Friday, March 29, 2024
Google search engine
Homeತುಮಕೂರು ಲೈವ್ನನ್ನನ್ನು ಉಪಯೋಗಿಸಿಕೊಳ್ಳಿ- ಶಾಸಕ ಗೌರಿಶಂಕರ್

ನನ್ನನ್ನು ಉಪಯೋಗಿಸಿಕೊಳ್ಳಿ- ಶಾಸಕ ಗೌರಿಶಂಕರ್

ಹೆತ್ತೇನಹಳ್ಳಿ ಮಂಜುನಾಥ್


ತುಮಕೂರು ಗ್ರಾಮಾಂತರ: ಸಿಂಗನಹಳ್ಳಿ ಕಾಲೋನಿಯಲ್ಲಿ ಪಡಿತರ ಕಿಟ್ ವಿತರಿಸುತ್ತಾ, ಇಂದು ಇಡೀ ವಿಶ್ವವೇ ಕೊರೋನಾ ಮಾರಿಗೆ ತಲ್ಲಣಿಸಿದೆ. ಇಂತಹ ಪ್ರಕ್ಷುಬ್ಧ ಸ್ಥಿತಿಯಲ್ಲಿ ಪಕ್ಷಬೇಧ ಮರೆತು ಎಲ್ಲರೂ ಒಂದಾಗಿ ಕೊರೋನಾ ವಿರುದ್ಧ ಹೋರಾಡಬೇಕಿದೆ ಎಂದು ಶಾಸಕ‌ ಗೌರಿಶಂಕರ್ ತಿಳಿಸಿದರು.

ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಸ್ವೀಕರಿಸಿ ಈ ಕ್ಷೇತ್ರದ ಜನಗಳ ಜವಬ್ದಾರಿ ನನ್ನದು ಎಂದರು.

ನಿನ್ನೆ ಸುಮಾರು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕುಟುಂಬಗಳಿಗೆ ದಿನಸಿ & ಗೃಹಪಯೋಗಿ ಪಧಾರ್ಥಗಳನ್ನು ಮನೆ ಬಾಗಿಲಿಗೆ ತಲುಪಿಸೋ ವ್ಯವಸ್ಥೆಗೆ ಮಾಜಿ ಪ್ರಧಾನಿ ದೇವೇಗೌಡರು ಚಾಲನೆ ನೀಡಿದರು.

1 ಲಕ್ಷ ಮಾಸ್ಕ್, 50000 ಕುಟುಂಬಗಳಿಗೆ ತಿಂಗಳಿಗಾಗುವಷ್ಟು ಪಡಿತರ ವಿತರಣೆ, ಹಣ್ಣು , ತರಕಾರಿಗಳನ್ನು ಭಾನುವಾರದೊಳಗೆ ಪ್ರತಿ ಮನೆಗೂ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ದಿನವೊಂದಕ್ಕೆ 5000 ಕಿಟ್ ಗಳನ್ನು ಮಾಡಬಹುದಾಗಿದೆ, ಆಹಾರ ಪದಾರ್ಥಗಳು ಸಿಗುತ್ತಿಲ್ಲಾ. ನನ್ನ ಕ್ಷೇತ್ರಕ್ಕೆ 300 ಟನ್ ಅಕ್ಕಿ ಬೇಕು. ಪ್ರತಿದಿನ 25-30 ಟನ್ ಎಲ್ಲೆಲ್ಲಿಂದ ಸಾಧ್ಯವೋ ಅಲ್ಲಲ್ಲಿ ತರಿಸುತ್ತಿದ್ದೇನೆ. ನನಗೆ ಅನ್ನದ ಬೆಲೆ ಗೊತ್ತಿದೆ ಎಂದು ತಿಳಿಸಿದರು.

ಇಂದು ಎಷ್ಚೇ ಆರ್ಥಿಕವಾಗಿ ಸದೃಡರಾಗಿದ್ದರೂ ಪಡಿತರ ಸಿಗದಂತಹ, ಇಲ್ಲಾ ದೂರದ ನಗರಕ್ಕೆ ಹೋಗಿ ತರುವ ಕೆಲಸ ಮಾಡಬೇಕಿದೆ, ಅಂತಹ ಕೆಲಸ ಕೊರೋನಾ ಸೊಂಕಿಗೆ ದಾರಿ ಮಾಡಿಕೊಟ್ಟಂತೆ. ಹಾಗಾಗಿ ಯಾರು ಮನೆಯಿಂದ ಹೊರ ಬರಬೇಡಿ. ನನ್ನ ಹೆಗಲಿಗೆ ಆ ಜವಾಬ್ದಾರಿ ಬಿಡಿ ಎಂದು ಮನವಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?