Saturday, April 13, 2024
Google search engine
HomeUncategorizedಸಂಕಷ್ಟದಲ್ಲಿ ಜನರ ಸೇವೆಗೆ ನಿಂತ ಗೌರಿಶಂಕರ್ ಜನನಾಯಕ; ದೇವೇಗೌಡ

ಸಂಕಷ್ಟದಲ್ಲಿ ಜನರ ಸೇವೆಗೆ ನಿಂತ ಗೌರಿಶಂಕರ್ ಜನನಾಯಕ; ದೇವೇಗೌಡ

ಹೆತ್ತೇನಹಳ್ಳಿ ಮಂಜುನಾಥ್


ಹೊನ್ನುಡಿಕೆ: ಕೊರೋನಾ ಸಂಕಷ್ಟ ನಿರ್ವಹಣೆಯಲ್ಲಿ ದೇಶ ಲಾಕ್ ಡೌನ್ ಆದ ದಿನದಿಂದಲೂ ನಿರಂತರ ಸೇವೆಯಲ್ಲಿ ಗೌರಿಶಂಕರ್ ತನ್ನ ಕ್ಷೇತ್ರದ ಜನಗಳ ಸೇವೆಗೆ ನಿಂತಿರುವುದು ಶ್ಲಾಘನೀಯ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೆಚ್ಚುಗೆ ವ್ಯಕ್ಯಪಡಿಸಿದರು.

ಇಲ್ಲಿ ಶಾಸಕ ಗೌರಿಶಂಕರ್ ಕ್ಷೇತ್ರದ ಜನರ ಮನೆ ಮನೆಗೆ ಆಹಾರದ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಾಸಕರು ಸೇವೆಯ ನಡುವೆ ಸಾಮಾಜಿಕ ಕಳಕಳಿಯಿಂದ ಕಾರ್ಯಕ್ರಮದ ಜಾಗದಲ್ಲೂ ಸಾಮಾಜಿಕ ಅಂತರವನ್ನು ಎಚ್ಚರಿಕೆ ವಹಿಸಿ ಕಾಪಾಡಿಕೊಂಡಿರುವುದು ಸಂತೋಷ ತಂದಿದೆ ಎಂದರು.

ಇಂತಹ ಹತ್ತಾರು ಸಾಮಾಜಿಕ ಕಳಕಳಿಯುಳ್ಳ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಗೌರಿಶಂಕರ್ ರವರಿಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸತ್ತೇನೆ ಎಂದು ಹೇಳಿದರು.

ಪಬ್ಲಿಕ್ ಸ್ಟೋರಿ ಯೊಂದಿಗೆ ಮಾತಾಡಿದ ದೇವೇಗೌಡರು ಜನಗಳ ಕಷ್ಟಸುಖಗಳಿಗೆ, ಇಂತಹ ವಿಪತ್ತಿನ ಸಂಧರ್ಭದಲ್ಲಿ , ನೈಸರ್ಗಿಕ ವಿಕೋಪದಲ್ಲಿ ಚನ್ನಿಗಪ್ಪನವರ ಕುಟುಂಬ ಸದಾ ನಿಂತಿದೆ. ಈಗ ಅದನ್ನು ಗೌರಿಶಂಕರ್ ಮುಂದುವರಿಸಿಕೊಂಡು ಹೋಗುತ್ತಿರುವುದು ಅತ್ಯಂತ ಸಂತೋಷದ ವಿಷಯ ಹಾಗೂ ಸಂಕಷ್ಟದಲ್ಲಿ ಜನರ ಸೇವೆಗೆ ನಿಂತ ಗೌರಿಶಂಕರ್ ನಿಜವಾದ ಜನನಾಯಕ ಎಂದು ಹೇಳಿದರು.

ಇದನ್ನು ಓದಿ: https://publicstory.in/ತುಮಕೂರು-ಗ್ರಾಮಾಂತರದಲ್ಲಿ-ಸ/ ಸದ್ದಿಲ್ಲದೆ ನಡೆದಿದೆ ನೆರವಿನ ಕೆಲಸ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?