Friday, March 29, 2024
Google search engine
Homeಜನಮನಮೈಸೂರು ಜನತೆಗೆ ಯಾರು ಕ್ಷಮೆ ಕೇಳಬೇಕು ??

ಮೈಸೂರು ಜನತೆಗೆ ಯಾರು ಕ್ಷಮೆ ಕೇಳಬೇಕು ??

Public story


ಈ ಹಿಂದೆ ರೋಹಿಣಿ ಸಿಂಧೂರಿ ಅವರು ಚಾಮರಾಜನಗರಕ್ಕೆ ಆಕ್ಸಿಜನ್ ಸರಬರಾಜು ಮಾಡುವ ವಿಷಯದಲ್ಲಿ ತಪ್ಪು ಮಾಡಿಲ್ಲ ಎ೦ದು ತೀರ್ಮಾನ ಬಂದಾಗ ಚಾಮರಾಜನಗರ ಡಿಸಿ ಮೈಸೂರು ಜನತೆಯ ಕ್ಷಮೆ ಕೋರಬೇಕು ಎಂದು ಹೇಳಿಕೆ ನೀಡಿದ್ದರು.

ಚಾಮರಾಜನಗರ ಡಿಸಿ ಕರ್ತವ್ಯ ಲೋಪ ಮಾಡಿದ್ದಾರೆ ಎಂದು ಯಾರೂ ಇವರ ವರ್ಗಾವಣೆ ಮಾಡಿ ಎಂದು ದಂಗೆ ಏಳಲಿಲ್ಲ, ಈಗ ನಾಲ್ಕು ಜನ ಆತ್ಮಹತ್ಯೆ ಮಾಡಿಕೊಂಡಾಗಲೂ ಯಾರೂ ತಲೆ ಕೆಡಿಸಿಕೊಂಡಿಲ್ಲ.

300 km ಸೈಕಲ್ ಹೊಡೆದರೂ ಯಾರೂ ಧ್ವನಿ ಎತ್ತಿಲ್ಲ.

ಆದರೆ CSR ಫಂಡ್ಸ್ ಬಗ್ಗೆ ಕೂಗು ಎದ್ದಿದೆ. ಈಜು ಕೊಳದ ಬಗ್ಗೆ ಧ್ವನಿ ಎದ್ದಿದೆ.
ಇವರ ಅಧಿಕಾರ ವ್ಯಾಪ್ತಿಯ ವೈಯಕ್ತಿಕ ತಪ್ಪುಗಳಿಗೆ ಮೈಸೂರು ಜನತೆ ಎಂಬ ಪದ ಯಾಕೆ?
ಏಕಾಏಕಿ ರಾತ್ರೋ ರಾತ್ರಿ ಡಿಸಿ ವರ್ಗಾವಣೆ ಮಾಡಲು ಧ್ವನಿ ಜೋರು.

ಇಡೀ ಮಹಾನಗರ ಪಾಲಿಕೆ ಮೊದಲೇ ತಯಾರಾಗಿತ್ತೆ?
‘ಮೈಸೂರು ಬಿಟ್ಟು ತೊಲಗಿ’ ಎನ್ನಲು ಈಕೆ ಇಡೀ ಮೈಸೂರು ಜನತೆಯೆ?

ಅಧೀನ ಸಿಬ್ಬಂದಿಗಳ ಕರ್ತವ್ಯವನ್ನು ಕಟ್ಟುನಿಟ್ಟಾಗಿ
ಕೆಲಸ ಕೇಳಿದರೆ ಈ ರೀತಿ ವ್ಯವಸ್ಥಿತ ಸಂಚು ಮಾಡುವುದು ವಿಪರ್ಯಾಸವೇ ಸರಿ.

