Friday, March 29, 2024
Google search engine
Homeಜನಮನತುಮಕೂರು ಕಾವೇರಿ ಕಣಿವೆಯಲ್ಲಿ ಜೆಡಿಎಸ್‌ಗೊಬ್ಬ ನೀಲಿಗಣ್ಣಿನ ಹುಡುಗ

ತುಮಕೂರು ಕಾವೇರಿ ಕಣಿವೆಯಲ್ಲಿ ಜೆಡಿಎಸ್‌ಗೊಬ್ಬ ನೀಲಿಗಣ್ಣಿನ ಹುಡುಗ

Publicstory.in


ತುಮಕೂರು: ಜಿಲ್ಲೆಯ ಕಾವೇರಿ ಕಣಿವೆಯಲ್ಲಿ ದಲಿತ ಸಮುದಾಯದ ನಡುವೆ ಬಡವಾದಂತಿದ್ದ ಜೆಡಿಎಸ್ ಪಕ್ಷಕ್ಕೆ ಬಲತುಂಬಲು ಹಾಗೂ ತಮ್ಮದೇ ಕ್ಷೇತ್ರದಲ್ಲಿ ಬಲಹೆಚ್ಚಿಸಿಕೊಳ್ಳಲು ಶಾಸಕ ಬಿ.ಸಿ.ಗೌರಿಶಂಕರ್ ಹೊಸ ದಾಳ ಹುರುಳಿಸಿದ್ದಾರೆ.

ಪಾವಗಡದ ಮಾಜಿ ಶಾಸಕರಾದ, ಜೆಡಿಎಸ್ ನ ತಿಮ್ಮರಾಯಪ್ಪ ದಲಿತರು. ಆದರೆ ಏಕೋ ಅವರು ಇಡೀ ಜಿಲ್ಲೆಯನ್ನು ಆವರಿಸಿಕೊಳ್ಳುವ ಕೆಲಸಕ್ಕೆ ಕೈ ಹಾಕಲಿಲ್ಲ. ಹಾಗೇ ನೋಡಿದರೆ, ಜಿಲ್ಲೆಯಲ್ಲಿ ದಲಿತ ಬಲಾಢ್ಯ ರಾಜಕೀಯ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಮಾಜಿ ಶಾಸಕ ಕೆ.ಎನ್. ರಾಜಣ್ಣ. ಸಂಸದ ಜಿ.ಎಸ್. ಬಸವರಾಜ್ ಅವರುಗಳು ಆಯಾ ಸಮುದಾಯದ ಅನಭಿಷಿಕ್ತ ನಾಯಕರೇ ಆಗಿದ್ದಾರೆ. ಹೀಗಾಗಿಯೇ ಈ ಇಬ್ಬರು ಜಿಲ್ಲೆಯಲ್ಲಿ ಯಾರನ್ನು ಬೇಕಾದರೂ ಮೇಲಕ್ಕೆತ್ತುತ್ತಾರೆ, ಮನಸ್ಸು ಮಾಡಿದರೆ ಕೆಳಕ್ಕೆ ತಳ್ಳುವ ಶಕ್ತಿ ಬೆಳಸಿಕೊಂಡಿದ್ದಾರೆ.

ಹಾಗೇ ನೋಡಿದರೆ, ಜಿಲ್ಲೆಯಲ್ಲಿ ದಲಿತ ಬಲಾಢ್ಯ ರಾಜಕೀಯ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ.

ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೂ ಈ ಶಕ್ತಿ ಬರಬೇಕಿತ್ತು. ಆದರೆ ಈ ಬಗ್ಗೆ ಅವರಿಗೆ ಆಸಕ್ತಿ ಇದ್ದಂತೆ ತೋರುತ್ತಿಲ್ಲ. ಪಕ್ಷದ ನೆಲೆಯಲ್ಲಿ, ಜಾತಿಯ ನೆಲೆಯಲ್ಲಿ ಅವರು ನಾಯಕರು. ಆದರೆ ಇಡೀ ಜಿಲ್ಲೆಯ ಮೇಲೆ ಆ ಸಮುದಾಯದೊಳಗೆ ಅವರ ಬಿಗಿ ಹಿಡಿತ ಇಲ್ಲ ಎಂಬುದು ಪ್ರತಿ ಚುನಾವಣೆಯಲ್ಲೂ ಸಾಬೀತಾಗುತ್ತಾ ಹೋಗುತ್ತಿದೆ.

