Thursday, April 18, 2024
Google search engine
Homeಜಸ್ಟ್ ನ್ಯೂಸ್ದಿನ ಭವಿಷ್ಯ

ದಿನ ಭವಿಷ್ಯ

ಪಂಚಾಂಗ:ದಿನಾಂಕ 22/ 4 /2020,  ಬುಧವಾರ , ಶ್ರೀ ಶಾರ್ವರಿ ನಾಮ ಸಂವತ್ಸರ ,ಚೈತ್ರ ಮಾಸ, ಉತ್ತರಾಯಣ, ವಸಂತಋತು, ಕೃಷ್ಣಪಕ್ಷ ಅಮಾವಾಸ್ಯೆ ತಿಥಿ , ರೇವತಿ ನಕ್ಷತ್ರ ಹಾಗೂ ಅಶ್ವಿನಿ ನಕ್ಷತ್ರ, ಯೋಗ:-   ವಿಷ್ಕಂಭ ಮತ್ತು  ಪ್ರೀತಿ ಕರಣ:- ಚತುಷ್ಪಾದ ಮತ್ತು ನಾಗವ ,ಮಳೆ ನಕ್ಷತ್ರ:- ಅಶ್ವಿನಿ, ದಿಕ್ಕು ಶೂಲೆ:- ಉತ್ತರ, ಪರಿಹಾರ:- ಹಾಲು,ರಾಜಯೋಗ :-ಇಲ್ಲ.

ರಾಹುಕಾಲ:-12:19pm to 1:53pm, ಗುಳಿಕಕಾಲ:-10:46am to 12:19pm,ಯಮಗಂಡಕಾಲ:-07:40am to 09:13amಸೂರ್ಯೋದಯ:-6:07am,ಸೂರ್ಯ ಅಸ್ತ:-6:32pm.

ರಾಶಿ ಭವಿಷ್ಯ

ಮೇಷ ರಾಶಿ :

ಈ ದಿನ ಸಾಯಂಕಾಲದಿಂದ  ಸಮಸ್ಯೆಗಳು  ಒಂದೊಂದಾಗಿ ಪರಿಹಾರ ಆಗುತ್ತವೆ  ಆದರೂ ಅಲ್ಲಿಯವರೆಗೂ ಸಮಸ್ಯೆಗಳು  ಮುಂದುವರೆಯುತ್ತೇವೆ. ವಾಹನ, ಜಮೀನಿನ ಆರ್ಥಿಕ ಚಟುವಟಿಕೆಗಳು ನಷ್ಟವನ್ನು ತರುತ್ತವೆ, ಮಿತ್ರರಿಂದ ಇತರ ಸಹಾಯಕರಿಂದ ಈ ದಿನ ಸಾಯಂಕಾಲದವರೆಗೂ ಅಷ್ಟೇನೂ ಅನುಕೂಲವಾಗುವುದಿಲ್ಲ, ನೀವು ಮಾಡುತ್ತಿರುವ ವೃತ್ತಿಯಲ್ಲಿ ಸಮಸ್ಯೆ ಕಂಡುಬರುವ ಅವಕಾಶ ಇದೆ.

ವೃಷಭ ರಾಶಿ

ಸಮಸ್ಯೆಗೆ  ಸ್ವಲ್ಪ ಸ್ವಲ್ಪ ಮಿತ್ರರಿಂದ, ನೆರೆಹೊರೆಯವರಿಂದ  ಸಹಾಯ ಸಹಕಾರ ಪಡೆದಿದ್ದೀರಿ, ಸಂಪಾದನೆ ವಿಚಾರದಲ್ಲಿ ಲಾಭ ಸಿಗುತ್ತದೆ, ಮಾಡುವ ಕೆಲಸಗಳು ಯಶಸ್ಸು ಪಡೆಯುತ್ತವೆ , ಆದರೆ ಸಾಯಂಕಾಲದಿಂದ ಅನಾರೋಗ್ಯ, ಭಯ, ಖರ್ಚು ತೊಂದರೆ ಹೆಚ್ಚಾಗಬಹುದು.

