Wednesday, March 27, 2024
Google search engine
Homeತುಮಕೂರ್ ಲೈವ್ಸಿಐಟಿಯು ಸಂಭ್ರಮಕ್ಕೆ ತುಮಕೂರು ಸಜ್ಜು

ಸಿಐಟಿಯು ಸಂಭ್ರಮಕ್ಕೆ ತುಮಕೂರು ಸಜ್ಜು

ತುಮಕೂರು: ಸಿಐಟಿಯುನ ಐವತ್ತನೇ ವರ್ಷಾಚರಣೆ ಹಾಗೂ ಹದಿನಾಲ್ಕನೇ ರಾಜ್ಯ ಸಮ್ಮೇಳನ ತುಮಕೂರು ನಗರದಲ್ಲಿ ನಡೆಯಲಿದೆ. ನವೆಂಬರ್ 8, 9 ಮತ್ತು 10ರಂದು ಮೂರು ದಿನಗಳು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಸಕ್ತ ಆರ್ಥಿಕ, ಕಾರ್ಮಿಕರ ಸ್ಥಿತಿಗತಿ ಕಾರ್ಮಿಕ ಕಾನೂನು-ಕಾಯ್ದೆ, ದೇಶ ಎದುರಿಸುತ್ತಿರುವ ಬಿಕ್ಕಟ್ಟು ಪ್ರಸ್ತಾಪಗೊಳ್ಳುವ ನಿರೀಕ್ಷೆ ಇದೆ. ಸಮ್ಮೇಳನಕ್ಕೆ 600ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ಸಮ್ಮೇಳನಕ್ಕಾಗಿ ಪೂರ್ವ ತಯಾರಿಗಳು ಭರದಿಂದ ಸಾಗಿವೆ.

ಸಮ್ಮೇಳನದ ಮೊದಲ ದಿನ ಕೆಂಪಂಗಿ ದಳದ ಮೆರವಣಿಗೆ ಇದೆ. ನೂರಾರು ಕಾರ್ಮಿಕರು ಕೆಂಪು ಷರ್ಟ್ ಮತ್ತು ಕೆಂಪು ಪ್ಯಾಂಟ್ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದು ಮೆರವಣಿಗೆಗೆ ಮೆರಗು ನೀಡಲಿದೆ. ಸಾವಿರಾರು ಕಾರ್ಮಿಕರು ಮೆರವಣಿಗೆ ಮತ್ತು ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಸಮ್ಮೇಳನಕ್ಕೆ ಅಖಿಲ ಭಾರತ ಸಿಐಟಿಯು ಅಧ್ಯಕ್ಷೆ ಡಾ.ಹೇಮಲತ, ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೇನ್, ಉಪಾಧ್ಯಕ್ಷ ಡಾ.ಎ.ಕೆ.ಪದ್ಮನಾಭನ್ ಭಾಗವಹಿಸಿ ಮಾಹಿತಿ ನೀಡುವರು. ಜನಪರ ಚಿಂತಕ ಕೆ.ದೊರೈರಾಜ್ ಗೌರವಾಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚನೆ ಮಾಡಲಾಗಿದೆ. ಸೈಯದ್ ಮುಜೀಬ್, ಬಿ.ಉಮೇಶ್, ಎನ್.ಕೆ. ಸುಬ್ರಮಣ್ಯ, ಜಿ.ಕಮಲ, ಷಣ್ಮುಖಪ್ಪ, ಲೋಕೇಶ್ ಹೀಗೆ ಎಲ್ಲಾ ವಿಭಾಗದ ಪ್ರಮುಖರನ್ನು ಒಳಗೊಂಡಂತೆ ಸಮಿತಿ ರಚಿಸಿದ್ದು ವಿಶೇಷವಾಗಿದೆ.

