Tuesday, April 16, 2024
Google search engine
Homeಜಸ್ಟ್ ನ್ಯೂಸ್ತುಮಕೂರು ಶಂಕರಮಠ ದೋಚಿದ ಕಳ್ಳರು

ತುಮಕೂರು ಶಂಕರಮಠ ದೋಚಿದ ಕಳ್ಳರು

Publicstory


ತುಮಕೂರು : ನಗರದ ಜನನಿಬಿಡ ರಸ್ತೆ ಬಸ್ ರಸ್ತೆಗೆ ತಾಗಿಕೊಂಡಂತಿರುವ ಶಂಕರಮಠದಲ್ಲಿ ಕಳ್ಳತನ ನಡೆದಿದೆ.
ಶಂಕರಮಠದ ನಡೆಯುವ ಕಳ್ಳತನ ಇಂದು ಬೆಳಿಗ್ಗೆ ಬೆಳಕಿಗೆ ಬಂದಿತ್ತು ಜನರನ್ನು ಭಯಭೀತರನ್ನಾಗಿಸಿದೆ.
ಯಾವಾಗಲೂ ರಸ್ತೆಯಲ್ಲಿ ವಾಹನ ಸಂಚಾರ ಇದ್ದರೂ ಕೂಡ ಕಳ್ಳರು ತಮ್ಮ ಕೈಚಳಕ ತೋರಿಸಿರುವುದು ಅಚ್ಚರಿಯಾಗಿದೆ.
ಮಠಕ್ಕೆ ನುಗ್ಗಿರುವ ಕಳ್ಳರು ಮಠದ ಹುಂಡಿಯನ್ನು ಒಡೆದು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ.

ಕಳ್ಳತನಕ್ಕೂ ಮುನ್ನ ದೇವಸ್ಥಾನದ ಪಕ್ಕದಲ್ಲಿರುವ ಅರ್ಚಕರ ಮನೆಯ ಬಾಗಿಲಿಗೆ ಬೀಗ ಹಾಕಿರುವ ಕಳ್ಳರು ನಂತರ ದೇವಸ್ಥಾನದ ಬಾಗಿಲು ಒಡೆದು ಕಳ್ಳತನ ಎಸಗಿ ಪರಾರಿಯಾಗಿದ್ದಾರೆ.

ಮುಂಜಾನೆ 5ಗಂಟೆಗೆ ಎಂದಿನಂತೆ ಬಾಗಿಲು ತೆರೆದು ಎದ್ದು ಅರ್ಚಕರು ನೋಡಿ ಮಠದ ವ್ಯವಸ್ಥಾಪಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ನಂತರ ಭದ್ರತಾ ಸಿಬ್ಬಂದಿ ಬಂದು ಅರ್ಚಕರ ಮನೆ ಬಾಗಿಲು ತೆಗೆದಿದ್ದಾರೆ.
ಆ ನಂತರ ದೇವಸ್ಥಾನಕ್ಕೆ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಕೂಡಲೇ ಎನ್ ಇಪಿಎಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಶ್ವಾನದಳ ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಸಿದ್ದಾರೆ.
ಸಿದ್ದರಾಮೇಶ್ವರ ಬಡಾವಣೆ ಒಂದೇ ದಿನ 7ಮನೆಗಳ ಕಳ್ಳತನ ನಡೆದ ಬೆನ್ನಲ್ಲೇ ಈ ಘಟನೆ ನಗರದ ಜನರನ್ನು ಭಯಭೀತರನ್ನಾಗಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?