Thursday, March 28, 2024
Google search engine
Homeಜನಮನಕನ್ನಡ ಭಾಷೆ ಶೋಕಿಯಾಗದಿರಲಿ

ಕನ್ನಡ ಭಾಷೆ ಶೋಕಿಯಾಗದಿರಲಿ

ಮಮತಾ ಗೌಡ


ನಮ್ಮ ಭಾಷೆ ನಮ್ಮ ಹೆಮ್ಮೆ,

ನಮ್ಮ ಸಂಸ್ಕತಿ ನಮ್ಮ ಹೆಮ್ಮೆ,

ಹುಟ್ಟಿದರೆ ಕನ್ನಡ ನಾಡ ಲ್ಲೆ ಹುಟ್ಟಬೇಕು ,

ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ,

ಕನ್ನಡ ಎಂದಾಕ್ಷಣ ನನಗೆ ನೆನಪಾಗೋ ಸಾಯುಗಳಿವು. ನಮ್ಮ ಸಂಸ್ಕೃತಿನೇ ಹಾಗೇ ಕನ್ನಡ ಎನ್ನುವ ಮೂರು ಅಕ್ಷರಗಳಲ್ಲಿ ಪ್ರೀತಿ, ಸಹನೆ, ಸೌಹಾರ್ದಯ ಎಲ್ಲವನ್ನು ತನ್ನಲ್ಲಿ ಅಡಗಿಸಿ ಕೊಂಡಿದೆ.


ಕಾರ್ಟೂನ್ ಕಾರ್ನರ್,: ಕೆ.ಎಂ. ಮುಸ್ತಾಫ, ರಿಪ್ಪನ್ ಪೇಟೆ


ಹರಿಶಿನ ಕುಂಕುಮ ಸಾರುವ ಕನ್ನಡ :

ಹೌದು ನಾವು, ಅಂದರೆ ಹೆಣ್ಣು ಮಕ್ಕಳು ದರಿಸುವ ಹರಿಶಿನ ಕುಂಕುಮದಲ್ಲಿ ಅಡಗಿದೆ ನಮ್ಮ ಸಂಸ್ಕೃತಿ, ನಾವು ಕನ್ನಡಿಗರು ಎಲ್ಲ ಭಾಷೆಗು ನಮ್ಮ ಕರ್ನಾಟಕ “ತವರು ಮನೆಯಾಗಿಬಿಟ್ಟಿದೆ” ಆದರೆ ಎಲ್ಲೋ ಒಂದು ಕಡೆ ನಮ್ಮ ಭಾಷೆ ತಬ್ಬಲಿಯಾಗದಿರಲಿ ಎನ್ನುವುದು ನನ್ನ ಆಸೆ. ನಮ್ಮ ಕನ್ನಡಕ್ಕೆ ವರುಷಗಳ ಇತಿಹಾಸವಿದೆ.

,ನದಿ ಮೂಲ, ಋಷಿ ಮೂಲ ಹಾಗೂ ಭಾಷೆ ಮೂಲ ಹುಡುಕಬಾರದಂತೆ ಆಗಾಗಿ ನಾನು ಹುಡುಕಲು ಹೋಗುವುದಿಲ್ಲ ಆದರೆ ಕನ್ನಡವನ್ನು ಕೆಳ ಮಟ್ಟದಲ್ಲಿ ನೋಡಿದರೆ, ಆಡಿದರೆ ಸಹಿಸುವುದಿಲ್ಲ.

ನಮ್ಮವರೇ ನನಗೆ ಕನ್ನಡ ಗೊತ್ತಿಲ್ಲ ಅಂದಾಗ ನನಗೆ ಬಹಳಷ್ಟು ನೋವಾಗುತ್ತದೆ. ಇಂದು ಅನ್ಯಭಾಷೆಗಳು ನಮ್ಮವರ ಮೇಲೆ ಮಂಕು ಬೂದಿ ಎರಚಿದ್ದರೆ ಎಂದು ನನಗೆ ಅನಿಸುತ್ತದೆ, ಈ ಮಧ್ಯೆ ಭಾಷೆ ಬಾವಾನೆಯಾಗಿ ಉಳಿದಿಲ್ಲ ಎಲ್ಲ ತಂದೆ -ತಾಯಿಯಾರಿಗೆ ತಮ್ಮ ಮಕ್ಕಳು ಇಂಗ್ಲಿಷನಲ್ಲೇ ಮಾತಾನಡಬೇಕು ಎನ್ನುವ ಆಸೆ, ಆಸೆಯಿರಲಿ ಆದರೆ ನಮ್ಮ ಕನ್ನಡವನ್ನು ಕಲಿಸಿ ಎನ್ನುವುದು ನನ್ನ ಆಸೆ.

ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ – ಈ ಹಾಡು ಕೇಳಿದಾಗ ಮೈರೋಮಾಂಚನವಾಗುತ್ತದೆ. ಇದರಲ್ಲಿ ಬಾವನೆಗಳ ಭಂಡಾರವಿದೆ. ಇತ್ತೀಚೆಗೆ ನಾನು ಕೇರಳ ಪ್ರವಾಸದಲ್ಲಿ ಒಬ್ಬ ವಿದೇಶಿ ಮಹಿಳೆಯನ್ನು ಭೇಟಿಯಾದೆ.‌ ಆಕೆಯ ಹೆಸರು Esperanza ನನಗೆ ಕುತೂಹಲ ತಾಳಲಾರದೇ ನಾನೇ ಆಕೆಯನ್ನು ಯಾವ ದೇಶ ಎಂದು ಕೇಳಿದೆ ಆಕೆ Spain ಎಂದು ಉತ್ತರಿಸಿದರು. ಮಾತಿನ ನಡುವೆ ನನಗೆ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತದೆ. ನನಗೆ ಕನ್ನಡದವರು ಎಂದರೇ ಬಹಳ ಎಷ್ಟ ಎಂದು ಅಂದಾಗ ನನಗೆ ಬಹಳ ಹೆಮ್ಮೆ ಎನಿಸಿತು. ಆಕೆ ತನ್ನ ಫೇಸ್ಬುಕ್ ಎಕೌಂಟ್ ಅನ್ನು ನನಗೆ ಕೊಟ್ಟು ನಾನು ಕರ್ನಾಟಕಕ್ಕೆ ಬಂದಾಗ ನಿಮ್ಮನ್ನು ಮತ್ತೊಮ್ಮೆ ಬೇಟೆಯಾಗುತ್ತೇನೆ ಎಂದು ಹೊರಟರು. ಆಗ ನನಗೆ ಅನಿಸಿದ್ದು ವಿದೇಶಿಗರಿಗೆ ನಮ್ಮ ಭಾಷೆ ಮೇಲೆ ಎಷ್ಟೊಂದು ಅಭಿಮಾನ ಇರುವಾಗ ನಮಗೆ ನಮ್ಮ ಭಾಷೆ ಮೇಲೆ ಇನ್ನೆಷ್ಟು ಅಭಿಮಾನ ಇರಬಾರದು ಅನಿಸಿತು. ಯಾರು ಬೇರೆ ದೇಶದವರು ನಮ್ಮ ಭಾಷೆಯನ್ನು ಇಷ್ಟೊಂದು ಪ್ರೀತಿಸಿಬೆಕಾದರೆ ಇನ್ನೂ ಇಲ್ಲೇ ಹುಟ್ಟಿ ಇಲ್ಲೇ ಬೆಳೆದ ನಾವು ಈ ಭಾಷೆಯನ್ನು ತಿಳಿದೋ ತಿಳಿಯದೆನೋ ತಬ್ಬಲಿ ಭಾಷೆ ಮಾಡುತಿದ್ದಿವಿ ಅನ್ಸುತ್ತೆ.

ಶೋಕಿಗೋಸ್ಕರ

ಯಾರು ಬೇರೆ ದೇಶದವರು ನಮ್ಮ ಭಾಷೆಯನ್ನು ಇಷ್ಟೊಂದು ಪ್ರೀತಿಸಿಬೆಕಾದರೆ ಇನ್ನೂ ಇಲ್ಲೇ ಹುಟ್ಟಿ ಇಲ್ಲೇ ಬೆಳೆದ ನಾವು ಈ ಭಾಷೆಯನ್ನು ತಿಳಿದೋ ತಿಳಿಯದೆನೋ ತಬ್ಬಲಿ ಭಾಷೆ ಮಾಡುತಿದ್ದಿವಿ ಅನ್ಸುತ್ತೆ.

ಶೋಕಿಗೋಸ್ಕರ, ಕೇವಲ ನವೆಂಬರ್ ೧ ನೇ ತಾರೀಖಿಗೆ ಕನ್ನಡಿಗಾರಗಬೇಡಿ, ತಾಯಿ ಭುವನೇಶ್ವರಿಯನ್ನು ತಬ್ಬಲಿ ಮಾಡಬೇಡಿ ನೆಲ,ಜಲ , ಭಾಷೆ, ಭಾವನೆಗಳಿಗೆ ಬೆಲೆ ಕೊಡಿ. ಸಾವಿರಾರು ಕವಿಗಳ ನಾಡನ್ನು, ಕಲಿಗಳ ಬಿಡನ್ನು ತಬ್ಬಲಿ ಮಾಡದಿರಿ. ಕರ್ನಾಟಕ ತೊರೆಯದಿರಿ ಕನ್ನಡ ಅಳಿಸದಿರಿ.

ನಾವು ಬಹು ಮುಖ್ಯವಾಗಿ ಪಾಲಿಸಬೇಕಾದ ಅ೦ಶಗಳು :

೧. ಮಾತೃ ಭಾಷೆಯನ್ನು ಮನೆಯಲ್ಲಿ ಆದಷ್ಟು ಬಳಸಿ, ಉಳಿಸಿ.

೨. ಮಕ್ಕಳಿಗೆ ಕನ್ನಡ ಕಥೆ ಹೇಳಿ ಅವರಿಗೆ ಇಂದಿನಿದಲೇ ಕನ್ನಡದ ಬಗ್ಗೆ ಅಭಿಮಾನ ಬೆಳೆಸಿ.

೩. ಹೊರಗಡೆ ಹೋದಾಗ ಮೊದಲು ಕನ್ನಡದಲ್ಲಿ ವ್ಯವಹಾರಿಸಿ ಅವರಿಗೆ ಅರ್ಥವಾಗದೆ ಹೋದಾಗ ಇಂಗ್ಲೀಷ್ ಬಳಸಿ.

೪. ಕನ್ನಡಕ್ಕೆ ವರ್ಷಗಳ ಇತಿಹಾಸವಿದೆ ತಿಳಿದಿರಲಿ.

ಕನ್ನಡ ಶೋಕಿಯಾಗದೆ, ಕನ್ನಡಕ್ಕೆ ಮಹತ್ವ ನೀಡಿ, ಶಾಪ್ಗಳಲ್ಲಿ ಕನ್ನಡ ಬೋರ್ಡ್ಗಳಿರುವಂತೆ ನೋಡಿಕೊಳ್ಳಿ.

ಜೈ ಭುವನೇಶ್ವರಿ…..
RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?