Friday, March 29, 2024
Google search engine
Homeಸಾಹಿತ್ಯ ಸಂವಾದಈಗ ಯೂಟ್ಯೂಬ್ ನಲ್ಲಿ: ಲಂಕೇಶರ "ಗುಣಮುಖ" ಸಾರ್ವಕಾಲಿಕ

ಈಗ ಯೂಟ್ಯೂಬ್ ನಲ್ಲಿ: ಲಂಕೇಶರ “ಗುಣಮುಖ” ಸಾರ್ವಕಾಲಿಕ

ಲಾಕ್ ಡೌನ್ ಸಮಯವನ್ನು ಮನೆಯಲ್ಲಿ ಕಳೆಯುವುದು ಕೆಲವರಿಗೆ ತಲೆನೋವು, ಇನ್ನೂ ಕೆಲವರಿಗೆ ಹಿಂಸೆ, ಜುಗುಪ್ಸೆ. ಆದರೆ ಅದೊಂದು ಸುಸಮಯ ಹಳೆಯ ಸಿನಿಮಾ ನೋಡುತ್ತಾ ಮತ್ತು ಕೃತಿಗಳನ್ನು ಓದುತ್ತಾ ಕಾಲವನ್ನು ಸುಗಮವಾಗಿ ದೂಡಬಹುದು… ಬಿಡುವಾದಾಗ ಓದೋಣ, ನೋಡೋಣ, ಮಾಡೋಣವೆಂದ ಕೆಲಸಗಳನ್ನು ಮಾಡಲು ಇದು ಒಳ್ಳೆಯ ಸಮಯ..

ಬನ್ನಿ ಇನ್ನೇಕೆ ತಡ.
ನೀವು ಓದಿದ ಕೃತಿ, ನೋಡಿದ ಸಿನಿಮಾಗಳ ಬಗ್ಗೆ ನಿಮ್ಮ ಅನಿಸಿಕೆಯನ್ನು ಬರೆದು ಪಬ್ಲಿಕ್ ಸ್ಟೋರಿಗೆ ಕಳುಹಿಸಿಕೊಡಿ.

ಹೀಗೆ ಲಾಕ್ ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡ ಶೇಷಾದ್ರಿಪುರಂ ಪದವಿಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕರಾದ ಪ್ರಜ್ವಲ್ ರಾಯ್ ಗುಣಮುಖ ನಾಟಕವನ್ನು ವಿಶ್ಲೇಷಿಸಿದ್ದಾರೆ.

1993ರಲ್ಲಿ ಪಿ ಲಂಕೇಶ್ ಅವರು ರಚಿಸಿದ ನಾಟಕ ಗುಣಮುಖ 1740ರಲ್ಲಿ ನಾದಿರ್ ಷಾ ಭಾರತದ ಮೇಲೆ ದಂಡೆತ್ತಿ ಬಂದ ಐತಿಹಾಸಿಕ ಘಟನೆಯನ್ನು ವಾಸ್ತವದ ನೆಲೆಯಲ್ಲಿ ನಿರೂಪಿಸಿದ್ದಾರೆ. ಇದನ್ನು ನಿನಾಸಂ ಪ್ರದರ್ಶಿಸಿದ ದೃಶ್ಯರೂಪಕ ಯೂಟ್ಯೂಬ್ ನಲ್ಲಿ ನೋಡಲು ಲಭ್ಯವಿದೆ. ನಿನಾಸಂ ತಿರುಗಾಟ ೨೦೧೫ರಲ್ಲಿ ಮಂಜುಕೊಡಗು ಅವರು ಇದನ್ನು ನಿರ್ದೇಶಿಸಿದ್ದಾರೆ.

ಪ್ರಮುಖ ಪಾತ್ರಧಾರಿಗಳಾಗಿ

ಅವಿನಾಶ್ ರೈ ಎಮ್ ಕೆ: ನಾದಿರ್ ಷಾ

ಬಿಂದು ರಕ್ಷದಿ : ಹಕೀಮ ಅಲಾವಿಖಾ‌ನ್

ಚಂದನ್ ಎಂ : ನಜೀರಿದ್ದೀನ್

ನಾಗರಾಜ ಶಿರಸಿ : ನಜೀರ್

ಮನೋಜ್ : ತನ್ವಿರ್

ಮೋಹನ್ ಶೇಣಿ : ರಜ್ವಿ

ಶರತ್ : ಸಾದತ್ ಖಾನ್

ಶೃತಿ ವಿ ತಿಪಟೂರು : ಇಕ್ಬಾಲ್ ನಟಿಸಿದ್ದಾರೆ.

