Sunday, March 17, 2024
Google search engine

ಗುರು

ಬರೇ ಪುಸ್ತಕವನ್ನು
ಮಸ್ತಕಕ್ಕೆ
ತುಂಬುವುದಲ್ಲಾ….

ತನ್ನ ಅನುಭವವೆಂಬ
ಮೂಸೆಯನ್ನು
ಹೊರ ಬಿಡುವವರು…

ವಿಷಯ ಮಾತ್ರವಲ್ಲದೆ
ಜೀವನ ದೃಷ್ಠಿ
ತೋರಿಸುವವರು…

ಮುಂದಿನ ದಾರಿ
ನಿಚ್ಚಳವಾಗಿಸಿ
ಹಚ್ಚಡ ಹೊದಿಸಿದವರು…

ದುರ್ಗಮ ಹಾದಿಯ
ಸುಗಮಗೊಳಿಸಿ
ಹೊಸದಾಗಿಸಿದವರು…

ಅದೇ ವಿಷಯಕ್ಕೆ
ಹೊಸ ಹೊಳಹು
ಕೊಟ್ಟವರು…

ವಿಷಯ
ಹೊಟ್ಟೆಪಾಡಿಗಿಟ್ಟು
ಭವ ಕಳಚಿದವರು…

ಅನಂತ ಏಕಾಂತದಲ್ಲಿ
ನೆನಪಿಗೆ ಬಂದು
ಎದೆ ತುಂಬಿದವರು…

ಶಿಷ್ಯ ಕೋಟಿ
ಹೊಗಳಿದಾಗ
ಕಣ್ಣಲ್ಲಿ ನೀರಿಳಿಸಿದವರು…

ಆ ದೇವನನ್ನೆ
ಮರೆಸಿ
ಗುರು ದೇವರಾದವರು…


ರಜನಿ


ಗುರು ಪೂರ್ಣಿಮೆ ಯಂದು ಅವರವರಿಗೆ ಅವರ
ಗುರು ನೆನಪಿಗೆ ಬಂದು ಎದೆ ತುಂಬಿ ಬರುತ್ತದೆ.
ಗಂಟಲು ಗದ್ಗದವಾಗುತ್ತದೆ. ಗುರು ಸಿಗದವರು ನಿಜವಾಗಲೂ ಅದೃಷ್ಟ ಹೀನರು. ಬರೇ ಹೊಟ್ಟೆ ಪಾಡು
ತೋರಿಸುವರು ಗುರು ಅಲ್ಲಾ. ಬೇರೆ ಆಯಾಮಕ್ಕೆ
ಕರೆದೊಯ್ಯಬೇಕು. ನನ್ನ ಗುರು ಎನ್ನಲು ಹೃದಯ ತಟ್ಟಿರಬೇಕು. ನನ್ನ ಪಟ್ಟ ಶಿಷ್ಯ ಅನ್ನಲು ಪುಣ್ಯ ಮಾಡಿರಬೇಕು.
RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?