ತುಮಕೂರು ಲೈವ್

ತುಮಕೂರು: ರೌಡಿಶೀಟರ್ ಹುಚ್ಚ ಮಂಜನ ಇರಿದುಕೊಂದ ರೌಡಿಗಳು

ತುಮಕೂರು: ಮಾಜಿ ಮೇಯರ್ ಗಡ್ಡ ರವಿಕುಮಾರ್ ಕೊಲೆ ಆರೋಪದಲ್ಲಿ ಸಾಕ್ಷಿ ದಾರ ನಾಗಿದ್ದ ಮತ್ತೊಬ್ಬ ರೌಡಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ನಗರದ ಬಟವಾಡಿಯಲ್ಲಿ ಘಟನೆ ನಡೆದಿದ್ದು, ನಿನ್ನೆ ರಾತ್ರಿ ಬಾರ್ ನಲ್ಲಿ ಕುಡಿಯಲು ಹೋಗಿದ್ದ ಮಂಜುನಾಥ್ ಅಲಿಯಾಸ್ ಹುಚ್ಚ ಮಂಜ ಎಂದು ಗುರುತಿಸಲಾಗಿದೆ.

ಅಟೋ ಚಾಲಕನಾಗಿದ್ದ ಈತನ ಮೇಲೆ ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

ಬಾರಿನಲ್ಲಿ ಕುಡಿದು ಈಚೆ ಬಂದ ಇವನನ್ನು ಮತ್ತೊಂದು ರೌಡಿ ಗುಂಪಿನವರು ಚಾಕುವಿನಿಂದ ಇರಿದಿದ್ದಾರೆ.

ಗಾಯಗೊಂಡ ಈತನನ್ನು ವಿನಾಯಕ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ತುಮಕೂರಿನಲ್ಲಿ ರೌಡಿ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆರೋಪಿಗಳ ಹುಟುಕಾಟ ನಡೆಸಿದ್ದಾರೆ.

Comment here