Thursday, March 28, 2024
Google search engine
Homeಜಸ್ಟ್ ನ್ಯೂಸ್ಕರ್ಪ್ಯೂ / ಲಾಕ್ ಡೌನ್ ಮಾರ್ಗಸೂಚಿ: ಏನು ಹೇಳುತ್ತೆ

ಕರ್ಪ್ಯೂ / ಲಾಕ್ ಡೌನ್ ಮಾರ್ಗಸೂಚಿ: ಏನು ಹೇಳುತ್ತೆ

ಕೋವಿಡ್_19 ರೋಗಾಣುವಿನ ಹರಡುವಿಕೆಯನ್ನು ತಡೆಗಟ್ಟಲು ರಾಜ್ಯ ಸರಕಾರ ಜಾರಿಗೆ ತಂದಿರುವ ಕರ್ಫ್ಯೂ/ಲಾಕ್ ಡೌನ್ ಮೇ 10, ಬೆಳಿಗ್ಗೆ 6:00 ರಿಂದ ಪ್ರಾರಂಭವಾಗಲಿದ್ದು ಮೇ 24,ಸಂಜೆ 6:00 ಗಂಟೆಯವರೆಗೆ ಮುಂದುವರಿಯಲಿದ್ದು ಅದರಂತೆ

1) ಬೈಕು, ಕಾರು, ಬಸ್ಸು, ಆಟೋಗಳು ರಸ್ತೆಯಲ್ಲಿ ಓಡಾಡುವಂತಿಲ್ಲ ಮೆಡಿಕಲ್ ಎಮರ್ಜೆನ್ಸಿ ,ರೈಲ್ವೆ ನಿಲ್ದಾಣಕ್ಕೆ ಹೋಗಲು ಟಿಕೆಟ್ಟನ್ನು ಹೊಂದಿದ್ದಲ್ಲಿ ,ಏರ್ಪೋರ್ಟ ಹೋಗಲು ಟಿಕೆಟ್ ಹೊಂದಿದ್ದಲ್ಲಿ ಮಾತ್ರ ಅವಕಾಶ

2) ಹಣ್ಣು, ತರಕಾರಿ, ದಿನಸಿ, ಹಾಲು,ಮಾಂಸ, 10:00 ಗಂಟೆ ಯವರೆಗೆ ಕೊಳ್ಳಲು ಅವಕಾಶವಿದ್ದು, ನಡೆದುಕೊಂಡೆ ತಮ್ಮ ಹತ್ತಿರದ ಅಂಗಡಿಗೆ ಹೋಗಿ ಖರೀದಿಸ ತಕ್ಕದ್ದು. ಮನೆಗೆ ಬೇಕಾಗಿರುವ ದಿನಸಿಯನ್ನು ಹತ್ತಿರದ ಅಂಗಂಡಿಗಳಿಂದ ಖರೀದಿಸಬೇಕು. ತಾನು ಸಾಕಿರುವ ಪ್ರಾಣಿಗಳಿಗೂ ಕೂಡ ಹತ್ತಿರದಲ್ಲಿ ಸಿಕ್ಕರೆ ಖರೀದಿಸಬಹುದು ಇಲ್ಲವೇ ಆನ್ಲೈನ್ ಮೂಲಕ ಖರೀದಿಸಿ ಎಂದು ಸಲಹೆ ಮಾಡಿದೆ. ಔಷದಿ ಖರೀದಿಸಲು ಕೂಡ ಹತ್ತಿರದಲ್ಲಿ ಲಭ್ಯವಿರುವ ಕಡೆ ಖರೀದಿಬಹುದು.

3) ಹಣ್ಣು-ತರಕಾರಿ ಹೂಗಳನ್ನು ತಳ್ಳುವ ಗಾಡಿಗಳ ಮೇಲೆ ಮನೆಮನೆಗಳ ಬೀದಿಗಳಲ್ಲಿ ಹೋಗಿ ಮಾರಾಟ ಮಾಡತಕ್ಕದ್ದು. ಯಾವುದೇ ಕಾರಣಕ್ಕೂ ರಸ್ತೆಯ ಬದಿಗಳಲ್ಲಿ ಅಂಗಡಿಗಳನ್ನು ಇಡುವಂತಿಲ್ಲ

4) ನಿಯಮಗಳನ್ನು ಮೀರಿ ಅನಗತ್ಯವಾಗಿ ಓಡಾಡುವ ವಾಹನಗಳನ್ನು ವಶಕ್ಕೆ ಪಡೆದು ಸದರಿ ವಾಹನಗಳನ್ನು ಕರ್ಫ್ಯೂ/ಲಾಕ್ ಡೌನ್ ಅವಧಿ ಮುಗಿದ ನಂತರ ಸುರಕ್ಷಿತವಾಗಿ ಹಿಂತಿರುಗಿಸಲಾಗುವುದು. ಅಲ್ಲಿಯವರೆಗೆ ಯಾವುದೇ ನಾಗರಿಕರು ವಾಹನಗಳನ್ನು ಬಿಡಿಸಿಕೊಳ್ಳಲು ಪೊಲೀಸ್ ಠಾಣೆ ಗಳಿಗೆ ಬರಬಾರದೆಂದು ಈ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳಲಾಗಿದೆ.

