Friday, March 29, 2024
Google search engine

ಸಂಕ್ರಮಣ

ದೇವರಹಳ್ಳಿ ಧನಂಜಯ


ವಸ್ತಿಲಲಿ ಹೊಂಚಿ ಕುಂತಿದೆ ಅಪಾಯ!
ವಾಸ್ತವ ತಿಳಿಯದ ಮುಗ್ಧ
ಕೊನೇಕಾರ ರಂಗಯ್ಯ ರೋಟಿ ಕಟ್ಟಿದ್ದಾನೆ.
ಅವನ ಮಗ
ನಕ್ಷತ್ರಗಳ ಕೀಳಲು ಜಾವಣಿಗೆ ಎತ್ತಿದ್ದಾನೆ.

“ಮಗನ ಚೆನ್ನಾಗಿ ಓದಿಸಿ ಆಫೀಸರ್ ಮಾಡ್ತೀನಿ
ಎಷ್ಟೇ ಕರ್ಚ್ ಆಗಲಿ”
ಹೇಳಿದ ಮಾತಲ್ಲಿ ವಿಶ್ವಾಸ ಕಾಣಲಿಲ್ಲ
ಎದೆ ಜಾತ್ರೆಯಲಿ
ಕನಸುಗಳು ಮದಾಸಿ ನಿಂತಿಲ್ಲ

ಸಂಕ್ರಾಂತಿ ಬಂತು ಬೆಟ್ಟ ಹತ್ತಬೇಕು
ಹೊನ್ನ ಮರಡಿ ಪರಿಷೆ
ಬಂದೇಬಿಡ್ತು ಹರಕೆ ತೀರಿಸಬೇಕು
ನನ್ನ ಮಗನಿಗೆ
ದೇವರು ಒಳ್ಳೆಯದು ಮಾಡಬೇಕು

ಗೊತ್ತಿಲ್ವಾ ಬಂದೈತೆ ಕೂರೋನ ಶಕ್ತಿ ಎಲ್ಲೈತೆ
ದೇವರಿಗೆ ಅಂದೆ
“ಪಾಪಿಗಳು ಉಲ್ಡೋಗ್ಲಿ, ಪಾಪ ದೇವರು!”
ಜಾವಣಿಗೆ ಎಳೆದ ರಂಗಯ್ಯ
ಚರಕ್!ಗೊನೆ ಬಿತ್ತು.ಪಾಪ-ಪುಣ್ಯದ ಮಾತು.

ಸಂಕ್ರಮಣದ ಸೂರ್ಯನಿಗೆ
ಗ್ರಹಣ ಬಡಿದಿದೆ.
ಬಿಸಿಲ ಚಾಟಿಯ ಸರದಾರನಿಗೆ
ಏನೋ ಅಳುಕು.
ಒಳಒಳಗೆ ಎದೆಯ ಚಳುಕು.

ನೊಗ ಕಳಚಿವೆ ಸಪ್ತಾಶ್ವಗಳು;
ಕಡಗೀಲು ಕಳಚಿ,
ಸಪ್ತಮಿ ರಥ ಮುರಿದುಬಿದ್ದಿದೆ.
ಪಥಭ್ರಾಂತವಾಗಿದೆ
ಹೊತ್ತಿನ ತುತ್ತಿಗೆ ದುಡಿವವರ ಬದುಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?