Friday, March 29, 2024
Google search engine
Homeತುಮಕೂರು ಲೈವ್ಜೆಡಿಎಸ್ ಸೇರುವುದಾಗಿ ಕುಮಾರಸ್ವಾಮಿ ಬಳಿ ಹೇಳಿದ್ದ ಮಸಾಲಜಯರಾಂ: ಎಂ.ಟಿ.ಕೃಷ್ಣಪ್ಪ ಹೇಳಿಕೆ

ಜೆಡಿಎಸ್ ಸೇರುವುದಾಗಿ ಕುಮಾರಸ್ವಾಮಿ ಬಳಿ ಹೇಳಿದ್ದ ಮಸಾಲಜಯರಾಂ: ಎಂ.ಟಿ.ಕೃಷ್ಣಪ್ಪ ಹೇಳಿಕೆ

ಸಂಗ್ರಹ ಚಿತ್ರ

Publicstory. in


ತುರುವೇಕೆರೆ : ಶಾಸಕ ಮಸಾಲಜಯರಾಂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಜೆಡಿಎಸ್ ಪಕ್ಷ ಸೇರುವುದಾಗಿ ಹೇಳಿಕೊಂಡು ಆರ್.ಡಿ.ಪಿ.ಆರ್ ನಿಂದ 12 ಕೋಟಿ ರೂಪಾಯಿಗಳ ಅನುದಾನ ತಂದಿದ್ದನ್ನು ಮರೆತುಬಿಟ್ಟರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಬಹಿರಂಗಪಡಿಸಿದರು.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಆ ಅನುದಾನದ ಹಣದಿಂದ ಸಿ.ಎಸ್. ಪುರ ಹೋಬಳಿ ಜಿಲ್ಲಾ ಪಂಚಾಯಿತಿ ಸದಸ್ಯೆಯೊಬ್ಬರ ಪತಿ ಸೇರಿಕೊಂಡು ಹಲವು ಕಾಮಗಾರಿ ಮಾಡಿದ್ದರೂ ಕೂಡ ಅವು ಸಂಪೂರ್ಣ ಕಳಪೆಯಾಗಿವೆಯೆಂದು ಆರೋಪಿಸಿದರು.

ನಾನು ಶಾಸಕನಾಗಿದ್ದ ಅವಧಿಯಲ್ಲಿ ತಾಲ್ಲೂಕಿಗೆ ಮಂಜೂರಾಗಿದ್ದ ಸುಮಾರು. 55 ಕೋಟಿ ರೂಪಾಯಿಗಳ ಕಾಮಗಾರಿಯನ್ನು ಹಾಲಿ ಶಾಸಕ ಮಸಾಲಜಯರಾಮ್ ಇಂದು ತನ್ನದೆಂದು ಎದೆಯುಬ್ಬಿಸಿಕೊಂಡು ಹೇಳುತ್ತಿದ್ದಾರೆ. ಏಕೆಂದರೆ ಯಾವುದೇ ಕಾಮಗಾರಿ ಅನುಮೋದನೆಗೊಂಡು ಶೇ.33 ರಷ್ಟು ಹಣ ಬಿಡುಗಡೆಯಾದ ನಂತರವೇ ಟೆಂಡರ್ ಕರೆಯಲು ಸಾಧ್ಯ ಎಂಬುದರ ಕಾನೂನು ಅರಿವು ಶಾಸಕರಿಗಿಲ್ಲ ಎಂದು ಗೇಲಿ ಮಾಡಿದರು.

ಗುಬ್ಬಿ ಶಾಸಕ ಶ್ರೀನಿವಾಸ್ ಮಸಾಲಜಯರಾಂ ಶಾಸಕನಾಗಲು ನಾನು ಸಹಕಾರ ನೀಡಿಲ್ಲ ಎಂಬುದಾಗಿ ಹೇಳಿದ್ದಾರೆ. ಅದನ್ನು ದೇವರೆ ಬಲ್ಲ. ಆದರೆ ಶಾಸಕನಾಗಲು ಗುಬ್ಬಿ ಶ್ರೀನಿವಾಸ್ ಅವರ ಸಹಕಾರ ನೀಡಿದ್ದರು ಎಂದು ಮಸಾಲಜಯರಾಂ ಎಚ್.ಡಿ.ಕುಮಾರಸ್ವಾಮಿ ಬಳಿ ಹೇಳಿದ್ದಾರೆ. ಇದನ್ನು ಶಾಸಕರು ಮರೆತುಬಿಟ್ಟರೆ ಎಂದು ಪ್ರಶ್ನಿಸಿದರು.

ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಸಂಕೀರ್ಣ ಮಳಿಗೆಗೆ ವಾಜಪೇಯಿ ಹೆಸರಿಡಲು ಶಾಸಕ ಮಸಾಲಜಯರಾಂ ಪಟ್ಟಣ ಪಂಚಾಯಿತಿ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ವೈಯಕ್ತಿಕವಾಗಿ ನನಗೆ ಗೌರವವಿದೆ ಆದರೇ ಈ ಕಟ್ಟಡಕ್ಕೆ ಬುನಾದಿ ಹಾಕಲು ಎಚ್.ಡಿ.ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಅನುದಾನ ಮಂಜೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ಹುದ್ದೆ ಅಲಂಕರಿಸಿದ ಕನ್ನಡಿಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರಿಡುವಂತೆ ಎಂ.ಟಿ.ಕೃಷ್ಣಪ್ಪ ಒತ್ತಾಯಿಸಿದರು.

ತಾಲ್ಲೂಕಿನ ಗ್ರಾ.ಪಂ. ಚುನಾವಣೆ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯತ ಮತದಾನ ಮಾಡಿಸಲು ಶ್ರಮಿಸಿದ ತಾಲ್ಲೂಕು ಆಡಳಿ, ಪೊಲೀಸ್ ಹಾಗು ಮತದಾರರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಎ.ಪಿ.ಎಂ.ಸಿ ಅಧ್ಯಕ್ಷ ಮಧುಸೂಧನ್, ಸದಸ್ಯ ವಿಜಯಕುಮಾರ್, ಜೆ.ಡಿ.ಎಸ್ ಯುವ ಮುಖಂಡ ವೆಂಕಟಾಪುರ ಯೋಗೀಶ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?