Friday, March 29, 2024
Google search engine
Homeಸಾಹಿತ್ಯ ಸಂವಾದಕವನಡಾ. ರಜನಿ ಕವಿತೆ: ಹೊಸ ವರುಷ

ಡಾ. ರಜನಿ ಕವಿತೆ: ಹೊಸ ವರುಷ

ಹೊಸ ವರುಷದ ಆಚರಣೆ ಬದಲಾದರೂ
ಗೆಳೆಯರು ಇರ ಬೇಕು ಬದುಕಲ್ಲಿ ಹಾಗೂ
ಈಗಲೂ ಎರಗುತ್ತಿರುವ ಪಿಡುಗು ಮತ್ತು
ಮೂಕನಾಗೇ ಭರವಸೆ ಕೊಡುವ ದೇವರು
ಎಂಬ ಅರ್ಥದ ಕವನ ಡಾII ರಜನಿ ಅವರಿಂದ.


ಹೊಸ ಹರುಷ
***********

ಹೊಸ ವರುಷದ
ಹರುಷ
ಹೊಸದೇನು?

ಕತ್ತರಿಸಿ ಹಂಚಿದ
ಕೇಕ್
ಹಂಚಬೇಕು
ಸಿಹಿಯನ್ನು..

ಮಧ್ಯರಾತ್ರಿ
ಬರ
ಮಾಡಿದ
ಸ್ವಾತಂತ್ರ್ಯ …

ಸುರಿದ ಶುಭಾಶಯಗಳು
ನೆನಪಿರಲಿ ನನ್ನ
ಹಿತೈಷಿಗಳು…

ಈಡೇರಲಾಗದ ಆಸೆಗಳು
ನುಂಗಿದ
ದುಃಖ
ದುಮ್ಮಾನಗಳು…

ಹೆಚ್ಚಿದ ಮುಖದ ಗೆರೆಯನ್ನು
ನೆರೆಯನ್ನು
ನುಂಗಿದ ನೊರೆ ಪಾನೀಯದ
ಮತ್ತು..

ಪಿಡುಗಿನ ಮಧ್ಯೆಯೂ
ಉಳಿದಿರುವ
ಜೀವಗಳು…

ಏರಿಸಿದ ತಂಪು
ಕನ್ನಡಕಗಳು
ಕಾಲ್ಕೆಳಗೆ ನುಣ್ಣನೆ
ಉಸುಕುಗಳು…

ಮತ್ತೆ
ಬಂದೆರಗುತ್ತಿರುವ
ಹೆಮ್ಮಾರಿ
ಪ್ರವಾಹ…

ಆದರೇನು
ಇದ್ದರಲ್ಲವೆ
ಮಧ್ಯರಾತ್ರಿ
ನನ್ನ ಕೈ ಹಿಡಿದು…

ಹೊಸ ವರುಷವ
ಆಹ್ವಾನಿಸಿದ
ಜೊತೆಗಾರರು..

ಬೆಳಗ್ಗೆ ಎದ್ದು
ಬೇಡಿದ ಕೈ
ದಿಟ್ಟಿಸಿ ನೋಡಿದ
ದೇವರು…


ಡಾ|| ರಜನಿ

RELATED ARTICLES

2 COMMENTS

Leave a Reply to Mahalakshmi MH Cancel reply

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?