Thursday, March 28, 2024
Google search engine
Homeತುಮಕೂರ್ ಲೈವ್ಚೆಲ್ಲಾಪಿಲ್ಲಿಯಾದ ಕಡತಗಳು-ಡಿಎಫ್ಓಗೆ ಶಾಸಕ ಗೌರಿ ಶಂಕರ್ ಕ್ಲಾಸ್

ಚೆಲ್ಲಾಪಿಲ್ಲಿಯಾದ ಕಡತಗಳು-ಡಿಎಫ್ಓಗೆ ಶಾಸಕ ಗೌರಿ ಶಂಕರ್ ಕ್ಲಾಸ್

ತುಮಕೂರು: ತುಮಕೂರು-ನಗರದ ರಾಮಕೃಷ್ಣ ನಗರದಲ್ಲಿರುವ ಡಿ.ಎಫ್.ಓ ಕಚೇರಿಯ ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಡತಗಳನ್ನ ಕಂಡು ಶಾಸಕ ಗೌರಿಶಂಕರ ಅಕ್ಷರಶಃ ಕೆಂಡಾಮಂಡಲವಾಗಿದ್ದಾರೆ.

ಡಿಎಫ್ಓ ಕಚೇರಿಯ ನೆಲ ಮಹಡಿ, ಮೊದಲ ಮಹಡಿಯ ಎಲ್ಲೆಂದರಲ್ಲಿ ಕಡತಗಳನ್ನ ಮೂಟೆ ಕಟ್ಟಿ ಇಡಲಾಗಿದೆ. ಸಾರ್ವಜನಿಕರು ಓಡಾಡುವ ಸಾರಿಯಲ್ಲೂ ಫೈಲ್ ಗಳನ್ನ ಇಡಲಾಗಿದೆ. ಈ ಅವ್ಯವಸ್ಥೆ ಕಂಡೆ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ ಸಿಟ್ಟು ನೆತ್ತಿಗೇರಿ ಹೋಗಿತ್ತು.

ನರಭಕ್ಷಕ ಚಿರತೆಯನ್ನ ಸೆರೆ ಹಿಡಿಯುವಂತೆ ಪ್ರತಿಭಟಿಸಲು ಹೋಗಿದ್ದ ಶಾಸಕರು ತಾವು ಭೇಟಿ ನೀಡಿದ ವಿಚಾರವನ್ನೇ ಮರೆತು ಕಡತಗಳ ಅವ್ತವಸ್ಥೆ ಕಂಡು ಹರಿಹಾಯ್ದರು. ಅಷ್ಟರಮಟ್ಟಿಗೆ ಫೈಲನ್ನ ಎಲ್ಲೆಂದರಲ್ಲಿ ಎಸೆಯಲಾಗಿತ್ತು.
ಯಾಕ್ರಿ ಹೀಗೆ ಇಟ್ಟಿದ್ರಾ…ಫೈಲ್ ಗಳನ್ನ.. ಇದು ಸರಿ ಏನ್ರಿ….ನೀಟಾಗಿ ಇಟ್ಕೊಳ್ಳೋಕೆ ಆಗಲೇನ್ರಿ. ಎಲ್ಲಾ ಫೈಲ್ ಗಳ ಇದಾವೇನ್ರಿ..ಹಿಂಗಿಟ್ರೆ ಮಿಸ್ ಆಗಲೇನ್ರಿ.. ನಮ್ಮ ಕ್ಷೇತ್ರದ ೧೯೬೫ ಇಸ್ವಿ ಫೈಲ್ ತೋರಿಸ್ರಿ..ಎಂದು‌ ಡಿ.ಎಫ್.ಓ ಗಿರೀಶ್ ಗೆ ತರಾಟೆ ತೆಗೆದುಕೊಂಡರು.
ಶಾಸಕರ ತರಾಟೆಯಿಂದ ಕಕ್ಕಾಬಿಕ್ಕಿಯಾದ ಡಿಎಫ್.ಓ ಗಿರೀಶ್
ಇಲ್ಲ ಸಾರ್ ಸರಿ ಮಾಡ್ತಿವಿ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?