Friday, March 29, 2024
Google search engine
Homeತುಮಕೂರು ಲೈವ್ಶಿರಾ- ಕರೊನಾ ಸಾವು: ಜಿಲ್ಲಾ ಆರೋಗ್ಯ ಇಲಾಖೆಗೆ ಉಳಿಸಿಹೋದ ಪ್ರಶ್ನೆಗಳು

ಶಿರಾ- ಕರೊನಾ ಸಾವು: ಜಿಲ್ಲಾ ಆರೋಗ್ಯ ಇಲಾಖೆಗೆ ಉಳಿಸಿಹೋದ ಪ್ರಶ್ನೆಗಳು

Publicstory. in


ತುಮಕೂರು: ಶಿರಾದ ವ್ಯಕ್ತಿಯೊಬ್ಬರು ಕರೊನಾ ಸೋಂಕಿ‌ನಿಂದ ಮೃತಪಟ್ಟ ಘಟನೆ ಜಿಲ್ಲೆಯ ಆರೋಗ್ಯ ಇಲಾಖೆಯ ಮೇಲಿನ ವಿಸ್ವಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ಸಾವಿಗೀಡಾದ ವ್ಯಕ್ತಿ ಹೊರದೇಶಕ್ಕೆ ಹೋಗಿರಲಿಲ್ಲ ಎಂಬ ಒಂದೇ ಸ್ಪಷ್ಟನೆ ನೀಡಿ ಸಮಾಧಾನ ಹೇಳಿಕೊಳ್ಳಲು ಸಾಧ್ಯವಿಲ್ಲ. ದೆಹಲಿಯಲ್ಲಿ ಈ ಮೊದಲೇ ಸೋಂಕು ಕಾಣಿಸಿಕೊಂಡಿತ್ತು. ಅಲ್ಲದೇ ಆತ ಹೋಗಿದ್ದ ಈ ಭಾಗದಲ್ಲಿ ಮುಸಲ್ಮಾನರು ಕರೆಯುವ ದೆಹಲಿ ಮಸೀದಿ ಸಮಾವೇಶಕ್ಕೆ. ಸಮಾವೇಶದಲ್ಲಿ, ದೆಹಲಿಯಿಂದ ಬರುವಾಗ ಎಲ್ಲಿ ಬೇಕಾದರೂ ಸೋಂಕು ತಗುಲಿರುವ ಸಂಭವವಿದೆ.

ಕೊರೊನಾ ಸೋಂಕಿನ ಲಕ್ಷಣಗಳ ಬಗ್ಗೆ ಆರೋಗ್ಯ ಇಲಾಖೆ, ವಾಹಿನಿಗಳು ಸಣ್ಣ ಮಗುವಿಗೂ ಗೊತ್ತಾಗುವಷ್ಟು ಪ್ರಚಾರ ಮಾಡಿವೆ. ಇಷ್ಟಿದ್ದು, ಜಿಲ್ಲಾಸ್ಪತ್ರೆಯ ವೈದ್ತರು, ಸಿಬ್ವಂದಿಗೆ ಒಂದು ಸಣ್ಣ ಅನುಮಾನ ಬಾರದೇ ಹೋಗಿರುವುದು ಅಚ್ಚರಿಯಾಗಿದೆ.

ಈ ವ್ಯಕ್ತಿಯ ಟ್ರಾವೆಲ್ ಇಸ್ಟರಿ ನೋಡಿದರಂತೂ ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತದೆ.ಕನಿಷ್ಟ ಪಕ್ಷ, ಜಿಲ್ಲಾಸ್ಪತ್ರೆ ವಾರ್ಡ್ ನಲ್ಲಿ ಸೋಂಕಿನ ಲಕ್ಷಣಗಳು ಇರುವವರು ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ಸಣ್ಣ ಚರ್ಚೆ ನಡೆದಿದ್ದರೂ ಈ ತಪ್ಪು ನಡೆಯುತ್ತಿರಲಿಲ್ಲ.

ಜಿಲ್ಲಾಸ್ಪತ್ರೆಯಲ್ಲಿ ಎಷ್ಟು ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆ ಯಲ್ಲಿ ವೆಂಟಿಲೇಟರ್ ಎಷ್ಟಿವೆ ಎಂಬ ಮಾಹಿತಿಯನ್ನು ಜನರಿಗೆ ನೀಡಬೇಕಾಗಿದೆ.

ಸೋಂಕಿತ ವ್ಯಕ್ತಿಗೆ ವೆಂಟಿಲೇಟರ್ ನೀಡಲಾಗಿತ್ತೇ? ಇಲ್ಲವೇ ವರದಿ ಬರುವವರಿಗೂ ಕಾದು ಬಂದ ನಂತರ ಸೋಂಕಿತ ಎಂಬುದು ತಿಳಿಯಿತೆ ಎಂಬ ಪ್ರಶ್ನೆಗಳಲ್ಲಿ ಇನ್ನೂ ಉತ್ತರ ಸಿಕ್ಕಿಲ್ಲ.

ಈ ಬಗ್ಗೆ ಪ್ರಶ್ನಿಸಲು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ ಅವರಿಗೆ ಕರೆ ಮಾಡಿದಾಗ ಸಭೆಯಲ್ಲಿರುವುದಾಗಿ ತಿಳಿಸಿದರು.DHO ಅವರು ಕರೆ ಸ್ವೀಕರಿಸಲಿಲ್ಲ. ಈ ಇಬ್ಬರು ಅಧಿಕಾರಿಗಳು ಮಾಹಿತಿ ನೀಡಿದರೆ ಈ ವರದಿಯೊಂದಿಗೆ ಸೇರಿಸಲಾಗುವುದು.

ಸೋಂಕಿತ ವ್ಯಕ್ತಿ ಮೆಡಿಕಲ್ ಅಡ್ವೈಸ್ ವಿರುದ್ಧ ಖಾಸಗಿ ಆಸ್ಪತ್ರೆ ಗೆ ಹೋಗಬಹುದೇ? ಖಾಸಗಿ ಆಸ್ಪತ್ರೆ ವೈದ್ಯರು ಹೇಳಿದ ಬಳಿಕ ಈ ಸೋಂಕಿತನನ್ನು ವಾಪಸ್ ಜಿಲ್ಲಾಸ್ಪತ್ರೆ ಗೆ ಕರೆ ತರಲಾಯಿತೇ? ಆತನ ಸಂಬಂಧಿಕರು ಕರೆದುಕೊಂಡು ಬಂದರೆ ಎಂಬ ಪ್ರಶ್ನೆಗಳಿವೆ.

ಹೊರದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡುವುದಷ್ಟಕ್ಕೆ ಹೆಚ್ಚು ಒತ್ತು ಕೊಟ್ಟು, ಉಳಿದ ಸಿದ್ಧತೆಗಳನ್ನು ಏನೆಲ್ಲ ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆಯೂ ಹೇಳಬೇಕಾಗಿದೆ.

ಕರೊನಾ ಸೋಂಕಿನ ಲಕ್ಷಣ ವಿದೇಶದಿಂದ ಬಂದವರಲ್ಲಿ ಅಥವ ಯಾರಲ್ಲಿ ಕಂಡು ಬಂದರೂ ಉದಾಸೀನ ಮಾಡಬಾರದು ಎಂಬ ಪಾಠ ಕಲಿಯಬೇಕಾಗಿದೆ‌.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?