Thursday, March 28, 2024
Google search engine
Homeತುಮಕೂರು ಲೈವ್ತುಮಕೂರಿಗೆ ಕೊರೊನಾ ಬರಸಿಡಿಲು: 5 ಸಾವು, ಸಾವಿರಕ್ಕೆ ಕೈ ಚಾಚಿದ ಸೋಂಕು

ತುಮಕೂರಿಗೆ ಕೊರೊನಾ ಬರಸಿಡಿಲು: 5 ಸಾವು, ಸಾವಿರಕ್ಕೆ ಕೈ ಚಾಚಿದ ಸೋಂಕು

Publicstory. in


ತುಮಕೂರು: ಜಿಲ್ಲೆಗೆ ಕೊರೊನಾ ಬರಸಿಡಿಲು ಬಡಿದಿದ್ದು, ಗುರುವಾರ ಒಂದೇ ದಿನ ಐದು ಜನರು ಸಾವಿಗೀಡಾಗಿದ್ದಾರೆ.

ಜಿಲ್ಲೆಯಲ್ಲಿ ಇದೇ ಮೊದಲಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ರೋಗಿಗಳು ಸಾವಿಗೀಡಾಗಿದ್ದು, ಜನರ ವಿಶ್ವಾಸದ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ.

ಜಿಲ್ಲೆಯಲ್ಲಿ ಒಂದೇ ದಿನ 67 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 931ಕ್ಕೆ ಏರಿಕೆಯಾಗಿದ್ದು, ಇನ್ನೆರಡು ದಿನಗಳಲ್ಲಿ ಸಾವಿರವನ್ನು ಮೀರಿ ಹೋಗಲಿದೆ ಎಂದು ಹೇಳಲಾಗುತ್ತಿದೆ.

ತುಮಕೂರಿನಲ್ಲಿ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 26 ಜನರಿಗೆ ದೃಢಪಟ್ಟಿದೆ.

ಉಳಿದಂತೆ, ಗುಬ್ಬಿಯಲ್ಲಿ 9, ಪಾವಗಡದಲ್ಲಿ 6, ಶಿರಾದಲ್ಲಿ 4, ತಿಪಟೂರಿನಲ್ಲಿ 2, ಮಧುಗಿರಿ ತಾಲ್ಲೂಕಿನಲ್ಲಿ 7, ತುರುವೇಕೆರೆಯಲ್ಲಿ 5 ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಇಬ್ಬರಿಗೆ ಸೋಂಕು ತಗುಲಿದೆ.

ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹಾಗೂ ಚಿನ್ನನಾಯಕನಪಾಳ್ಯ ಸೇರಿ ಮೂವರಿಗೆ ಒಂದೇ ದಿನ ಕೊರೊನಾ ಸೊಂಕು ದೃಢಪಟ್ಟಿದೆ.

ಸಿ.ಎಸ್.ಪುರದಲ್ಲಿ ಮಹಿಳೆಗೆ ಹಾಗೂ ಚಿಣ್ಣನಾಯಕನಪಾಳ್ಯದಲ್ಲಿ ಅಪ್ಪ ಮಗನಿಗೆ ಇಬ್ಬರಿಗೆ ಸೋಂಕು ತಗುಲಿದೆ.

ಚಿಣ್ಣನಾಯಕನಪಾಳ್ಯವನ್ನು ಪಂಚಾಯತಿ ಅಧಿಕಾರಿಗಳು ಸೀಲ್ಡ್ ಡೌನ್ ಮಾಡಿದರು.

ಬೆಂಗಳೂರಿನ ಕೊರೊನಾ ಸೋಂಕಿತರೊಂದಿಗೆ ಇವರ ಸಂಪರ್ಕದ ಕಾರಣ ಸೋಂಕು ಕಾಣಿಸಿದೆ ಎನ್ನಲಾಗಿದೆ.

ನಿಧಾನವಾದ ವರದಿ: ಅಸಮಾಧಾನ: ಸೋಂಕಿತರ ಸ್ವ್ಯಾಬ್ ಮಾದರಿಯನ್ನು ಹತ್ತು ದಿನಗಳ ಹಿಂದೆಯೇ ಪಡೆಯಲಾಗಿತ್ತು. ಆದರೆ ಇಷ್ಟು ತಡವಾಗಿ ವರದಿ ಬಂದಿದೆ.

ಸೋಂಕಿತರ ಸಾಮಾನ್ಯರಂತೆಯೇ ಇದ್ದರು. ಹೀಗಾಗಿ ಗ್ರಾಮದಲ್ಲಿರುವ ಜನರನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?