5) ಒಂಟಿಯಾಗಿರುವ ಹಿರಿಯರನ್ನು ನೋಡಲು ಹೋಗಬಹುದೇ ?

ಇಲ್ಲವೆನ್ನುತ್ತದೆ. ಅವರಿಗೆ ಅಗತ್ಯವಿರುವ ವಸ್ತುಗಳನ್ನು ಆನ್ಲೈನ್ ಮೂಲಕ ಬುಕ್ ಮಾಡುವ ಮೂಲಕ ಸಹಕರಿಸಿ ಎನ್ನುತ್ತದೆ. ಬೆಂಗಳೂರಿನ ಹಿರಿಯ ನಾಗರೀಕರಿಗಾಗಿ ಸಹಾಯ ವಾಣಿ ತೆರೆಯಲಾಗಿದೆ

1090, 08022943226,

974477226,9243737230 ಈ ಸಂಖ್ಯೆ ಗಳಿಗೆ ಕರೆಮಾಡಿದರೆ ಅಗತ್ಯ ಸೇವೆಯನ್ನು ಅಲ್ಲಿ ಪ್ರಾದೇಶಿಕ ಸಂಸ್ಥೆಗಳ ಮೂಲಕ ಒದಗಿಸಲಾಗುವುದು.

6) ಕೋವಿಡ್ ನಿಯಂತ್ರಣಕ್ಕೆ ಸಹಕಸಿರುವ ಕೆಲಸಗಾರರು, ಅಗತ್ಯ ವಸ್ತುಗಳ ಡಿಲೆವರಿ ಕೊಡುವ ಈ ವಾಣಿಜ್ಯ ಮಳಿಗೆಯವರಿಗೆ ಅವಕಾಶ ನೀಡಲಾಗಿದೆ. ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿರುವ ಅಗತ್ಯ ನೌಕರರು ಮಾತ್ರ ಓಡಾಡುವ ಅವಕಾಶವಿದೆ. ಅವರು ಅವರ ಗುರುತಿನ ಚೀಟಿ ತೆಗೆದುಕೊಂಡು ಹೋಗಬೇಕು. ಉಳಿದಂತೆ ಆರೋಗ್ಯ ತುರ್ತು‌ ಇರುವವರು ಪೋಲಿಸ್ ಠಾಣೆಯಲ್ಲಿ ೧೨ ತಾಸಿನ ಪಾಸ್ ಪಡೆಯಬೇಕು. ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪಡೆಯತಕ್ಕದ್ದು

7) ನಾವು ಬೇರೆ ಜಿಲ್ಲೆಗೆ ಪ್ರಯಾಣಿಸಬಹುದೇ ?

ಇಲ್ಲವೆನ್ನುತ್ತದೆ ಮಾರ್ಗಸೂಚಿ.ಆರೋಗ್ಯ ತುರ್ತು ಇದ್ದರೆ ಲಿಖಿತ ಅರ್ಜಿಯನ್ನು ಡಿಸಿಪಿ ಅವರಿಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿ ಡಿ ಸಿ ಪಿ ಯವರಿಂದ ಅನುಮತಿ ಪಡೆದು. ಪ್ರಯಾಣಿಸಬಹುದು.

ಸಾರ್ವಜನಿಕರಿಂದ ಕೇಳಿಬಂದ ಅಹವಾಲು ಏನೆಂದರೆ ?

ಮನೆಗೆಲಸ ಮಾಡಲು ಸಾಧ್ಯವಾಗದಂತಹ ಹಿರಿಯ ನಾಗರಿಕರಿಗೆ ಮನೆಕೆಲಸದವರ ಅಗತ್ಯ ವಿರುತ್ತದೆ ಅವರಿಗೆ ಅವಕಾಶ ಮಾಡಿಕೊಡಬೇಕಿತ್ತು ಎಂಬ ಮಾತು ಕೇಳಿಬರುತ್ತಿದೆ.

ಸಾರ್ವಜನಿಕರು ತಮ್ಮ ಸಮಸ್ಯೆಗೆ ಸಹಾಯವಾಣಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಬೆಂಗಳೂರು.080 22942200

08022942325

08022942330

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?