Friday, March 29, 2024
Google search engine
Homeತುಮಕೂರು ಲೈವ್ಚಿಕ್ಕನಾಯಕನಹಳ್ಳಿ: 20 ನಿಮಿಷದಲ್ಲೇ ಕೊರೊನಾ ವರದಿ

ಚಿಕ್ಕನಾಯಕನಹಳ್ಳಿ: 20 ನಿಮಿಷದಲ್ಲೇ ಕೊರೊನಾ ವರದಿ

Publicstory


ಚಿಕ್ಕನಾಯಕನಹಳ್ಳಿ; ಕೊರೊನಾ ತಡೆಗಟ್ಟಲು ಹಾಗೂ ಶೀಘ್ರವಾಗಿ ಕೊವಿಡ್ ವರದಿಯನ್ನು ಪಡೆದುಕೊಳ್ಳಲು ತಾಲ್ಲೂಕಿನ ರಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಲಾಗುತ್ತಿದೆ ಎಂದು ತಹಶೀಲ್ದಾರ್ ತೇಜಸ್ವಿನಿ ತಿಳಿಸಿದ್ದಾರೆ .

ತಾಲ್ಲೂಕು ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕಿತರ ವರದಿಗಳು ತಡವಾಗಿ ಬರುತ್ತಿರುವುದರಿಂದ ಸೋಂಕು ಹೆಚ್ಚು ಜನರಲ್ಲಿ ಹರಡುವ ಸಾಧ್ಯತೆ ಇರುವುದರಿಂದ ತಾಲ್ಲೂಕಿನಲ್ಲಿ rapid ಆ್ಯಂಟಿಜನ ಟೆಸ್ಟ್ ಮೂಲಕ ಕೇವಲ ಇಪ್ಪತ್ತು ನಿಮಿಷಗಳಲ್ಲಿ ಕೊರೊನಾ ವರದಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು .

ಯಾವುದೇ ವ್ಯಕ್ತಿ ಕೆಮ್ಮು ,ಜ್ವರ ಅಥವಾ ದೇಹದಲ್ಲಿ ನೋವು ಕಾಣಿಸಿಕೊಂಡರೆ ಅಂಥವರನ್ನು ಕೂಡಲೇ ಕೋರನ ಪರೀಕ್ಷೆಗೆ ಒಳಪಡಿಸಬೇಕು ಇದರಿಂದ ಸೋಂಕಿತರ ವ್ಯಕ್ತಿ ಬೇರೆಯವರ ಸಂಪರ್ಕ ಹೊಂದದಂತೆ ಹರಡದಂತೆ ತಡೆಗಟ್ಟಬಹುದು .

ಪಟ್ಟಣದ ಸಮೀಪದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕೋವಿಲ್ ಕೇರ್ ಮಾಡಲಾಗಿದ್ದು 114 ಬೆಡ್ ವ್ಯವಸ್ಥೆ ಇದ್ದು ಇಲ್ಲಿನ ಸೋಂಕಿತರಿಗೆ ಸರಕಾರದ ನಿರ್ದೇಶನದಂತೆ ಊಟ ,ಬಿಸಿನೀರಿನ ವ್ಯವಸ್ಥೆ, ಸ್ನಾನಕ್ಕೆ ಸೌಕರ್ಯ ದಿನಕ್ಕೆ ಎರಡು ಬಾರಿ ತಪಾಸಣೆ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಅಲ್ಲಿನ ಕೇಂದ್ರಕ್ಕೆ ಮಾಡಲಾಗಿದೆ ಎಂದರು.

24 ಗಂಟೆಗಳ ಕಾಲ ಪೊಲೀಸ್ ಕಾವಲು ವ್ಯವಸ್ಥೆ ಮಾಡಲಾಗಿದೆ ಅಲ್ಲಿನ ರೋಗಿಗಳನ್ನು ಯಾರೂ ಭೇಟಿ ಮಾಡುವಂತಿಲ್ಲ ಒಂದು ವೇಳೆ ಕಾನೂನು ಮೀರಿ ಹೋದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ತಾಲ್ಲೂಕು ವೈದ್ಯಾಧಿಕಾರಿಗಳು ಮಾತನಾಡಿ ತಾಲ್ಲೂಕಿನಲ್ಲಿ ಇದುವರೆಗೆ 2077 ಕೊರೊನಾ ಟೆಸ್ಟ್ ಮಾಡಲಾಗಿದ್ದು 10 ರಿಂದ 20 ವರದಿಯ ಫಲಿತಾಂಶ ಮಾತ್ರ ಬಾಕಿ ಇದೆ . ಸಾರ್ವಜನಿಕರು ಜನನ ಕೊರೊನಾ ಬಂದರೆ ಭಯಪಡುವ ಅವಶ್ಯಕತೆ ಇಲ್ಲ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗುತ್ತಿದ್ದಾರೆ.‌ವಿಟಮಿನ್ ಸಿ ಅಂಶವಿರುವ ಹಣ್ಣು ತರಕಾರಿಗಳನ್ನು ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?