Thursday, April 18, 2024
Google search engine
Homeತುಮಕೂರು ಲೈವ್ಅಂಬೇಡ್ಕರ್ ನಿವಾಸ ಹಾಳು: ಆರೋಪಿ ಗಡಿಪಾರು ಮಾಡಿ

ಅಂಬೇಡ್ಕರ್ ನಿವಾಸ ಹಾಳು: ಆರೋಪಿ ಗಡಿಪಾರು ಮಾಡಿ

ತುಮಕೂರು: ಮೊನ್ನೆ ಮಹಾರಾಷ್ಟ್ರದ ದಾದರ್ನಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ ಮನೆಯ ಹೂವಿನ ಕುಂಡ ಹಾಗೂ ಸಿಸಿ ಕ್ಯಾಮೆರಾಗಳ ದ್ವಂಸ ಪ್ರಕರಣವನ್ನು ಈ ರೀತಿಯಲ್ಲಿ ಅದರ ವಿಚಾರಣೆಯ ದಿಕ್ಕು ತಪ್ಪಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಕರ್ನಾಟಕ ಪರಿಶಿಷ್ಟರ ಪರಿವರ್ತನಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದರ್ಶನ್ ಜಿ. ಹೆಚ್ ಪ್ರಶ್ನಿಸಿದ್ದಾರೆ.

ಬದಲಾಗುತ್ತಿದೆ ಭಾರತ ಸತ್ಯ, ಅಕ್ಷರಸಹ ಸತ್ಯ ಬದಲಾಗುತ್ತಿದೆ. ಯಾವ ದೇಶದಲ್ಲಿ ಅಸಮಾನತೆ ತಾಂಡವವಾಡುತ್ತಿತ್ತೊ, ಶೋಷಣೆ ಮೆರೆಯುತ್ತಿತ್ತೊ, ರಾಕ್ಷಸರೂಪಿ ಅಸ್ಪ್ರುಶ್ಯತೆ ಕ್ರೌರ್ಯ ಮೆರೆಯುತ್ತಿತ್ತೊ ಅಂತಹ ದೇಶದಲ್ಲಿ ಸಮಾನತೆಯನ್ನು ತಂದು ದೇಶವನ್ನು ಮುನ್ನಡೆಸುತ್ತಿರುವ ಸಂವಿಧಾನ ಎಂಬ ಮಹಾನ್ ಗ್ರಂಥದ ಕರ್ತೃ ಡಾಕ್ಟರ್ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರ ನಿವಾಸಕ್ಕೆ ರಕ್ಷಣೆ ಇಲ್ಲವೆಂದಾದರೇ ಭಾರತ ಬದಲಾದಂತೆ ಅಲ್ಲವೇ..?

ಇದಕ್ಕಾಗೆ ಬಾಬಾ ಸಾಹೇಬರು ‘ನನಗೊಂದು ತಾಯಿನಾಡಿಲ್ಲ, ನನ್ನ ಜನರನ್ನ ನಾಯಿ,ಹಂದಿಗಿಂತಲೂ ಕೀಳಾಗಿ ಕಾಣುವ ಈ ನೆಲವನ್ನು ನನ್ನ ತಾಯಿನಾಡೆಂದು ಹೇಗೆ ಒಪ್ಪಿಕೊಳ್ಳಲಿ ಎಂದು ಯಾವಾಗಲೂ ಹೇಳುತ್ತಿದ್ದರು.ಬಾಬಾ ಸಾಹೇಬರ ನಿವಾಸದ ಮೇಲಿನ ಹೂ ಕುಂಡಗಳ ದ್ವಂಸ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಮಾನಸಿಕ ಅಸ್ವಸ್ಥನಂತೆ, ಇಂತಹ ಕಥೆಗಳನ್ನು ಸೃಷ್ಟಿಸಿ ದೇಶ ಮತ್ತು ಸಂವಿಧಾನ ಶಿಲ್ಪಿಗೆ ಈ ಪರಿಯ ಗೌರವವನ್ನು ನೀಡುತ್ತಿರುವ ಭವ್ಯಭಾರತದ ಇಂದಿನ ಸ್ಥಿತಿ ನೋಡಿದರೇ, ಭಾರತ ಅದರಲ್ಲೂ #ಜಾತ್ಯತೀತ_ಭಾರತ ಬದಲಾಗುತ್ತಿದೆ ಎಂದಿದ್ದಾರೆ.

ಬಾಬಾಸಾಹೇಬರು ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಹೊರತುಪಡಿಸಿದರೆ ಮಾಧ್ಯಮ ರಂಗದ ಮೇಲೆ ನಂಬಿಕೆ ಇಟ್ಟಿದ್ದರು. ಮಾಧ್ಯಮವೂ ಕೂಡ ಇಂತಹ ಸುದ್ದಿಯನ್ನು ಪಾರದರ್ಶಕವಾಗಿ ವಿಚಾರಣೆ ನಡೆಸುವಂತೆ ತಾಕೀತು ಮಾಡುವಲ್ಲಿ ವಿಪಲವಾಗಿದೆ ಎನ್ನುವುದನ್ನು ನೋಡಿದರೆ ಭಾರತ ಬದಲಾಗುತ್ತಿದೆ ಎಂದಲ್ಲವೇ.. ಎಂತಹ ವಿಪರ್ಯಾಸ ..?? ಎಂದು ಹೇಳಿದ್ದಾರೆ.ಈ ದೇಶದಲ್ಲಿ ಏನಾಗ್ತಿದೆ ಬಾಂಬ್ ಇಟ್ಟವನು ಮಾನಸಿಕ ಅಸ್ವಸ್ಥ.? ದ್ವಂಸ ಮಾಡಿದವ ಮಾನಸಿಕ ಅಸ್ವಸ್ಥ.? ಹಾಗಿದ್ದ ಮೇಲೆ ದೇಶದ ಸ್ವಾಸ್ಥ್ಯ ಕೆಡುತ್ತಿರುವುದು ಸತ್ಯವೆಂದಾಯ್ತು. ಎಲ್ಲಿಂದ ಕೆಡುತ್ತಿದೆ ಎಂಬುದನ್ನು ಮನಗಂಡರೇ ಒಳಿತು. ಕೊರೋನಾ ತರಹದ ವೈರಸ್ ನಮ್ಮ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ ಎಂದಾಯ್ತು.

ಇದರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಹೋರಾಟ ರೂಪಿಸುವ ಅನಿವಾರ್ಯತೆ ಯುವ ಜನತೆಯ ಮೇಲಿದೆ.

ಆರೋಪಿಗಳನ್ನು ರಕ್ಷಿಸುವ ಷಡ್ಯಂತ್ರ ನಡೆಯುತ್ತಿರುವುದು ಖಂಡನೀಯ, ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ವಿದ್ವಂಸಕ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ದೇಶದ್ರೋಹಿ ಎಂದು ಪರಿಗಣಿಸಿ, ಗಡಿಪಾರು ಮಾಡಿ ಆದೇಶಿಸಬೇಕೆಂದು ಕರ್ನಾಟಕ ಪರಿಶಿಷ್ಟರ ಪರಿವರ್ತನಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದರ್ಶನ್ ಜಿ. ಹೆಚ್ ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?