ಕೃಷ್ಣಾ ಹಾಗೂ ಕಾವೇರಿ ಕೊಳ್ಳದಲ್ಲಿ ಹಂಚಿಹೋಗಿರುವ ತುಮಕೂರು ಜಿಲ್ಲೆಯ ರಾಜಕಾರಣವೂ ಸಹ ಈ ಎರಡು ಕೊಳ್ಳದಲ್ಲಿ ಹಂಚಿಹೋಗಿದೆ. ಕೃಷ್ಣಾ ಕೊಳ್ಳದ ರಾಜಕೀಯ ನಾಯಕರು ಕಾವೇರಿಕೊಳ್ಳದಲ್ಲಿ ತಮ್ಮ ಪ್ರಭಾವ ಬೆಳೆಸಿಕೊಂಡಿಲ್ಲ. ಅದೇ ರೀತಿ ಕಾವೇರಿಕೊಳ್ಳದ ಸಾಕಷ್ಟು ನಾಯಕರು ಕೃಷ್ಣಾಕೊಳ್ಳದ ರಾಜಕಾರಣದಲ್ಲಿ ಸೊನ್ನೆ. ಇದು ಜಿಲ್ಲೆಯ ರಾಜಕೀಯ ಚಿತ್ರಣ.

ಜೆಡಿಎಸ್ ನ ತಿಮ್ಮರಾಯಪ್ಪ ಕೃಷ್ಣಕೊಳ್ಳದವರು. ಹುಚ್ಚಯ್ಯ ಜೆಡಿಎಸ್ ಪಕ್ಷ ಬಿಟ್ಟ ಬಳಿಕ ಕಾವೇರಿಕೊಳ್ಳದಲ್ಲಿ ಅಂತಹ ಮುಖಗಳಿಲ್ಲ. ಇನ್ನೂ ಅವರೀಗ ಬಿಜೆಪಿ. ಅಲ್ಲೂ ಅವರು ಬೆಳೆಯಲಿಲ್ಲ.

ಕಾವೇರಿಕೊಳ್ಳದ ತಿಪಟೂರು, ಗುಬ್ಬಿ, ತುರುವೇಕೆರೆ, ತುಮಕೂರು, ಕುಣಿಗಲ್ ತಾಲ್ಲೂಕುಗಳಲ್ಲಿ ದಲಿತ ಮತಬ್ಯಾಂಕ್ ಅನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಮ್ಯೂನಿಷ್ಟ ಪಕ್ಷದ ಹಿನ್ನೆಲೆಯುಳ್ಳ ಬೆಳಗುಂಬ ವೆಂಕಟೇಶ್ ಅವರನ್ನು ಶಾಸಕ ಗೌರಿಶಂಕರ್ ತುಮಕೂರು ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಪಕ್ಷದ ನೆಲೆ‌ ಗಟ್ಟಿಗೊಳಿಸುವ ಕೆಲಸ ನೀಡಿದ್ದಾರೆ

ಯಾವಾಗಲೂ ಚಟುವಟಿಕೆಯಲ್ಲಿ ಇರುವ ವೆಂಕಟೇಶ್ ಈಗಾಗಲೇ ತಾಲ್ಲೂಕಿನ ದಲಿತರ ನಡುವೆ ಹೆಜ್ಜೆ ಇಟ್ಟಿದ್ದಾರೆ. ಪ್ರತಿ ದಲಿತ ಮನೆಯವರ ಭೇಟಿ. ಅವರ ಕಷ್ಟ ಸುಖ ಆಲಿಸುವ ಕೆಲಸಕ್ಕೆ ಕೈ ಹಚ್ಚಿರುವುದಾಗಿ ಹೇಳಿಕೊಂಡಿದ್ದಾರೆ.