ಮಿಥುನ ರಾಶಿ

ಈ ದಿನ ನೀವು ಮಾಡುವ  ಕೆಲಸಗಳಲ್ಲಿ ಯಶಸ್ಸು ಕಾಣುವ ಸಮಯ, ಈ ದಿನ ಶ್ರಮ  ಸ್ವಲ್ಪ  ಲಾಭ ಆಗಬಹುದು,  ಕುಟುಂಬ, ವಾಹನ, ತಾಯಿ ವಿಷಯದಲ್ಲಿ ಸಾಯಂಕಾಲದಿಂದ  ತೊಂದರೆ ಕಾಣಬಹುದು.

ಕಟಕ ರಾಶಿ

ನಿಮಗೆ ಇದ್ದ  ಉಷ್ಣದ ಬಾದೆ  ಹಾಗೂ ಇತರೆ  ತೊಂದರೆ ಕಡಿಮೆಯಾಗಿ ಸಮಸ್ಯೆ ಪರಿಹಾರವಾಗುವ ಅವಕಾಶವಿದೆ ,ಈ ದಿನ ಬೆಳಿಗ್ಗೆ ಸ್ವಲ್ಪ ಕಷ್ಟವಾದರೂ ಸಾಯಂಕಾಲದಿಂದ ಪುನಃ ಚೇತರಿಸಿ ಕೊಳ್ಳುತ್ತೀರಿ. 

ಸಿಂಹ ರಾಶಿ

ಈ ದಿನ 25% ಫಲ ಪಡೆಯುವ ಅವಕಾಶ ಇದೆ, ಇನ್ನುಳಿದಂತೆ ಕೆಲವು ಸಮಸ್ಯೆಗಳು ಹಾಗೆ ಮುಂದುವರೆಯುತ್ತವೆ  , ಸಂತಾನದಿಂದ ಕಿರಿಕಿರಿ ಯಾಗಲಿ ಅಥವಾ ಅನಾರೋಗ್ಯ ವಾಗಲಿ , ಅಥವಾ  ಮಾನಸಿಕ ಕಿರಿಕಿರಿ ಇಲ್ಲವೇ ಭಯದಿಂದ ಉದ್ವೇಗಕ್ಕೆ ಒಳಗಾಗುವ ಎಲ್ಲಾ ಅವಕಾಶಗಳು ಗೋಚರವಾಗುತ್ತವೆ.

ಕನ್ಯಾ ರಾಶಿ

ಈ ದಿನ ದಿಂದ  ತಲೆ ಬಿಸಿ ಹೆಚ್ಚಾಗುವ  ಅವಕಾಶವಿದೆ , ಸಾಯಂಕಾಲದಿಂದ ತಾಯಿ ,ವಾಹನ, ಜಮೀನಿನ ಕಿರಿಕಿರಿ ನಿಮಗೆ ಅನಾರೋಗ್ಯ ಅಥವಾ ಅಸಮಾಧಾನ ಉಂಟು ಮಾಡುವ ಸಂಭವ ಇದೆ , ಅದೇ ರೀತಿ ವಾಹನದ ಅಪಘಾತ ಭಯವೂ ಇದೆ ,ವಿದ್ಯುತ್ ಆಗಾತ ವಾಗಲಿ ಅಥವಾ ಸರ್ಪದ ವಿಷ ಭಯವಾಗಲಿ ಕಾಡುವ ಸಂಭವ ಇದೆ ,ಎಚ್ಚರಿಕೆ ಅಗತ್ಯ.

ತುಲಾ ರಾಶಿ

ಈ ದಿನ  ಶುಭ ಫಲಗಳು ಬರುತ್ತವೆ, ಆಕಸ್ಮಿಕವಾಗಿ ಅನುಕೂಲಗಳು ಆಗಬಹುದು ,ಲಾಭ ಆಗಬಹುದು, ಆನಂದ ಸಿಗಬಹುದು, ನಿಮ್ಮ ನಿರೀಕ್ಷೆಯಷ್ಟು ಲಾಭ ಬರಬಹುದಾದ ಲಕ್ಷಣಗಳು ಇರುವುದರಿಂದ ಬೇಸರ ದೂರವಾಗುತ್ತದೆ, ಆದ್ದರಿಂದ ಮನೆಯವರೊಂದಿಗೆ ಸಂತೋಷವಾಗಿ ಕಾಲ ಕಳೆಯುವ ಅವಕಾಶಗಳು ಇದೆ.

