Friday, April 12, 2024
Google search engine
Homeತುಮಕೂರು ಲೈವ್ಈ ನಾಲ್ಕು ಕಾಯ್ದೆಗಳ ತಿದ್ದುಪಡಿಗೆ ರೈತರೇಕೆ ವಿರೋಧ

ಈ ನಾಲ್ಕು ಕಾಯ್ದೆಗಳ ತಿದ್ದುಪಡಿಗೆ ರೈತರೇಕೆ ವಿರೋಧ

ತುಮಕೂರು: ಎಪಿಎಂಸಿ, ಭೂ ಸುಧಾರಣೆ, ವಿದ್ಯುತ್, ಬೀಜ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಜೂನ್ 27 ರಿಂದ 30ರವರೆಗೆ ಗ್ರಾಮ ಪಂಚಾಯಿತಿಗಳ ಎದುರು ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಐಕೆಎಸ್‍ಸಿಸಿ ಸಂಚಾಲಕ ಸಿ.ಯತಿರಾಜು ತಿಳಿಸಿದರು.

ದೇಶದ ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣಾ ಕಸುಬುದಾರರನ್ನು ಸಾಮ್ರಾಜ್ಯಶಾಹಿಗಳು, ಕಾರ್ಪೋರೇಟ್ ಕಂಪನಿಗಳಿಗೆ ಗುಲಾಮರನ್ನಾಗಿ ಮಾಡಲು ಎಪಿಎಂಸಿ ಕಾಯ್ದೆ ತಿದ್ದುಪಡ್ಡಿ ಮಾಡಿ, ಸರ್ಕಾರದ ನಿಯಂತ್ರಿತ ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆಯನ್ನು ನಾಶಮಾಡಲು ಉದ್ದೇಶಿಸಲಾಗಿದೆ.

ಮೆಟ್ರೋ, ಮೋರ್, ರಿಲೆಯನ್ಸ್ ಪ್ರೆಶ್, ಡಿಮಾರ್ಟ್, ಬಿಗ್‍ಬಾಸಕಟ್‍ನಂತಹ ದೈತ್ಯ ಕಾರ್ಪೋರೇಟ್ ಕಂಪನಿಗಳು ಖರೀದಿ ಶುರುಮಾಡಲಿವೆ.

ಉತ್ಪನ್ನಗಳನ್ನು ಖರೀದಿಸಿ ದೊಡ್ಡ ಪ್ರಮಾಣದಲ್ಲಿ ದಾಸ್ತಾನು ಮಾಡಬೇಕು, ದೇಶ ವಿದೇಶಿಗಳಿಗೆ ಸಾಗಾಣಿಕೆ ಮಾಡಬೇಕು, ಇಷ್ಟ ಬಂದ ದರಗಳಿಗೆ ಮಾರಾಟ ಮಾಡಬೇಕು. ಇದಕ್ಕೆ ಅಗತ್ಯ ವಸ್ತುಗಳನ್ನು ಇವರೇ ಖರೀದಿ ಮಾಡಬೇಕು, ಇಷ್ಟೇ ಖರೀದಿ ಮಾಡಬೇಕು.

ಇಷ್ಟೇ ದಾಸ್ತಾನು ಮಾಡಬೇಕು ಮತ್ತು ಇಷ್ಟೇ ದರಕ್ಕೆ ಮಾರಾಟ ಮಾಡಬೇಕೆನ್ನುವ ಅಗತ್ಯ ವಸ್ತುಗಳ ಕಾಯ್ದೆ-1955ಈ ಪ್ರಕ್ರಿಯೆಗೆ ಅಡ್ಡಿಉಂಟು ಮಾಡುತ್ತದೆ. ಆದರಿಂದಲ್ಲೇ ಅಗತ್ಯ ವಸ್ತುಗಳ ಕಾಯ್ದೆ (ತಿದ್ದುಪಡಿ) 2020’ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ತಕ್ಷಣ ಜಾರಿಗೆ ತಂದಿದೆ ಎಂದು ಆರೋಪಿಸಿದರು.

ಒಂದು ರೈತ ಕುಟುಂಬ ಗರಿಷ್ಠ 54 ಎಕರೆ ಮಾತ್ರ ಭೂಮಿಯನ್ನು ಹೊಂದಬಹುದು ಎಂಬುದನ್ನು ಬದಲಿಸಿ ಐದು ಜನರಿಗಿಂತ ಹೆಚ್ಚಿರುವ ಕುಟುಂಬ 216 ಎಕರೆ ಭೂಮಿಯನ್ನು ಹೊಂದಬಹುದೆಂದು ತಿದ್ದುಪಡಿಯನ್ನು ತರಲು ಸಚಿವ ಸಂಪುಟ ತೀರ್ಮಾನಿಸಿದೆ.

ಇದರ ಪರಿಣಾಮವಾಗಿ ಇನ್ನೂ ಕೇಲವೇ ವರ್ಷಗಳಲ್ಲಿ ಐದು ಎಕರೆಗಿಂತ ಕಡಿಮೆ ಭೂಮಿ ಇರುವ ಶೇ. 85 ರಷ್ಟು ಸಣ್ಣ, ಅತಿ ಸಣ್ಣ ರೈತರು ಮತ್ತಿತರು ತಕ್ಷಣಕ್ಕೆ ಕಾಣುವ ಹಣದಾಸೆಗೆ ಮೋಸಹೋಗಿ ತಮ್ಮ ಭೂಮಿಗಳನ್ನು ಮಾರಾಟ ಮಾಡಿ ಈಗಾಗಲೇ ಶೇ. 40 ಕ್ಕಿಂತ ಹೆಚ್ಚಿಗೆ ಇರುವ ಭೂಹೀನರ ಕುಟುಂಬಗಳ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.

ಇದು ಉಳುವವನೇ ಹೊಲದೊಡೆಯ ಬದಲು ಇರುವವನೇ ಹೊಲದೊಡೆಯಾಗಲಿದೆ ಎಂದು ಕಾರ್ಯದರ್ಶಿ ಬಿ.ಉಮೇಶ್ ತಿಳಿಸಿದರು.

ಜೂನ್ 27 ರಿಂದ 30ರವರೆಗೆ ಗ್ರಾಮ ಪಂಚಾಯ್ತಿ ಎದುರು ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದು ಜೂನ್ 29-06-2020ರಂದು ಜಿಲ್ಲಾ ಕೇಂದ್ರದಲ್ಲಿರುವ ತುಮಕೂರು ನಗರ ಗ್ರಾಮಾಂತರ ಶಿರಾ ಗುಬ್ಬಿ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಿ ಜನಪ್ರತಿನಿಧಿಗಳು ರೈತಪರವಾದ ಕಾನೂನು ಜಾರಿಗೆ ಸರ್ಕಾರವನ್ನು ಒತ್ತಾಯಿಸುವಂತೆ ಮನವಿ ನೀಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ರೈತ ಮುಖಂಡರಾದ ಎಚ್.ಎಂ.ರವೀಶ್, ಚಿಕ್ಕಬೈರೇಗೌಡ, ರಂಗಹನುಮಯ್ಯ ರಾಜ್ಯ ಕಾರ್ಯದರ್ಶಿ ಬಿ.ಎಸ್. ಶಂಕರಪ್ಪ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?