Tuesday, April 16, 2024
Google search engine
Homeತುಮಕೂರ್ ಲೈವ್ವಿ. ವಿ.ಗಳು ಪೇಟೆಂಟ್ ಪಡೆಯುವ ಹಂತಕ್ಕೆ ಬೆಳೆಯಬೇಕು: ಕುಲಪತಿ ಡಾ.ಸಿದ್ದೇಗೌಡ

ವಿ. ವಿ.ಗಳು ಪೇಟೆಂಟ್ ಪಡೆಯುವ ಹಂತಕ್ಕೆ ಬೆಳೆಯಬೇಕು: ಕುಲಪತಿ ಡಾ.ಸಿದ್ದೇಗೌಡ

Publicstory.in


ತುಮಕೂರು: ವಿಶ್ವವಿದ್ಯಾನಿಲಯಗಳು ಪೇಟೆಂಟ್ (ಭೌತಿಕ ಆಸ್ತಿ ಹಕ್ಕು) ಪಡೆಯುವ ಮಟ್ಟಿಗೆ ಬೆಳೆಯಬೇಕು ಎಂದು ತುಮಕೂರು ವಿ.ವಿ. ಕುಲಪತಿ ಡಾ. ಸಿದ್ದೇಗೌಡ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ವಿ.ವಿಯ ಸ್ನಾತಕೋತ್ತರ ಸಾವಯವ ಅಧ್ಯಯನ ಭೌತಿಕ ಮತ್ತು ಸಂಶೋಧನಾ ವಿಭಾಗ ಮತ್ತು ಆಂತರಿಕ ಗುಣಮಟ್ಟ ಕೋಶ ಆಯೋಜಿಸಿದ್ದ ಭೌತಿಕ ಆಸ್ತಿ ಹಕ್ಕು ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಿಶ್ವವಿದ್ಯಾನಿಲಯಗಳು ಸಂಶೋಧನೆಯ ಕಡೆಗೆ ಹೆಚ್ಚು ಒತ್ತು ನೀಡಬೇಕು. ಸಂಶೋಧನೆಗಳಿಗೆ ಭೌತಿಕ ಆಸ್ತಿ ಹಕ್ಕು ಪಡೆದುಕೊಳ್ಳಬೇಕು. ಇದು ದೇಶದ ಆಸ್ತಿಯಾಗಲಿದೆ ಎಂದು ಹೇಳಿದರು.
ದೇಶ ಬೆಳೆಯಬೇಕಾದರೆ ಸಂಶೋಧನೆಯ ಕಡೆಗೆ ಹೆಚ್ಚು ಒತ್ತು ನೀಡಬೇಕು. ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು. ಪ್ರಾಧ್ಯಾಪಕರು ಈ ನಿಟ್ಟಿನಲ್ಲಿ ಹೆಚ್ಚು ಯೋಚಿಸಬೇಕು. ಆಳವಾದ ಸಂಶೋಧನೆಯ ಕಡೆಗೆ ಗಮನ ಕೊಡಬೇಕು ಎಂದು ಒತ್ತಿ ಹೇಳಿದರು.

ಎಸ್ ಐಟಿ ಕಾಲೇಜಿನ ಟೆಕ್ನಾಲಜಿ ಬ್ಯುಸನೆಸ್ ಇನ್ ಕ್ಯೂಬಟರ್ ಸೆಂಟರ್ ನ ಡಾ.ಸಿ.ಪಿ.ಲೋಹಿತ್ ಮಾತನಾಡಿ, ಭಾರತದಲ್ಲಿ ಭೌತಿಕ ಆಸ್ತಿ ಹಕ್ಕಿನ ಬೆಳವಣಿಗೆ, ಅದರ ಮಹತ್ವ ಹೆಚ್ಚುತ್ತಿರುವ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು.
ಪ್ರಾಧ್ಯಾಪಕ ಶ್ರೀನಿವಾಸ್ ಎಸ್. ಸ್ವಾಗತಿಸಿದರು. ಕುಲಸಚಿವ ಪ್ರೊ. ಕೆ.ಎನ್.ಗಂಗಾನಾಯಕ್, ಆಂತರಿಕ ಗುಣಮಟ್ಟ ಖಾತರಿ ಕೋಶದ ನಿರ್ದಶಕ ಡಾ.ಕೆ.ಜಿ.ಪರುಶರಾಮ್, ಡಾ.ಅರುಣ್ ಕುಮಾರ್ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?