ವೃಶ್ಚಿಕ ರಾಶಿ 

ಈ ದಿನ  ಹಣದ ಸಮಸ್ಯೆ ಮನಸ್ಸಿಗೆ ಬೇಸರ ಕಾಡುವ ಅವಕಾಶವಿದೆ, ಅಂದುಕೊಂಡ ಕಾರ್ಯಗಳು ಪೂರ್ಣಪ್ರಮಾಣದಲ್ಲಿ ಸಫಲವಾಗದೇ  ಊಟ ಹಾಗೂ ಮಾತಿನ ವಿಚಾರದಲ್ಲಿ ಲಯ ತಪ್ಪುತ್ತದೆ.

ಈ ದಿನ   ನಿಮಗೆ  ಯಾರಾದರೂ   ಬೇಸರ ಬರುವಂತೆ ಮಾತನಾಡುವ  ಅವಕಾಶವಿದೆ,  ಆದರೂ ಮಧ್ಯಾಹ್ನದವರೆಗೂ ಶುಭ  ಫಲಗಳನ್ನು  ಪಡೆಯುವ ಅವಕಾಶ ಇದೆ ,ಸಂಜೆ ಸ್ವಲ್ಪ ಶರೀರದ ಉಷ್ಣಾಂಶ  ಹೆಚ್ಚಾಗಬಹುದು. 

ಮಕರ ರಾಶಿ

ಈ ದಿನ ಕೆಲವು ವಿಷಯಗಳು ತಲೆ ಕೆಟ್ಟಂತೆ ಮಾಡುತ್ತವೆ ,ಎಲ್ಲಾ ಕಡೆ ಅಶಾಂತಿಯಾಗಲೀ, ಅವಮಾನವಾಗಲಿ ಆಗಬಹುದು, ರಾತ್ರಿಗೆ ನಿದ್ದೆ ಸಮಸ್ಯೆ ಉಂಟಾಗುವ ಅವಕಾಶ ಇದೆ.

ಕುಂಭ ರಾಶಿ

ಈ ದಿನ ನಿಮಗೆ ಬೇರೆಯವರ ,ಮಿತ್ರರ ಕುಟುಂಬಸ್ಥರ  ಸಹಾಯ   ದೊರೆಯುತ್ತದೆ ,ಸಾಡೆಸಾತಿ ಶನಿ, ತೊಂದರೆ ಕಡಿಮೆಯಾಗಿ ಶತ್ರು ಬಾದೆ, ರೋಗಬಾಧೆ ,ಸಾಲದ ಬಾದೆ ಬಗೆಹರಿಯುವ ಅವಕಾಶ ಇದೆ ,ಆಕಸ್ಮಿಕ ಅನುಕೂಲಗಳು ಆಗುತ್ತವೆ.

ಮೀನ ರಾಶಿ

ಈ ದಿನ  ಸ್ವಲ್ಪ ತಲೆನೋವು  ಕಾಡಬಹುದು  ,ಮಾಡುವ  ಕೆಲಸ ಕಾರ್ಯಗಳಲ್ಲಿ ತೊಂದರೆಗಳು ಉಂಟಾಗಬಹುದು , ವಾಹನ  ,ಮನೆ  ಸಮಸ್ಯೆಗಳು   ಹೆಚ್ಚಾಗುವ ಅವಕಾಶ ಇದೆ. ಶಾಂತಿ:- ಈ ದಿನ “ತುಳಸಿ ಪೂಜೆ” ಮಾಡುವುದು ಹಾಗೂ ವಿಷ್ಣುವಿಗೆ ನಮಸ್ಕಾರ ಮಾಡಿಕೊಳ್ಳುವುದು ಉತ್ತಮ,” ಓಂ   ಬುದಾಯ ನಮಃ” ಅಥವಾ” ಓಂ ವಿಷ್ಣವೇ ನಮಃ “ಈ ಮಂತ್ರ ಗಳನ್ನು 108 ಬಾರಿ ಪಠಿಸುವುದು ಉತ್ತಮ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?