Friday, April 19, 2024
Google search engine
Homeತುಮಕೂರು ಲೈವ್ಜುಂಜಪ್ಪನ ಗುಡ್ಡೆಯಲ್ಲಿ ಶಿವೋತ್ಸವ

ಜುಂಜಪ್ಪನ ಗುಡ್ಡೆಯಲ್ಲಿ ಶಿವೋತ್ಸವ

ಸಿರಾಸೀಮೆ ಸಾಂಸ್ಕೃತಿಕ ವೇದಿಕೆ ವತಿಯಿಂದ ಸಿರಾ ತಾಲೂಕು ಗೌಡಗೆರೆ ಹೋಬಳಿಯ ಜುಂಜಪ್ಪನ ಗುಡ್ಡೆಯಲ್ಲಿ ಬುಡಕಟ್ಟು ಸಾಂಸ್ಕೃತಿಕ ನಾಯಕ ಜುಂಜಪ್ಪನ ಮೂಲನೆಲೆಯಲ್ಲಿ ಫೆ.21ರಂದು ಇರುಳಿಡೀ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.ಅಂದು ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಬುಡಕಟ್ಟು ಸಾಂಸ್ಕೃತಿಕ ವೀರ ಜುಂಜಪ್ಪನ ಕಥನ ಗಾಯನವಿದೆ.

ಕೆ.ರಂಗನಹಳ್ಳಿಯ ಜುಂಜಣ್ಣ ಕಥನ ಗಾಯನ ನಡೆಸಿಕೊಡುವರು. ಹಳಿಯಟ್ಟಿ ಕರಿಯಣ್ಣ, ಚಿತ್ತಪ್ಪ ಕುಂಬಾರಹಳ್ಳಿ ಗಣೆ ಊದುವರುರಾತ್ರಿ 8 ರಿಂದದ 9 ಗಂಟೆಯವರೆಗೆ ಜುಂಜಪ್ಪನ ಕುರಿತು ಸಾಹಿತಿ ಪ್ರೊ.ಮ.ಲ.ನ ಮೂರ್ತಿ ಮಾತನಾಡುವರು. ರತ್ನ ಸಕಲೇಶಪುರ ರಂಗಗೀತೆಗಳನ್ನು ಹಾಡುವರು. ಶಿವಮೊಗ್ಗದ ಸಹ್ಯಾದ್ರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ.ಜಿ.ಕೆ.ಪ್ರೇಮ ಬುಡಕಟ್ಟು ಮತ್ತು ಪಶುಪಾಲನೆ ಕುರಿತು ಮಾತನಾಡುವರು. ಗುರುಪುತ್ರಿಗೆ ಶಿವವಸ್ತ್ರ -ವಿಭೂತಿ ವಿತರಣೆ ಕಾರ್ಯಕ್ರಮವಿದೆ.

ರಂಘಸಂಘಟಕ ಅಂಕಸಂಸ್ರ ಪ್ರೇಮ್ ಕುಮಾರ್ ಅವರಿಗೆ ವಿತರಿಸಲಾಗುವುದು. ಅದೇ ರಾತ್ರಿ 9.30 ರಿಂದ 10.30ರವರೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು ತಂಡ ಪ್ರಮೀಳಾರ್ಜುನ ವಿಜಯ ನಾಟಕ ಪ್ರದರ್ಶಿಸಲಿದೆ. ಮೂಲ ವಿಲಿಯಮ್ ಶೇಕ್ಸ್ ಪಿಯರ್ ನಾಟಕವನ್ನು ಶ್ರೀಕಂಠೇಗೌಡ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ನಾಟಕವನ್ನು ನವೀನ್ ಸಾಣೇಹಳ್ಳಿ ನಿರ್ದೇಶಿಸಿದ್ದಾರೆ.

ರಾತ್ರಿ 10.30 ರಿಂದ 11.30ರವರೆಗೆ ಕಾಡುಗೊಲ್ಲರ ಕೋಲಾಟ ಕಾರ್ಯಕ್ರಮವಿದೆ. ಇದರಲ್ಲಿ ಚಿಕ್ಕನಕೋಟೆ ಗೊಲ್ಲರಹಟ್ಟಿಯ ಸಿದ್ದಣ್ಣ ಮತ್ತು ಗಿರಿಯಪ್ಪ ತಂಡ ಕೋಲಾಟ ನಡೆಸಿಕೊಡಲಿದ್ದೆ. ಲಂಬಾಣಿ ಬುಡಕಟ್ಟು ನೃತ್ಯವು ಇದೆ.ರಾತ್ರಿ 11 ರಿಂದ 1 ಗಂಟೆಯವರೆಗೆ ಬುಡಕಟ್ಟು ಸಮುದಾಯದ ಮಹಿಳಾ ಸಾಧಕಿ ಬಿ.ಟಿ. ಲಲಿತಾ ನಾಯ್ಕ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಜನಶಕ್ತಿಯ ಕಾರ್ಯಕರ್ತೆ ಮಲ್ಲಿಗೆ ಅಭಿನಂದನಾ ನುಡಿ ನುಡಿಯುವರು. ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಸಿ.ಜಿ.ಲಕ್ಷ್ಮಿಪತಿ ಮಾತನಾಡುವರು.

ರಾತ್ರಿ 1 ರಿಂದ 3 ಗಂಟೆಯವರೆಗೆ ನಾಟಕಕಾರ ಹನುಮಂತ ಹಾಲಗೇರಿ ವಿರಚಿತ ಊರು ಸುಟ್ಟರೂ ಹನುಮಪ್ಪ ಹೊರಗೆ ನಾಟಕ ಪ್ರದರ್ಶನವಿದೆ. ಭಾಸ್ಕರ್ ನಿನಾಸಂ ನಿರ್ದೇಶಿಸಿದ್ದು, ಬೆಂಗಳೂರಿನ ವಿಶ್ವಪಥ ಕಲಾ ಸಂಗಮ ತಂಡ ನಾಟಕ ಪ್ರದರ್ಶಿಸಲಿದೆ.ಇದೇ ವೇಳೆ ರಾತ್ರಿ 3 ರಿಂದ 4 ರವರೆಗೆ ಹಾಡುಹಬ್ಬ ಹಮ್ಮಿಕೊಂಡಿದ್ದು ಕ್ರಾಂತಿಗೀತೆ, ಜನಪದ ಗೀತೆ, ರಂಗಗೀತೆ, ತತ್ವಪದಗಳನ್ನು ಶಿವಮೊಗ್ಗದ ರಂಗಬೆಳಕು ಸಂಘ ಪ್ರಸ್ತುತಪಡಿಸಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?