Saturday, April 20, 2024
Google search engine
HomeUncategorizedಹೀಂಗ್ ಮಾಡಲಿ ನಮ್ ಉಸ್ತುವಾರಿ ಸಚಿವರು!

ಹೀಂಗ್ ಮಾಡಲಿ ನಮ್ ಉಸ್ತುವಾರಿ ಸಚಿವರು!

ಸಾವಿನ ಬಸ್ಸೊ ? ಸಾವ್ಕಾರಿ ಬಸ್ಸೋ?

Publicstory


ಪಾವಗಡದಲ್ಲಿ ಈಚೆಗೆ ನಡೆದ ಖಾಸಗಿ ಬಸ್ ಹಳ್ಳಿಗರ ಬಾಯಲ್ಲಿ ಸಾವ್ಕಾರಿ ಬಸ್ ಅಪಘಾತ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.


ಅಪಘಾತದ ನಂತರ ಆಡಳಿತ ಹೇಗೆ ನಡೆದುಕೊಳ್ಳಬೇಕು ಎಂಬ ಸಲಹೆಯನ್ನು ಅಧಿಕಾರ ವರ್ಗಕ್ಕೆ ಓದುಗರೊಬ್ಬರು ನೀಡಿದ್ದಾರೆ. ಆದರೆ ಯಾಕೆ ಅಧಿಕಾರ ವರ್ಗ, ಜನಪ್ರತಿನಿಧಿಗಳು ಹೀಗೆ ಮಾಡುವುದಿಲ್ಲ ಎಂಬುದಕ್ಕೆ ಅವರುಗಳೇ ಉತ್ತರಿಸಬೇಕು


ಅಪಘಾತ ಆಕ್ಸಿಡೆಂಟ್ಸ್ ಸಮಯದಲ್ಲಿ ಗಾಯಾಳುಗಳನ್ನು ಬೇಟಿ ಮಾಡಿ ಸಾಂತ್ವಾನ ಹೇಳುವುದು ಮತ್ತು ಪರಿಹಾರ ಪೋಷಿಸುವುದು ಸರಿ.
ಅದೇ ರೀತಿ ಚುನಾಯಿತ ಪ್ರತಿನಿಧಿಗಳು ತಕ್ಷಣವೇ ಆಸ್ಪತ್ರೆಗೆ ಬೇಟಿ ನೀಡಿದರೆ ಇವರ ಹಿಂಬಾಲಕರು ಜನ ಜಂಗುಳಿ ನಿಯಂತ್ರಣ ಕಷ್ಟ.

RTO ಕಛೇರಿಗೂ ಇದೇ ರೀತಿ ಬೇಟಿ ನೀಡಿ ಟ್ರಿಪ್ ವಿವರ . .ಪರ್ಮಿಟ್ ಸರಿಯಾಗಿತ್ತಾ ಇಲ್ಲವಾ ,ಪ್ರತಿದಿನ ಬಸ್ ಟಾಪ್ ಅಲ್ಲಿ ಜನ ಪ್ರಯಾಣ ಮಾಡುತ್ತಿದ್ದರೂ ಸುಮ್ಮನಿದ್ದ RTO,ಸರಕಾರಿ ಬಸ್ ಹಾಕದಿರಲು ಕಾರಣ. ರಸ್ತೆಯ ಸ್ಥಿತಿ ಇತ್ಯಾದಿ ನೋಡಬೇಕು. ಕಂಟ್ರಾಕ್ಟರ್ ಗಳ ಮೇಲೆ ರಸ್ತೆ ದುಸ್ಥಿತಿ ಬಗ್ಗೆ ಕ್ರಮ ತೆಗೆದುಕೊಳ್ಳುಬೇಕು.