ಆದರೆ ಮೈಸೂರಿನ ವಿಶೇಷ ಏನೆಂದರೆ ಇಬ್ಬರೂ IAS ಗಳು ಮೈಸೂರು ಜನತೆಯ ಅಂತಸ್ಸಾಕ್ಷಿ ಥರ ಹೇಳಿಕೆ ಕೊಡುವುದು ತಪ್ಪು.

ಈಜು ಕೊಳವನ್ನು ಮೈಸೂರು ಜನತೆ ಕೇಳಿಲ್ಲ.
CSR FUNDS ನ ಲೆಕ್ಕವನ್ನು ಮೈಸೂರು ಜನತೆಗೆ
ಮಾಧ್ಯಮದ ಮೂಲಕ ನೀಡಲಿ. ಪ್ರತಾಪ ಸೂರ್ಯ ಸಂಸದರ ಲೆಕ್ಕ ಪ್ರಶ್ನೆ ಇದಕ್ಕೆ ಪೂರ್ಣ ಉತ್ತರ ಸಿಕ್ಲಿಲ್ಲ.

ಆಮೇಲೆ ‘ಮೈಸೂರು ಬಿಟ್ಟು ತೊಲಗಿ’ ,,ಮೈಸೂರು ಜನತೆ ಕ್ಷಮೆ ಕೇಳಲಿ ‘ಎಂದು ಹೇಳಲಿ.

ಚಿಕ್ಕ ಅಧಿಕಾರಿಗಳಿಗೆ ಸಣ್ಣ ತಪ್ಪುಗಳಿಗೆ ನೋಟಿಸ್ ನೀಡುವ ಇವರು ನ್ಯಾಯಬದ್ದ ರೀತಿಯಲ್ಲಿ ಕರ್ತವ್ಯ ನಿರ್ವಹಿಸದೆ ಸರ್ಕಾರಿ ಅಧಿಕಾರಿಗಳು ಮಾಧ್ಯಮಗಳ ಮುಂದೆ ಒಬ್ಬರ ಮೇಲೆ ಒಬ್ಬರು ಕೆಸರು ಎರಚುವ ಕೆಲಸ ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಾದ ಅವಶ್ಯಕತೆ ಮುಖ್ಯ ಕಾರ್ಯರ್ಶಿ ಮೇಲೆ ಇದೆ. IAS ಎಂದರೆ ಪ್ರಶ್ನಾತೀತರೆ? ಎಂಬ ಭಾವನೆ ಜನರಲ್ಲಿ ಮಾಡ ಬಾರದು.

ಎಲ್ಲರ ಮುಖ ಮುನಿಸಿಗೆ ಬರೇ ಎಲ್ಲರ ವರ್ತನೆ ಕಾರಣವೋ? ಅಥವಾ ಅನಾಯಾಸ ಕಾಂಚಾಣದ ಮೇಲೆ ಕಿತ್ತಾಟವೊ ?

ಮೈಸೂರು ಜನತೆಯ ದುರಾದೃಷ್ಟವೋ ಎಂದು ಆ ಮೈಸೂರು ಚಾಮುಂಡಿಯೇ ನ್ಯಾಯ ನೀಡಬೇಕು.

ಕೊರೋನಾ ಎಂಬ ಮಾರಿಯಿಂದ ನಲುಗುತ್ತಿರುವ “ಮೈಸೂರಿನ ಅಮಾಯಕ ಜನತೆ “ಯಾವುದೇ ಭ್ರಷ್ಟ ಅಧಿಕಾರಿಯ, ಕರ್ತವ್ಯ ಲೋಪ ಮಾಡುವ, ಬರೇ ಮಹಾನಗರ ಪಾಲಿಕೆಯ, ಅಧಿಕಾರಿಗಳ ಲೆಕ್ಕ ಕಾದಾಟದ ಬಲಿಪಶುಗಳು ಅಲ್ಲ, ಅಂತಃಸ್ಸಾಕ್ಷಿ ಮೊದಲೇ ಅಲ್ಲ ಎಂದು ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ತಿಳಿದು ಮಾತಾಡಲಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?