Saturday, April 20, 2024
Google search engine
Homeಸಾಹಿತ್ಯ ಸಂವಾದಅರಿವ ಸೂರ್ಯ

ಅರಿವ ಸೂರ್ಯ

ದೇವರಹಳ್ಳಿ ಧನಂಜಯ


ಬೆಳಗೂ ಬೆೃಗು
ಸೂರ್ಯನ ಓಕಳಿಯಾಟ
ನಿಲ್ಲುವುದಿಲ್ಲ.

ಕಾಲ ದೇಶವ
ಮೀರಿದ ಎಚ್ಚರದ
ಧ್ವನಿ ನಿನ್ನದು.

ತರತಮದ
ಕತ್ತಲೆಯ ಆಟಕ್ಕೆ
ಉಳಿವು ಇಲ್ಲ

ಕಪಟ ಶಾಸ್ತ್ರ
ನಡೆಯದು ದಲಿತ
ಸೂರ್ಯನೆದುರು

ಒಳ-ಹೊರಗು
ಸಂಚಯ ವಾಗುತ್ತಿದೆ
ನೀ ಕೊಟ್ಟ ಸ್ಪೂರ್ತಿ

ಅಪಮಾನದ
ಕುಲುಮೆಯಲ್ಲಿ ಬೆಂದು
ಹದಗೊಂಡವ

‌ನೀ ಧಮನಿತ
ಬಂಧು ಬಾಬಾಸಾಹೇಬ
ನಮಿಪೆವಿಂದು

ಕ್ಷಣಕ್ಷಣವೂ
ಪಿತೂರಿ ನಡೆದಿದೆ
ನಿನ್ನ ನಾಶಕೆ

ಕ್ರಾಂತಿ ಚಿಲುಮೆ
ಅರಿವ ಸೂರ್ಯನಿಗೆ
ಸಾವೆಂಬುದಿಲ್ಲ

ನಿನ್ನ ಅದಮ್ಯ
ಶಕ್ತಿಗೆ ತಡೆಯಲ್ಲ
ಜಾತಿ ಸೂತಕ.

ಬೂದಿಯಾಯಿತು
ಪೊಳ್ಳು ಪುರಾಣ ನಿನ್ನ
ಪ್ರಖರತೆಗೆ

ಮನುವಾದವ
ಪುಡಿಗಟ್ಟಿ ಕಟ್ಟಿದೆ
ನವಭಾರತ

ಪ್ರಜಾಪ್ರಭುತ್ವ
ಸಮಾನತೆ ಭ್ರಾತೃತ್ವ
ಬಾಳಿನ ತತ್ವ

ಎಂದು ಸಾರಿದೆ
ನೀ ಕೊಟ್ಟ ಸಂವಿಧಾನ
ಬೆಳಕ ದೊಂದಿ

ನಡೆಯುತ್ತೇವೆ
ನಿನ್ನ ಅರಿವ ದೀಪ
ಹಿಡಿದು ಮುಂದೆ.

ಮೊಳಗುತ್ತಿದೆ
ಧಮ ಧಮನಿಯಲಿ
ಕ್ರಾಂತಿಯ ಗೀತೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?