ್ಯ, ಸಾಮಾಜಿಕ ಹೋರಾಟಗಾರ ಮತ್ತು ನಟ ಚೇತನ್, ಅಹಿಂಸಾ ಆನಂದ್ ಬಂತೇಜ, ಉಪನ್ಯಾಸಕ ಹ.ರಾ. ಮಹಿಷ, ಮೊದಲಾದವರು ಹಾಜರಿದ್ದು ಚಿತ್ರಕ್ಕೆ ಶುಭಕೋರಿದರು.
Comment here