Saturday, April 20, 2024
Google search engine
Homeತುಮಕೂರು ಲೈವ್ಪಾವಗಡದಲ್ಲಿ ರಕ್ತದಾನ- ಸಿಬ್ಬಂದಿಗೆ ಅಭಿನಂದನೆ

ಪಾವಗಡದಲ್ಲಿ ರಕ್ತದಾನ- ಸಿಬ್ಬಂದಿಗೆ ಅಭಿನಂದನೆ

ಪಾವಗಡ : ಕೊರೊನಾ ಅನ್ನುವ ಪೆಡಂಭೂತ ನಮ್ಮ ರಾಜ್ಯದ್ದಲ್ಲಿ ಹರಡಿದ್ದಲ್ಲ ಅದು ಅನ್ಯ ರಾಷ್ಟ್ರ , ರಾಜ್ಯಗಳಿಂದ ಹರಡಿರೋ ವೈರಸ್ ಅದನ್ನು ಓಡಿಸುವ ಮನಸ್ಥೈರ್ಯ ವೃದ್ದಿಸಿಕೊಳ್ಳಿ ಎಂದು ಶಾಸಕ ವೆಂಕಟರವಣಪ್ಪ ತಿಳಿಸಿದರು.

ಪಟ್ಟಣದ ಎಸ್.ಎಸ್ ಕೆ ರಂಗ ಮಂದಿರದಲ್ಲಿ ಎಚ್.ವಿ ವೆಂಕಟೇಶ್ ಅಭಿಮಾನಿ ಬಳಗ ಆಯೋಜಿಸಿದ್ದ  ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನತೆ ಕೊರೋನಾ ಬಗ್ಗೆ ಹೆದರುವ ಅವಶ್ಯವಿಲ್ಲ ಧೈರ್ಯವಾಗಿ ಎದುರಿಸುವ ಮನಶಕ್ತಿ ವೃದ್ದಿಸಿಕೊಳ್ಳಬೇಕು ಆಶಾ, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಭಾಗದಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಶ್ರಮಿಸಿದ್ದಾರೆ ಎಮದರು.

ಆರೋಗ್ಯ ಇಲಾಖೆ, ಕಂದಾಯ,  ಪೊಲೀಸ್ ಇಲಾಖೆ ಗಳ ಸಿಬ್ಬಂದಿ ಹಗಲಿರುಳು ಕೊರೋನಾ ನಿಯಂತ್ರಿಸಲು ಶ್ರಮಿಸಿದ್ದಾರೆ. ಅವರ  ಸೇವಾ ಕಾರ್ಯ ಶ್ಲಾಘನೀಯ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್. ವಿ .ವೆಂಕಟೇಶ್ ಮಾತನಾಡಿ,  ಕೊರೊನಾ  ಹಿನ್ನೆಲೆ ಮೂರು ತಿಂಗಳಿಂದ ಹಗಲು ರಾತ್ರಿಯೆನ್ನದೆ ಶ್ರಮಿಸಿದ ಎಲ್ಲಾ ಇಲಾಖೆಗಳ ಸಿಬ್ಬಂದಿಗಳನ್ನು ಅಭಿನಂದಿಸುವುದು ಎಲ್ಲರ ಕರ್ತವ್ಯ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ವಿ ವೆಂಕಟೇಶ್ ಅವರ ಜನ್ಮ ದಿನದ ಪ್ರಯುಕ್ತ ಆಯೋಜಿಸಿದ್ದ  ರಕ್ತದಾನ ಶಿಬಿರದಲ್ಲಿ ನೂರಾರು ಮಂದಿ ಅಭಿಮಾನಿಗಳು  ರಕ್ತ ದಾನ ಮಾಡಿದರು.

ಮುಖಂಡ ಟಿ. ನರಸಿಂಹಯ್ಯ, ಮಾಜಿ ಶಾಸಕ ಸೋಮ್ಲನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು, ಸರ್ಕಲ್ ಇನ್ಸ್ಪೆಕ್ಟರ್ ನಾಗರಾಜು. ಆರೋಗ್ಯಾಧಿಕಾರಿ ತಿರುಪತಯ್ಯ , ಮುಖಂಡರಾದ ಶಂಕರ್ ರೆಡ್ಡಿ, ಪುರಸಭಾ ಸದಸ್ಯರಾದ ರಾಜೇಶ್, ಬಾಲ ಸುಬ್ರಮಣ್ಯಂ, ವೇಲು, ರವಿ, ಶಾ ಬಾಬು ಉಪಸ್ಥಿತರಿದ್ದರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?