Tuesday, April 16, 2024
Google search engine
Homeಜಸ್ಟ್ ನ್ಯೂಸ್ತಿಪಟೂರು ವಿದ್ಯಾರ್ಥಿಗಳ ಕೈ ಹಿಡಿದ ಶಶಿಧರ್

ತಿಪಟೂರು ವಿದ್ಯಾರ್ಥಿಗಳ ಕೈ ಹಿಡಿದ ಶಶಿಧರ್

NMMS ಪರೀಕ್ಷೆಯಲ್ಲಿ ಫೇಲೇ ಜಾಸ್ತಿ! ಇದಕ್ಕಾಗಿ ಉಚಿತ ತರಬೇತಿಗೆ ಮುಂದಾದ ಶಶಿಧರ್


Public story

Tipturu : ಕಲ್ಪತರು ನಾಡು ತಿಪಟೂರು ನಲ್ಲಿ ಶಿಕ್ಷಣಕ್ಕೆ ಉತ್ತಮ ವಾತವರಣವಿದೆ. ಪ್ರತಿಭಾವಂತ ಹಾಗೂ ಬಡ ಮಕ್ಕಳನ್ನು ಗುರುತಿಸಿ ಅವರಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯಾದ NMMS ಮಕ್ಕಳ ಪ್ರತಿಭೆಗೆ ಸಿಗುವ ಪುರಸ್ಕಾರ ಎಂದು ಜನಸ್ಪಂದನ ಟ್ರಸ್ಟ್ ನ ಸಿ ಬಿ ಶಶಿದರ್ ಅಭಿಪ್ರಾಯ ಪಟ್ಟರು.

ಅವರು ತಿಪಟೂರು ನಗರದ ಠಾಗೂರ್ ವಿದ್ಯಾಸಂಸ್ಥೆಯಲ್ಲಿ ನಡೆದ ತಾಲ್ಲೂಕಿನಾದ್ಯಂತ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳ ತರಬೇತಿ ಶಿಬಿರವನ್ನು ಉದ್ದೇಶಿಸಿ ಮಾತಾನಾಡುತ್ತ ಕಳೆದ ವರ್ಷದಲ್ಲಿ ತಾಲ್ಲೂಕಿನಲ್ಲಿ ಕೇವಲ 11 ವಿದ್ಯಾರ್ಥಿಗಳು ಮಾತ್ರ NMMS ನಲ್ಲಿ ಉತ್ತೀರ್ಣರಾಗಿದ್ದು, ಈ ವರ್ಷ ಗುರಿಯನ್ನು ಹೆಚ್ಚಿಸಬೇಕೆಂಬ ಇಚ್ಚೆಯಿಂದ ಹಾಗೂ ತಾಲ್ಲೂಕಿನ ಪ್ರತಿಭಾವಂತ ಮಕ್ಕಳು ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಬೇಕೆಂಬ ಉದ್ದೇಶ ನಮ್ಮದು. ಹಾಗಾಗಿ ಇಂತಹ ಶಿಕ್ಷಣ ಸಂಬಂಧಿ ಕೆಲಸಗಳಲ್ಲಿ ಜನಸ್ಪಂದನ ಟ್ರಸ್ಟ್ ಭಾಗಿಯಾಗುತ್ತದೆ ಎಂದರು.

ಈ ಮಕ್ಕಳು ತಾಲ್ಲೂಕಿನ ಶಿಕ್ಷಣ ಕ್ರಾಂತಿಯ ಭಾಗವಾಗಲಿ ಮುಂದಿನ ದಿನಗಳಲ್ಲಿ ಜನಸ್ಪಂದನ ಟ್ರಸ್ಟ್ ನಿಂದ ಪ್ರಯೋಜನ ಪಡೆದು ಹೆಚ್ಚು ಮಕ್ಕಳು ಪರಿಕ್ಷೆ ಬರೆಯಲಿ ಎಂದು ಅಶಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಿ ಬಿ ಶಶಿಧರ್ ರವರು ಟಿಕ್ ಎಕ್ಸಾಮ್ {TICK EXAMS } ನ ಅ್ಯಪ್ ಅನ್ನು ಬಿಡುಗಡೆ ಮಾಡಿದರು.