120 ಜನರ ಟಿಕೆಟ್ ಲೆಕ್ಕ ಹಾಕಿ 30 ಜನ ತೋರಿಸುವ ಸಾವ್ಕಾರಿ ಬಸ್ ಗಳ ಆದಾಯ ವಂಚನೆ ಪ್ರಕರಣ ದಾಖಲಿಸಲಿ. ಪ್ರತಿ ದಿನ ಬಸ್ ಓನರ್ ತೋರಿಸಿರುವ ಲೆಕ್ಕ ಪರಿಶೀಲಿಸಲಿ. ಆ ಬಸ್ ನ ಪರ್ಮಿಟ್ ಪರಿಶೀಲಿಸಲಿ.

ಇನ್ನು ಒಂದು ವಾರ ಬಿಟ್ಟು ಗಾಯಾಳುಗಳ ಜೊತೆ ಸಂವಾದ ಮಾಡಲಿ. ಆಗ ಚಿಕಿತ್ಸೆಯ ಗುಣಮಟ್ಟ ಹೇಗಿತ್ತು, ಹೊರಗೆ ಔಷಧಿ ಎಷ್ಟು ಬರೆದು ಕೊಟ್ಟರು, ಆಹಾರ ಹೇಗಿತ್ತು ಇತ್ಯಾದಿಗಳ ಬಗ್ಗೆ ತಿಳಿದುಕೊಂಡು ಆಸ್ಪತ್ರೆಗಳ ಸುಧಾರಣ ಕ್ರಮ ತೆಗೆದುಕೊಳ್ಳಲಿ.

ಮುಂದೆ ಒಂದು ತಿಂಗಳ ನಂತರ ಇಲಾಖೆಗಳು ಒಟ್ಟಾಗಿ ಸಾಮಾಜಿಕ ಭದ್ರತಾ ಕ್ರಮಗಳಲ್ಲಿ ಯಾವುದು ನೊಂದವರಿಗೆ ತಲುಪಿದೆ, ಪುನರ್ ವಸತಿ ಸೌಲಭ್ಯ ದೊರಕಿದೆಯೋ? ಇತ್ಯಾದಿ ಪರಿಶೀಲಿಸಲಿ.

ಸರಕಾರಿ ಬಸ್ ಎಷ್ಟು ಟ್ರಿಪ್ ಆ ರೂಟನಲ್ಲಿ ಓಡಿಸುತ್ತಿದ್ದಾರೆ. ತುಮಕೂರು ನಗರದಲ್ಲಿ ಸರ್ಕಾರಿ ಬಸ್ ಬರದೇ ಇರುವ ಹಳ್ಳಿಗಳು ಯಾವುವು, ಟಾಪ್ ಮೇಲೆ ಜನ ಓಡಿಸುವ ಸಾವ್ಕಾರಿ ಬಸ್ ಯಾವುದು, ಲೋಪ ಮಾಡಿದ ಅಧಿಕಾರಿಗಳ ಮೇಲೆ ತೆಗೆದುಕೊಂಡ ಕ್ರಮ.

ಡ್ರೈವರ್ ಕುಡಿದಿದ್ದನಾ? ಅವನಿಗಿದ್ದ ಒತ್ತಡ , ಅಸಹಾಯಕತೆ ಏನು, ಎಲ್ಲ ಡ್ರೈವರ್ ಮತ್ತು ಕಂಡಕ್ಟರ್ ಗಳಿಗೆ ಒಂದು ಹಂತ ಹಂತವಾಗಿ ಸಮಾಲೋಚನೆ
ಇವುಗಳನ್ನು ಮಾಡಿ . ಸರಿಯಾಗಿ ಒಂದು ತಿಂಗಳಿಗೆ
ಈ ಘೋರ ದುರಂತದ ಬಗ್ಗೆ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಿದಲ್ಲಿ ತುಮಕೂರಿನ ಸಾರ್ವಜನಿಕರಿಗೆ ಈ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಉಸ್ತುವಾರಿ ಸಚಿವರು ನೀಡುವ ಪುಣ್ಯದ ಕೆಲಸ.

ಜೊತೆಗೆ ಇಂತ ಘೋರ ದುರಂತಗಳು ಸಂಭವಿಸ ಬಹುದಾದ ಜಾಗಗಳನ್ನು ಗುರುತಿಸಿ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಮಾಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?