Saturday, April 13, 2024
Google search engine
Homeಜಸ್ಟ್ ನ್ಯೂಸ್ಕಲೋತ್ಸವದಲ್ಲಿ ಮಿಂದೆದ್ದ ಮಕ್ಕಳು

ಕಲೋತ್ಸವದಲ್ಲಿ ಮಿಂದೆದ್ದ ಮಕ್ಕಳು

Publicstory


ತುರುವೇಕೆರೆ: ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗು ಬಸವೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯ ಹುಲ್ಲೇಕೆರೆ ಇವುಗಳ ವತಿಯಿಂದ 2022-23ನೇ ಸಾಲಿನ ದಂಡಿನಶಿವರ ಹೋಬಳಿ ಮಟ್ಟದ ಪ್ರತಿಭಾಕಾರಂಜಿ-ಕಲೋತ್ಸವ ಕಾರ್ಯಕ್ರಮವು ಶುಕ್ರವಾರ ಜರುಗಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ.ಪದ್ಮನಾಬ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಕಲೋತ್ಸವ ಉತ್ತಮ ವೇದಿಕೆಯಾಗಿದೆ.

ಪಠ್ಯ ವಿಷಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಭಾಗವಹಿಸಿ ಮಕ್ಕಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳ ಬೇಕು. ಇದಕ್ಕೆ ಪ್ರತಿಭಾ ಕಾರಂಜಿ ಪೂರಕವಾಗಿ ಕೆಲಸ ಮಾಡಬೇಕು. ಕಲೋತ್ಸವದಲ್ಲಿ ಸ್ಪಧರ್ಿಸುವ ಮಕ್ಕಳಲ್ಲಿ ಪ್ರತಿಭಾವಂತ ಮತ್ತು ಸೃಜನಶೀಲ ಮಕ್ಕಳನ್ನು ಹುಡುಕಾಟ ನಡೆಸುವ ಕೆಲಸವಾಗ ಬೇಕೆ ವಿನಹ ಪಕ್ಷಪಾತ ಸಲ್ಲದು ಎಂದರು.

ಇಸಿಒ ಸಿದ್ದಪ್ಪ ಮಾತನಾಡಿ, ತಾಲ್ಲೂಕು ಮಟ್ಟಕ್ಕೆ ಕ್ರಿಯಾಶೀಲ ಮಕ್ಕಳನ್ನು ಆಯ್ಕೆ ಮಾಡಿ ಕಳುಹಿಸಿ ಇಲ್ಲಿ ಗೆದ್ದ ಮಕ್ಕಳ ಖಾತೆಗೆ ಹಣವನ್ನು ಬಹುಮಾನವಾಗಿ ಮಕ್ಕಳ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ವರ್ಗಾಯಿಹಿಸಲಾಗುವುದು ಹಾಗಾಗಿ ಶಿಕ್ಷಕರು ಮಕ್ಕಳ ಬ್ಯಾಂಕ್ ಖಾತೆ, ಆಧಾರ್ ನಂಬರ್ ಅನ್ನು ಕಡ್ಡಾಯವಾಗಿ ತರಬೇಕು ಎಂದರು.

ಛದ್ಮ ವೇಷ, ವೀರಗಾಸೆ ಕುಣಿತ, ಧ್ವಜಕುಣಿತ, ಸೋಮನ ಕುಣಿತ ಹಾಗು ಜಾನಪದ ನೃತ್ಯಗಳು ಪ್ರೇಕ್ಷಕರ ಗಮನ ಸೆಳೆಯಿತು. ತಮ್ಮ ಪಾತ್ರಗಳಿಗೆ ಮಕ್ಕಳೇ ಬಣ್ಣ ಹಚ್ಚಿ, ವೇಷ ಭೂಷಣ, ಆಭರಣ ತೊಟ್ಟು, ಖತ್ತಿ, ಗದೆ, ತ್ರಿಷೂಲ, ಬಿಲ್ಲು, ಬಾಣ ತಯಾರಿಸಿ ವೃತ್ತಿಪರ ಕಲಾವಿದರನ್ನೂ, ನೋಡುಗರನ್ನು ಹುಬ್ಬೇರುವಂತೆ ಮಾಡಿ ಜಾನಪದ ಉತ್ಸವದಂತೆ ಕಂಡು ಬಂದಿತು.
ಹೋಬಳಿ ಮಟ್ಟದಲ್ಲಿ ಆಯ್ಕೆಯಾದ ಮಕ್ಕಳನ್ನು ತಾಲ್ಲೂಕು ಮಟ್ಟಕ್ಕೆ ಕಳುಹಿಸಿಕೊಡಲಾಯಿತು.

ದಂಡಿನಶಿವರ ಹೋಬಳಿಯ 12 ಶಾಲೆಗಳ ಮಕ್ಕಳು, ಗ್ರಾಮಸ್ಥರು, ಪೋಷಕರು, ಕಲೋತ್ಸವದಲ್ಲಿ ಭಾಗವಹಿಸಿದ್ದರು. ಮಕ್ಕಳಿಗೆ, ಹಾಲು ಸಿಹಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸಮಾರಂಭದಲ್ಲಿ ಮುಖ್ಯ ಶಿಕ್ಷಕ ಎಸ್.ಎನ್.ಬಸವಯ್ಯ, ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಚ್.ಎನ್.ಮಹದೇವಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ ಸ್ವಾಮಿ ಎಚ್.ಬಿ, ಸದಸ್ಯ ಗಂಗಾಧರ ಸ್ವಾಮಿ, ಇಂಡಿಯನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷೆ ಗಂಗಾಮಣಿ ಮಹದೇವಯ್ಯ, ಸಹ ಕಾರ್ಯದರ್ಶಿ ಪ್ರಸನ್ನ ಕುಮಾರ್, ಮುಖಂಡ ಗಂಗಾಧರಯ್ಯ ಎಚ್.ಬಿ, ಬೋರೇಗೌಡ, ಸಿದ್ದು ಪಾಟೀಲ್, ಶಿಕ್ಷಕರುಗಳಾದ ಹಾ.ಪಂ.ಸೋಮಶೇಖರ್, ಬಿ.ಎಸ್.ಶಾಂತರಾಜು, ಜಿ.ಟಿ.ರಘು, ಗಂಗಣ್ಣ, ಪ್ರಕಾಶ್ ಮೂರ್ತಿ, ಬಸವರಾಜು, ಡಿ.ಬಿ.ಜಯಣ್ಣ ಸಿಬ್ಬಂದಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?