Tuesday, April 16, 2024
Google search engine
Homeಸಾಹಿತ್ಯ ಸಂವಾದಕವನಪರಿಸರ ದಿನದ ಪದ್ಯಗಳು*

ಪರಿಸರ ದಿನದ ಪದ್ಯಗಳು*

ದೇವರಿಗೆ…

ದೇವರಿಗೆ
ವರುಷಕ್ಕೊಮ್ಮೆ
ರಥೋತ್ಸವ!
ಪರಿಸರ ಕಾಳಜಿಗೆ
ಒಮ್ಮೆ ವನಮಹೋತ್ಸವ
ಮನುಷ್ಯರಿಗೆ ಮಾತ್ರ
ದಿನಾ ನೂರೆಂಟು ಉತ್ಸವ!

*****

ಇಂದು ಭಾನುವಾರ

ನಮಗೂ ಗೊತ್ತು
ರಕ್ಷಿಸಬೇಕು
ಪರಿಸರ!
ನಾಳೆ ಪ್ರಾರಂಭಿಸುವೆವು
ಇಂದು ರಜಾ
ಭಾನುವಾರ!

*****

ಕಾರಣ ಅಲ್ಲ

ಭೂಮಿಯ

ಬಿಸಿಗೆ
ಬರೀ ಇಂಗಾಲ
ಕಾರಣ ಅಲ್ಲ!
ನಮ್ಮಿಬ್ಬರ
ಬಿಸಿಯುಸಿರೂ ಕಾರಣ
ಗೊತ್ತಾ ನಲ್ಲ?

******

ಮರ‌ತಬ್ಬಿ

ಆಗ ಅವನು
ಮರ ತಬ್ಬಿ
ನಡೆಸಿದ್ದ ಪರಿಸರ
ಚಳುವಳಿ!
ಈಗ ಮಡದಿಯ ತಬ್ಬಿ
ನೀಡಿದ್ದಾನೆ ಚಿನ್ನದಸರ
ಬಳುವಳಿ!

*****

ಕಾರಣ

ಎರಡು ಕಾರಣ
ಪರಿಸರ ನಾಶಕ್ಕೆ
ಒಂದು
ಕೈಗಾರಿಕೆಗಳ
ಹೊರಸೂಸುವಿಕೆ
ಮತ್ತೊಂದು
ಎಲ್ಲಂದರಲ್ಲಿ
ಮನುಷ್ಯರ
ಹೊರ “ಸೂಸು”ವಿಕೆ!


*~ತುರುವೇಕೆರೆ ಪ್ರಸಾದ್

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?