ಲಂಕೇಶರು ಆಧುನಿಕ ಬರಹಗಾರರು ಅವರು ಆಧುನಿಕ ನೆಲೆಯಲ್ಲಿ ನಾಟಕದ ಕೇಂದ್ರ ಪಾತ್ರವನ್ನು ಪೋಷಿಸುವಾಗ ಮನುಷ್ಯನಲ್ಲಿರುವ ಕಾಮ, ಅಸೂಯೆ, ಸೊಗಲಾಡಿತನ, ಉದ್ದಟತನಗಳ ಅನಾವರಣವಿಲ್ಲಿದೆ.

ಸಿನಿಮಾಗಿಂತ ರಂಗ ಪ್ರಸ್ತುತಿ ವಿಶೇಷವೆನಿಸಿಕೊಳ್ಳುತ್ತದೆ. ರಂಗ ಪ್ರಸ್ತುತಿ ಇದ್ದದ್ದು ಇದ್ದ ಹಾಗೆ ತೋರಿಸುತ್ತದೆ. ಕಿರುತೆರೆ ಇಲ್ಲದೆ ಇರುವುದನ್ನು ಇದ್ದ ಹಾಗೆ ತೋರಿಸುತ್ತೆ ನಾಟಕದ ಪ್ರಸ್ತುತಿ ಹೊನಲು ಬೆಳಕಿನ ನಡುವೆ ನಡೆಯುವುದರಿಂದ ಹಲವಾರು ರೀತಿಗಳಲ್ಲಿ ಗಮನಸೆಳೆಯುತ್ತದೆ.

ನಾಟಕ ಆರಂಭದಲ್ಲಿ ಹಮ್ಮು ಬಿಮ್ಮುನಲ್ಲಿ ಆರಂಭವಾಗುವ ನಾಟಕ ಕೊನೆಗೆ ಜೀವನದ ಸರಳ ಸತ್ಯಗಳನ್ನು ಅನಾವರಣಗೊಳೊಸುತ್ತದೆ.
ನಾಟಕದ ಕೇಂದ್ರ ಪಾತ್ರ ನಾದಿರ್ ಷಾ ಭಾವಾಭಿವ್ಯಕ್ತಿಯ ಕಾರಣದಿಂದ ಕಾಡುವ ಪಾತ್ರ. ಹಕೀಮನ ಪಾತ್ರ ಬಹುವ್ಯಾಖ್ಯನಗಳ ನೆಲೆಯಲ್ಲಿ ನಿಲ್ಲುವ ಪಾತ್ರ.
ಮನೋದೈಹಿಕ ಬೇನೆಯಿಂದ ಬಳಲುವ ಚಕ್ರವರ್ತಿ ಆತ್ಮನಿರೀಕ್ಷೆಯ ಮೇಲಾಗುವ ಆಕ್ರಮಣ, ಆಧುನಿಕ ಅನಾರೋಗ್ಯಕರ ಸಮಾಜದ ಪ್ರತಿನಿಧಿಯಾಗಿದ್ದಾನೆ.

ಅವಸಾನ ಮತ್ತು ಮರುಹುಟ್ಟುಗಳ ನಡುವೆ ಸಾಗುವ ಕ್ರಿಯೆಯಲ್ಲಿ ಪ್ರಜ್ಞಾಪೂರ್ವಕವಾಗಿ ಇತಿಹಾಸದ ವಿಚಾರವನ್ನು ನಿರೂಪಣಾ ಮಾಧ್ಯಮವಾಗಿ ಬಳಸಿಕೊಂಡಿದ್ದಾರೆ. ಏನನ್ನಾದರೂ ಹೇಳಬೇಕು ಅನಿಸಿದರೆ ಅದಕ್ಕೆ ಆಯ್ಕೆ ಮಾಡಿಕೊಂಡಿರುವ ಮಾಧ್ಯಮ ಕೂಡ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ಈ ನಾಟಕ ಪ್ರೇಕ್ಷಕನ ಮನಸ್ಸು ಗೆದ್ದಿದೆ.

ಇವತ್ತಿನ ಸಮಕಾಲೀನ ಸ್ಥಿತಿಗೆ ಮನುಷ್ಯನ ಆಳದಲ್ಲಿರುವ ಅಹಂಕಾರ ನಿಧಾನಕ್ಕೆ ಅನಾವರಣ ಗೊಳ್ಳುತ್ತದೆ. “ಆಯಕಟ್ಟಿನಲ್ಲಿ ಅವಿವೇಕಿಗಳು ಕುಳಿತಿರುವುದು ಖೇದಕರ ಸಂಗತಿ. ಅರಾಜಕತೆ, ಲೋಲುಪತೆಯಲ್ಲಿ ಮುಳುಗೇಳುವ ನಾಯಕರು. ಅವರ ಖಾಸಗಿ ಬದುಕಿನ ರೋಗ, ಪಿತೂರಿ, ಆತ್ಮಾಭಿಮಾನ, ಪಟ್ಟಂಗಿತನದ ನಡುವೆ ಸದಾಕಾಲ ಸತ್ಯವನ್ನು ಹುಡುಕುವ ಪಾತ್ರವಾಗಿ ಹಕೀಮ ನಾದಿರ್ ಷಾನ ತಪ್ಪುಗಳನ್ನು ಮನವರಿಕೆ ಮಾಡಿಸುತ್ತಾನೆ. ಮನೋದೈಹಿಕ ಬೇನೆಯಿಂದ ಬಳಲುವ ” ಚಕ್ರವರ್ತಿ ” ಪ್ರೇಕ್ಷಕರ ಮಧ್ಯೆ ಬೆತ್ತಲಾಗುತ್ತಾನೆ.