                                                                              ಮುಜೀಬ್

ಸಮ್ಮೇಳನದ ಭಾಗವಾಗಿ ರಚಿಸಿರುವ ಸ್ವಾಗತ ಸಮಿತಿ, ವಸತಿ, ಆಹಾರ, ವೇದಿಕೆ, ಪ್ರಚಾರ, ಸ್ಮರಣ ಸಂಚಿಕೆ ಸಮಿತಿಗಳ ಸಭೆಗಳು ನಡೆದಿದ್ದು ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆಸಲಾಗಿದೆ. ಪ್ರತಿಯೊಂದು ಸಮಿತಿಗೂ ಅಧ್ಯಕ್ಷರು, ಸಂಚಾಲಕರನ್ನು ನೇಮಕ ಮಾಡಿದೆ. ಪ್ರತಿಯೊಂದು ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಈಗಾಗಲೇ ತುಮಕೂರು, ತಿಪಟೂರು, ಶಿರಾ ಮತ್ತು ಕುಣಿಗಲ್ ಕೇಂದ್ರ ಸ್ಥಾನಗಳಲ್ಲಿ ವಿಚಾರ ಸಂಕಿರಣಗಳು ನಡೆದಿವೆ.


ತುಮಕೂರಿನಲ್ಲಿ ಕಾರ್ಮಿಕರ ಕಾಯ್ದೆಗಳನ್ನು ಸಂಹಿತೆಗಳಾಗಿ ಬದಲಾವಣೆ, ದುಡಿವ ಜನರ ನಿಲುಮೆ, ತಿಪಟೂರಿನಲ್ಲಿ ಕೃಷಿ ಬಿಕ್ಕಟ್ಟು, ರೈತರ ಸಂಕಷ್ಟಗಳು ಮತ್ತು ಪರಿಹಾರ, ಶಿರಾದಲ್ಲಿ ಸೌಹಾರ್ದತೆ ಮತ್ತು ಬಹುತ್ವಕ್ಕೆ ಇರುವ ಸವಾಲುಗಳು, ಕುಣಿಗಲ್‍ನಲ್ಲಿ ಕುಣಿಗಲ್ ಸಮಗ್ರ ಅಭಿವೃದ್ಧಿಗಿರುವ ಸವಾಲುಗಳು ವಿಷಯಗಳ ಕುರಿತು ವಿವಿಧ ಗಣ್ಯರು ಚರ್ಚೆ ನಡೆಸಿದ್ದಾರೆ. ಕಾರ್ಮಿಕ ಮುಖಂಡರು, ರೈತ ಸಂಘ, ಪ್ರಾಂತ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಪತ್ರಕರ್ತರು, ಬರಹಗಾರರು ಚಿಂತಕರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ದೇಶದಲ್ಲಾಗುತ್ತಿರುವ ಬೆಳವಳಿಗೆಗಳ ಕುರಿತು ಗಮನ ಸೆಳೆದಿದ್ದಾರೆ.
ಜಿಲ್ಲೆಯ ಸಿಐಟಿಯು ನಾಯಕರು, ಅಂಗನವಾಡಿ, ಗ್ರಾಮ ಪಂಚಾಯಿತಿ, ಕಾರ್ಖಾನೆಗಳ ಸಂಘಗಳು ಹೀಗೆ ಎಲ್ಲರೂ ಅಹರ್ನಿಷಿ ಕಟ್ಟಾಳುಗಳಂತೆ ಕೆಲಸ ಮಾಡುತ್ತಿರುವುದು ಮುಂದುವರಿದಿದೆ. ಕಾರ್ಯಕ್ರಮ ಯಶಸ್ವಿಗೆ ಬೇಕಾದ ಎಲ್ಲ ಕೆಲಸಗಳನ್ನು ಸಿದ್ದತೆ ಮಾಡಿಕೊಳ್ಳಲಾಗಿದೆ.