ಟಿಕ್ ಎಕ್ಸಾಮ್ {TICK EXAMS } ನ ಮನೋಜ್ ಕುಮಾರ್ ರವರು ಮಾತನಾಡಿ ನಮ್ಮ ಸಂಸ್ಥೆ ಐ ಎ ಎಸ್ ನಂತಹ ಉನ್ನತ ತರಬೇತಿಗಳನ್ನು ನೀಡುತ್ತಿದ್ದು ಜೊತೆಯಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲಿ ಎಂದು NMMS ತರಬೇತಿ ನೀಡುತ್ತಿದ್ದು.ಇದಕ್ಕೆ ಪ್ರತಿ ವಿದ್ಯಾರ್ಥಿಗೆ 500 ರೂ ವೆಚ್ಚವಾಗಲಿದ್ದು ಇದನ್ನು ಜನಸ್ಪಂದನ ಟ್ರಸ್ಟ್ ನ ಸಿ ಬಿ ಶಶಿಧರ್ ರವರು 350 ಕ್ಕೂ ಹೆಚ್ಚು ವಿಧ್ಯಾರ್ಥಿಗಳ ವೆಚ್ಚವನ್ನು ತಮ್ಮ ಸಂಸ್ಥೆಯಿಂದ ಭರಿಸುತ್ತಿರುವುದು ಶ್ಲಾಘನೀಯ ಹಾಗೂ ಇಂತಹವರು ತಾಲ್ಲೂಕಿಗೆ ಒಬ್ಬರು ಇದ್ದರೆ ರಾಜ್ಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಆಗಲು ಸಾದ್ಯವೆಂದರು.

ಈ ಕಾರ್ಯಕ್ರಮದಲ್ಲಿ ಜನಸ್ಪಂದನ ಟ್ರಸ್ಟ್ ನ ಚಟುವಟಿಕೆಗಳ ಕುರಿತು ಅಲ್ಲಾಬಕಾಶ್ ಎ ರವರು ಮಾತನಾಡಿದರು.

RYT ಯ ಸೈಯದ್ ಸಾದತ್ ರವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಟಿಕ್ ಎಕ್ಸಾಮ್ {TICK EXAMS }ನ ಸೈಯದ್ ಶಾಹೀದ್ ಹಾಷ್ಮಿ ಜನಸ್ಪಂದನ ಟ್ರಸ್ಟ್ ನ ಶರತ್ ,ಸಂತೋಷ್ ಮತಿಘಟ್ಟ, ಅಭಿ, ಜಯಂತ್. ಚಂದ್ರುಶೇಖರ್ , ಬಸವರಾಜು . RYT ಸಂಸ್ಥೆಯಿಂದ ಲೋಕೇಶ್, ತಾಸೀನ್ ಶರಿಫ್ ,ಜುನೇದ್, ಶಾಹೀದ್, ಕೈಫ್, ಸಲ್ಮಾ, ಅಮ್ರೀನ್, ಹಮೀದಾ ಷವಾಜ್ , ವಸೀಲ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಠಾಗೂರ್ ಸಂಸ್ಥೆಯ ಶಿಕ್ಷಕರಾದ ವನಜಮ್ಮ ಸ್ವಾಗತಿಸಿ, ಶಿಕ್ಷಕರಾದ ಸೋಮಶೇಖರ್ ವಂದಿಸಿದರು 230 ವಿಧ್ಯಾರ್ಥಿಗಳು ಹಾಗು 100 ಕ್ಕೂ ಹೆಚ್ಚು ಪೋಷಕರು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.ಎರಡನೇ ಹಂತದ ತರಬೇತಿಯು 120 ಕ್ಕೂ ಹೆಚ್ಚು ಮಕ್ಕಳಿಗೆ ನೋಣವಿನಕೆರೆಯಲ್ಲಿ 23/02/2022 ರಂದು ನಡೆಯಲಿದೆ.ಈ ಕಾರ್ಯಕ್ರಮಕ್ಕೆ ಠಾಗೂರ್ ವಿಧ್ಯಾಸಂಸ್ಥೆ ಹಾಗೂ RYT ಸಹಕರಿಸಿದ್ದು. ಕಾರ್ಯಕ್ರಮವನ್ನು ಜನಸ್ಪಂದನ ಟ್ರಸ್ಟ್ ಅಯೋಜಿಸಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?