ಹಿಂಸಾರಸಿಕನಾದ ನಾದಿರ್ ಷಾ ಇಂದಿನ ನಾಯಕರನ್ನು ಪ್ರತಿನಿಧಿಸುತ್ತಾನೆ. ಭ್ರಮೆಯಲ್ಲಿ ಬದುಕುವ ನಾದಿರ್ ಷಾ ರಾಜನ ಕೆಲಸ ಪ್ರಜೆಗಳಿಗೆ ಒಳಿತು ಮಾಡುವುದು ಎನ್ನುವುದನ್ನು ಮರೆಯುತ್ತಾನೆ. ಸದಾಕಾಲ ಕತ್ತಿಯ ತುದಿ ರಕ್ತಸಿಕ್ತವಾಗಿರುವಂತೆ ನೋಡಿಕೊಂಡವ. ಅಂತಹವನು ಹಕೀಮನ ತಾಳ್ಮೆ, ಸತ್ಯ ಹೇಳುವ ಗಟ್ಟಿತನ, ಸರಳತೆಯ ಮುಂದೆ ಶರಣಾಗುತ್ತಾನೆ.
ಹಕೀಮನು ಗಂಭೀರ ಕಾಯಿಲೆಯನ್ನು ಗೆಲ್ಲಲು ಮೊದಲು ಮನಸ್ಸಿನಲ್ಲಿರುವ ಅಹಂಕಾರದ ಕುರುಡನ್ನು ಇಲ್ಲವಾಗಿಸಬೇಕು ಅದೊಂದು ಆತ್ಮಹತ್ಯೆಯ ಪ್ರಕ್ರಿಯೆ ಎನ್ನುತ್ತಾನೆ.

ಹಕೀಮ ಮತ್ತು ಅಲ್ಲಿ ಬರುವ ನೃತ್ಯಗಾರ್ತಿ ಹೇಳುವ ಜೀವನದ ಸತ್ಯಗಳು ಅವನನ್ನು ಅಣುಕಿಸಿದಂತೆ ಭಾವಿಸುತ್ತಾನೆ. ಮನುಷ್ಯನಿಗೆ ಕಷ್ಟದ ಸಂದರ್ಭದಲ್ಲಿ ಯಾರು ಜೊತೆಯಲ್ಲಿ ನಿಲ್ಲುವುದಿಲ್ಲ ಎಂಬ ವಾಸ್ತವ ಸತ್ಯದ ಅರಿವುಂಟಗುತ್ತದೆ.
ರಾಜನಾದವನಿಗೆ ಕಣ್ಣು ಮತ್ತು ಕಿವಿ ಇರಬೇಕು. ಕಣ್ಣುಮುಚ್ಚಿ ಯೋಚಿಸಿ ಬುದ್ದಿ ಕುರುಡನ್ನು ಹೊಗಲಾಡಿಸಿಕೊಳ್ಳಬೇಕೆಂದು ತಿಳಿಯುತ್ತಾನೆ.

ಹಕೀಮ ಪ್ರಶ್ನಿಸಿದಾಗ ನಾದಿರ್ ಷಾ ನಿಗೆ ಅವನ ಭೋಗಾಸಕ್ತ ಗುಣ, ಹೆಣ್ಣನ್ನು ಮನುಷ್ಯರನ್ನು ವಸ್ತುವಿನಂತೆ ಕಾಣುವ ರೀತಿ, ನೆನಪಿನ ಕಾರಾಗೃಹದಲ್ಲಿ ಬಂದಿಯಾಗಿರುವ ಇಬ್ಬಂದಿತನದ ಬೇಗುದಿಯಲ್ಲಿ ಸಿಲುಕಿ ಹೇಗೆ ದೇಹ ಮತ್ತು ಪಂಚೇಂದ್ರಿಯಗಳು ಅಹಂನ ವಿಷವರ್ತುಲದಲ್ಲಿ ಸಿಲುಕಿವೆ ಎಂಬುದನ್ನು ಮನವರಿಕೆ ಮಾಡಿಸುತ್ತಾನೆ. ಜೀವನದಲ್ಲಿ ಕಟ್ಟಕಡೆಯಲ್ಲಿ ಪ್ರೇಮವಷ್ಟೇ ಮುಖ್ಯವಾಗುತ್ತದೆ ಎಂಬುದನ್ನು ಈ ನಾಟಕ ಸಾಭೀತುಪಡಿಸುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?