ಇನ್ನೊಂದೆಡೆ ಸ್ಮರಣ ಸಂಚಿಕೆ ಸಮಿತಿ ಮೂರು ಬಾರಿ ನಡೆಸಿದೆ. ಸ್ಮರಣ ಸಂಚಿಕೆಯು ಯಾವೆಲ್ಲಾ ವಿಷಯಗಳನ್ನು ಒಳಗೊಂಡಿರಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಜಿಲ್ಲೆಯ ಸೌಹಾರ್ದ ನೆಲೆ, ಚಳವಳಿ, ಇತಿಹಾಸ, ಸ್ಲಂ ಜನರ ಬದುಕು, ಜಿಲ್ಲೆ ಮತ್ತು ರಾಜ್ಯವನ್ನು ಬಾಧಿಸುತ್ತಿರುವ ಗಣಿಗಾರಿಕೆ, ದಲಿತ ಹೋರಾಟಗಳು ಹೀಗೆ ಹತ್ತು ಹಲವು ವೈವಿಧ್ಯಮಯ ವಿಷಯಗಳು ಇರಬೇಕು ಎಂಬುದನ್ನು ಸಮಿತಿ ಕಂಡುಕೊಂಡಿದೆ.

                                                                     ಬಿ ಉಮೇಶ್

ಸ್ಮರಣ ಸಂಚಿಕೆ ಸಂಪಾದಕ ಮಂಡಳಿಯಲ್ಲಿ ಹಿರಿಯರಾದ ಕೆ.ದೊರೈರಾಜು, ವಕೀಲ ಸಿ.ಕೆ. ಮಹೇಂದ್ರ, ಪತ್ರಕರ್ತ ಕೆ.ಈ.ಸಿದ್ದಯ್ಯ, ಸಹಪ್ರಾಧ್ಯಾಪಕ ಡಾ.ಓ.ನಾಗರಾಜು, ಲೇಖಕಿಯರಾದ ಮಲ್ಲಿಕಾ ಬಸವರಾಜು, ಬಾ.ಹ.ರಮಾಕುಮಾರಿ ಇದ್ದು ಸಹಕಾರ ನೀಡುತ್ತಿದ್ದಾರೆ.

ಇದರ ಭಾಗವಾಗಿ ನಾಡೋಜ ಬರಗೂರು ರಾಮಚಂದ್ರಪ್ಪ, ಲೇಖಕಿ ಬಾ.ಹ.ರಮಾಕುಮಾರಿ, ಸಾಹಿತಿ ಎನ್.ನಾಗಪ್ಪ, ಕಥೆಗಾರ ಎಸ್.ಗಂಗಾಧರಯ್ಯ, ಪತ್ರಕರ್ತ ಉಗಮ ಶ್ರೀನಿವಾಸ್, ಬರಹಗಾರ ಉಜ್ಜಜ್ಜಿ ರಾಜಣ್ಣ ಮೊದಲಾದವರಿಗೆ ಒಂದೊಂದು ವಿಷಯ ಕುರಿತು ಲೇಖನ ಬರೆಯಬೇಕು. ಶೀಘ್ರವೇ ಲೇಖನಗಳನ್ನು ಕಳಿಸಿಕೊಡಬೇಕೆಂದು ಮನವಿಯನ್ನು ಮಾಡಲಾಗಿದೆ. ಈಗಾಗಲೇ ಕೆಲ ಲೇಖಕರು ಲೇಖನಗಳನ್ನು ಕಳಿಸಿಕೊಟ್ಟಿದ್ದರೆ, ಇನ್ನು ಉಳಿದವು ಬರಬೇಕಾಗಿದೆ.
ಕಾರ್ಮಿಕರು, ರೈತರು, ಮಹಿಳೆಯರು ಮತ್ತು ಮಕ್ಕಳು ಬಿಕ್ಕಟ್ಟು ಎದುರಿಸುತ್ತಿದ್ದು ಅವುಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ. ಇಂತಹ ಚರ್ಚೆ, ಸಂವಾದಗಳಿಂದ ಭಾರತ ಸರ್ಕಾರದ ಗಮನ ಸೆಳೆಯುವ ಯತ್ನ ಇದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?