Thursday, March 28, 2024
Google search engine
Homeತುಮಕೂರ್ ಲೈವ್ಪಾವಗಡ: ರೈತರ ದಿನಾಚರಣೆ

ಪಾವಗಡ: ರೈತರ ದಿನಾಚರಣೆ

Publicstory.in


ಪಾವಗಡ: ಹೆಲ್ಪ್ ಸೊಸೈಟಿ ಸಂಸ್ಥೆ ಮತ್ತು ಬ್ರೈಟ್ ಫ್ಯೂಚರ್ ಸಂಸ್ಥೆ ಇವರ ಸಮಕ್ಷದಲ್ಲಿ ರೈತರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿ ಕಿರಣ್ ರವರು ಮಾತನಾಡುತ್ತ ಈ ದೇಶದ ಬೆನ್ನೆಲುಬು ರೈತರಾಗಿದ್ದು ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಘ ಸಂಸ್ಥೆಗಳು ರೈತರನ್ನು ಗುರ್ತಿಸಿ ರೈತರ ದಿನಾಚರಣೆ ಆಚರಿಸಬೆಕೆಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನಂತರ ವೀರಮ್ಮನಹಳ್ಳಿ ಬಲರಾಮ ನವರು ಮಾತನಾಡುತ್ತ ರಾತ್ರಿ ಹಗಲು ಕಷ್ಟಪಟ್ಟು ಬೆಳೆದ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕಿದರೆ ರೈತರ ಕಷ್ಟಕ್ಕೆ ಒಂದು ಅರ್ಥ ಇರುತ್ತದೆ, ರೈತರನ್ನು ಗುರ್ತಿಸಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವ ಹೆಲ್ಪ್ ಸೊಸೈಟಿ ಮತ್ತು ಬ್ರೈಟ್ ಫ್ಯೂಚರ್ ಸಂಸ್ಥೆಗಳಿಗೆ ಧನ್ಯವಾದಗಳು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ವಿವಿಧ ಬೆಳೆಗಳು ಬೆಳೆಯುವ ಸಾಯಿ ಕ್ರಿಷ್ಣರೆಡ್ಡಿ, ಎಂ.ಎಸ್.ಬಲರಾಮ್, ಗಿರಿಬಾಬು, ರಹಮತ್ತುಲ್ಲ,ಗೋವಿಂದ ಎನ್ನುವ ಐದು ಮಂದಿ ರೈತರಿಗೆ ಸನ್ಮಾನ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಹೆಲ್ಪ್ ಸೊಸೈಟಿ ಪದಾಧಿಕಾರಿಗಳಾದ ವೀರಮ್ಮನಹಳ್ಳಿ ಲೋಕೇಶ್, ಗೌತಮ್, ಕಾರ್ತಿಕ್,ಅನಿಲ್,ರಾಜು,ಆದಿಶೇಶು ಮತ್ತು ಬ್ರೈಟ್ ಫ್ಯೂಚರ್ ಸಂಸ್ಥೆಯ ಸಿ.ಇ.ಒ ಶ್ರೀಧರ್ ಗುಪ್ತಾರವರು ಹಾಗು ಬ್ರೈಟ್ ಫ್ಯೂಚರ್ ಟೈಲರಿಂಗ್ ತರಬೇತಿಯ ಮಹಿಳೆಯರು ಮತ್ತು ಬ್ರೈಟ್ ಫ್ಯೂಚರ್ ಕಂಪ್ಯೂಟರ್ ತರಬೇತಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?