Thursday, March 28, 2024
Google search engine
Homeಜನಮನಗಾಂಧೀಜಿ ಕನಸಿನ ರಾಮ ರಾಜ್ಯ ಯಾವುದು?

ಗಾಂಧೀಜಿ ಕನಸಿನ ರಾಮ ರಾಜ್ಯ ಯಾವುದು?

ಶಿಲ್ಪಾ ಎಂ


ಗಾಂಧೀಜಿ ಕಂಡ ಕನಸು ಭಾರತ ರಾಮ ರಾಜ್ಯವಾಗ ಬೇಕು ಎಂದು. ಆದರೆ ಇಲ್ಲಿ ರಾಮ ಮಂದಿರ ಕಟ್ಟಲು ಅಷ್ಟೇ ಸಾಧ್ಯವಾಗುತ್ತಿರುವುದು ರಾಮ ರಾಜ್ಯವಾಗಲೂ ಸಾಧ್ಯವಿಲ್ಲ ಕಾರಣ ವಷ೯ಕ್ಕೆ ಬೆಳಕಿಗೆ ಬರುವ ಮತ್ತು ಬಾರದಿರುವ ಅದೆಷ್ಟುೂ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಅತ್ಯಾಚಾರಗಳು ಸಾರಿ ಸಾರಿ ಹೇಳುತ್ತಿವೆ ಎಂದು ಸಾಧ್ಯವಿಲ್ಲ ರಾಮರಾಜ್ಯವಾಗಲು ಎಂದು.

ಹೆಣ್ಣುಮಕ್ಕಳಿಗೆ ಇರದೆ ಇದ್ದ ಸಮಾನತೆಯ ಹಕ್ಕು, ಆಸ್ತಿಯ ಹಕ್ಕು, ಶಿಕ್ಷಣದ ಹಕ್ಕು ಶೋಷಣೆಯ ವಿರುದ್ದದ ಹಕ್ಕು ಇವೆಲ್ಲ ಇಂದು ಇರುವಂತಾಗಿದೆ. ಆದರೆ ಆಕೆಯನ್ನು ಆಕೆ ವ್ಯಾಘ್ರಗಳಿಂದ ರಕ್ಷಸಿಕೊಳ್ಳವ ಹಕ್ಕು ಮತ್ತು ಅವಳು ಧ್ಯೆಯ೯ವಾಗಿ ಆಚೆ ಹೋಗುವ ಹಕ್ಕು ಇಲ್ಲದಂತಾಗಿದೆ. ಅತ್ಯಚಾರಿಗಳಿಗೆ ಶಿಕ್ಷೆ ಕೊಡಿಸುವ ಹಕ್ಕು ಹೆಣ್ಣಿಗೆ ಇಲ್ಲದಂತಾಗಿದೆ.

ಅವಳನ್ನು ಅವಳು ರಕ್ಷಿಸಿಕೊಳ್ಳುವ ಮತ್ತು ಪುರಷರಿಂದ ಅವಳ ರಕ್ಷಣೆ ಸಾಧ್ಯವಿಲ್ಲ ಎಂದಾದರೆ ಮೇಲಿನ ಯಾವ ಹಕ್ಕುಗಳು ಪ್ರಯೋಜನಕ್ಕೆ ಇಲ್ಲವೆಂಬುದು ವಿಪಯ್ರಾಸ .

ಉತ್ತರ ಪ್ರದೇಶದಲ್ಲಿ ಮೊನ್ನೆ ಬೆಳಕಿಗೆ ಬಂದ ಅತ್ಯಾಚಾರ ಜಾತಿಯ ಹೆಸರಿಗೆ ತಳುಕು ಹಾಕಿಕೊಂಡು ನ್ಯಾಯ ಮುಚ್ಚಲ್ಪಟ್ಟಿದೆ ಎಂಬುದು ದುರಂತ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಆರಕ್ಷಕರ ಸೋಲು ಎಂಬುದು ಅರ್ಥ ವಾಗುತ್ತದೆ . ಈ ವ್ಯವಸ್ಥೆ ಸರಿ ಆಗುವವರೆಗೂ ಇಂತಹ ದುರಂತಗಳು ನೆಡೆಯುತ್ತಲೆ ಇರುತ್ತವೆ.

ಬೆಳಕಿಗೆ ಬಂದ ಕೆಲವೂ ಘಟನೆಗಳಿಗೆ ಮಾತ್ರ ಒಂದಷ್ಟು ಸಂಘಟನೆಗಳು ಹೆಣ್ಣುಮಕ್ಕಳು ಸಾಮಾನ್ಯರು ಒಟ್ಟಾಗಿ ಎಲ್ಲರೂ ಒಂದೆರಡು ದಿನ ಪ್ರತಿಭಟಿಸಲು ಅಷ್ಟೇ ಸಾಧ್ಯವಾಗುತ್ತಿದೆ .

ಬೆಳಕಿಗೆ ಬಾರದೆ ಅದೆಷ್ಟುೂ ಇಂತಹ ಕ್ರೂರ ಘಟನೆಗಳು ಕಂಡು ಕಾಣದಂತೆ ಮುಚ್ಚಿಹೋಗಿವೆ. ಪ್ರತಿಯೊಬ್ಬ ಹೆಣ್ಣು ಮಗಳಿಗೂ ಸಾವ೯ಜನಿಕ ಸ್ಥಳಗಳಲ್ಲಿ ಕಾಮುಕರು ಕಿರಿ ಕಿರಿ ಉಂಟುಮಾಡಿರುತ್ತಾರೆ. ಸಣ್ಣ ಸಣ್ಣ ಕಿರಿ ಕಿರಿಗಳಿಂದ ಹೆಣ್ಣುಮಕ್ಕಳು ಪ್ರತಿಭಟಿಸಲು ಹೋರಾಡಲು ಸಿದ್ದರಾಗಬೇಕು ಇಲ್ಲವಾದರೆ ದೊಡ್ಧ ದುರಂತಗಳಿಗೆ ದಾರಿ ಮಾಡಿದಂತಾಗುತ್ತದೆ .

ಉತ್ತರ ಪ್ರದೇಶ ರಾಮ ಹುಟ್ಟಿದ ನಾಡು. ಇಲ್ಲಿ ಹುಟ್ಟಿದ ಸೀತೆಯರಿಗೆ ನಿಭ೯ಯವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ ಮತ್ತು ಆದ ದುರಂತಗಳಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ ಎಂದು ರಾಮ ಅದೆಷ್ಟು ನೊಂದಿರಬಹುದು.

ನಾವು ಅದೆಷ್ಟೆ ಪ್ರತಿಷ್ಠೆ ಮತ್ತು ನಂಬಿಕೆಗಳಿಗಾಗಿ ಮಂದಿರಗಳನ್ನು,ಮಸೀದಿಗಳನ್ನು ಕಟ್ಟಲು ಸುಮಾರು ವಷ೯ಗಳು ಹೋರಾಡಿ ಗೆದ್ದು ಜ್ಯೆ ರಾಮ್ ಎಂದರೆ ಕಾಮುಕರಿಗೆ ಸಿಕ್ಕು ನರಳಾಡಿದ ಮನಿಷಾಳ ಆತ್ಮ ಖುಷಿಪಡುವುದೆ ಅಥವಾ ನಾವು ನಂಬಿದ ರಾಮ ನೆಮ್ಮದಿಯಾಗಿ ಮಂದಿರದಲ್ಲಿ ಇರುವನೆ ?

RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?