ತುಮಕೂರು ಲೈವ್

ಚಿ.ನಾ.ಹಳ್ಳಿ: ಉಸ್ತುವಾರಿ ಎದುರೇ ಸಭೆ ಬಹಿಷ್ಕರಿಸಿ ಹೊರ ನಡೆದರು….

ಚಿಕ್ಕನಾಯಕನಹಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ‌ ಅಧ್ಯಕ್ಷೆತೆಯಲ್ಲಿ ನಡೆದ ಕೆಡಿಪಿ ಸಭೆ ಕೂಗಾಟಕ್ಕೆ ಸಾಕ್ಷಿಯಾಯಿತು.

ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಸದಸ್ಯರು ಹರಿ ಹಾಯ್ದರು.

ತಾಲ್ಲೂಕು ಪಂಚಾಯಿತಿ ಇಓಗೆ ಜಿಲ್ಲಾ ಪಂಚಾಯಿತಿ ಸದಸ್ಯರ ಹೆಸರೇ ಗೊತ್ತಿಲ್ಲ ಕನಿಷ್ಠ ಗೌರವ ನೀಡುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಕೆಡಿಪಿ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದ ಘಟನೆ ತಿ ನಂ ಶ್ರೀ ಭವನದಲ್ಲಿ ನಡೆಯಿತು .

ಜೆಡಿಎಸ್ ಎನ್. ಕಲ್ಲೇಶ್ ರಾಮಚಂದ್ರ ಹಾಗೂ ಕಾಂಗ್ರೆಸ್‌ನ ವೈ. ಸಿ ಸಿದ್ದರಾಮಯ್ಯ ಯಾವುದೇ ಸರ್ಕಾರಿ ಕಾರ್ಯಕ್ರಮಗಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಆಹ್ವಾನ ನೀಡುವುದಿಲ್ಲ ಇಒಗೆ ಜಿಲ್ಲಾ ಪಂ. ಸದಸ್ಯರ ಹೆಸರೇ ಗೊತ್ತಿಲ್ಲ ಎಂದು ಕಿಡಿಕಾರಿದರು.

ತಾಲೂಕಿನಲ್ಲಿ ಆಡಳಿತ ಹೇಗೆ ನಡೆಸುತ್ತೀರಿ? ಅಧಿಕಾರಿಗಳು ಬೇಜವಾಬ್ದಾರಿ ಇಲ್ಲದೆ ವರ್ತಿಸುತ್ತಿದ್ದಾರೆ. ಕೆಡಿಪಿ ಬುಕ್ಲೆಟ್ ನೀಡುವುದನ್ನು ತಡಮಾಡುತ್ತಾರೆ ಎಂದು ಸಭೆಯಿಂದ ಹೊರ ನಡೆದರು.

ಮುಂದೆ ಹೀಗಾಗದಂತೆ ಕ್ರಮ ವಹಿಸುವಂತೆ ಸಚಿವರು ಇಒ ಗೆ ಸೂಚಿಸಿದರು

Comment here