ಹಾಗೇ ನೋಡಿದರೆ, ಅವರ ಈ ಶಕ್ತಿಗೆ ಎಡಪಕ್ಷಗಳ ಹಿನ್ನೆಲೆ ಕಾರಣ ಎಂದು ಬೇರೆ ಹೇಳಬೇಕಾಗಿಲ್ಲ. ಹಲವು ಒಳಸುಳಿ, ಒಳಪೆಟ್ಟುಗಳನ್ನು ಪರಸ್ಪರ ನೀಡಿಕೊಳ್ಳುವ ತಾಣವಾಗಿರುವ ಜೆಡಿಎಸ್ ನಲ್ಲಿ ಪಕ್ಷ ನಿಷ್ಠೆಯ ವ್ಯಕ್ತಿಗೆ ಮಣೆ ಹಾಕಿರುವುದು ಒಳ್ಳೆಯ ಬೆಳವಣಿಗೆಯೇ ಆಗಿದೆ.

ಶಾಸಕ ಗೌರಿಶಂಕರ್ ಅವರ ನೀಲಿಗಣ್ಣಿನ ಹುಡುಗನಾಗಿರುವ ವೆಂಕಟೇಶ್ ಅವರ ಕೆಲಸ ಜಿಲ್ಲೆಯಲ್ಲಿ ಬೇರೆಯದೇ ಇದೆ. ಹೊಸ ನಾಯಕತ್ವದ ಹುಡುಕಾಟದಲ್ಲಿ ಆ ಸಮುದಾಯದ ಯುವಕರು ಸಹ ಇದ್ದಾರೆ. ಆದರೆ ಕಟಿಬದ್ಧತೆಯ ಕೆಲಸ ಅವರನ್ನು ಇನ್ನಷ್ಟು ಮೇಲಕ್ಕೆ ಕರೆದುಕೊಂಡು ಹೋಗಬಹುದು.

ಕೃಷ್ಣಾಕೊಳ್ಳದಲ್ಲಿ ಪಕ್ಷ ಕಟ್ಟುವ ಅಥವಾ ಆ ಸಮುದಾಯವನ್ನು ಸೆಳೆದುಕೊಳ್ಳುವುದು ತುಸು ಕಷ್ಟವೇ ಸರಿ. ಆದರೆ ಕಾವೇರಿಕೊಳ್ಳದಲ್ಲಿ ಮನಸ್ಸು ಮಾಡಿದರೆ ಒಳ್ಳೆಯ ನಾಯಕನಾಗಿ ಬೆಳಗುಂಬ ವೆಂಕಟೇಶ್ ರೂಪುಗೊಳ್ಳುವ ಸಾಧ್ಯತೆಯನ್ನು ಅವರು ಹೇಗೆ ಬಳಸಿಕೊಳ್ಳುತ್ತಾರೊ ಅದರ ಮೇಲೆ ನಿಂತಿದೆ. ಇದಕ್ಕಾಗಿ ನಾವು ಕಾದು ನೋಡಬೇಕಾಗಿದೆ.

ಬಿಜೆಪಿಯಲ್ಲಿ ಅದರಲ್ಲೂ ಕಾವೇರಿಕೊಳ್ಳದಲ್ಲಿ ದಲಿತ ಮುಖಂಡರನ್ನು ಬೆಳೆಸುವ ಕೆಲಸಕ್ಕೆ ಮಾಜಿ ಶಾಸಕ ಬಿ.ಸುರೇಶಗೌಡ ಸರಿಯಾಗಿಯೇ ದಾಳ ಉರುಳಿಸಿದ್ದರು. ಅವರು ಪಕ್ಷದ ಅಧ್ಯಕ್ಷರಾಗಿದ್ದಾಗ ಏನ್ನೆಲ್ಲ ದಾಳಗಳನ್ನು ಉರುಳಿಸಿ ವೈ.ಎಚ್.ಹುಚ್ಚಯ್ಯ ಅವರನ್ನು ಪಕ್ಷಕ್ಕೆ ಕರೆತಂದರು. ಮಹಿಳಾ ನಾಯಕಿಯಾಗಿ ಶಾರದಾ ನರಸಿಂಹಮೂರ್ತಿಯನ್ನು ಬೆಳೆಸಲು ಪ್ರಯತ್ನಪಟ್ಟರು. ಆದರೆ ಆ ಪಕ್ಷದ ಉಸಿರುಕಟ್ಟಿಸುವ ವಾತಾವರಣ ಕಾರಣದಿಂದಾಗಿಯೇ ಈ ಇಬ್ಬರು ಪ್ರಬಲ ನಾಯಕರಾಗಿ ಹೊರಹೊಮ್ಮಲು ಸಾಧ್ಯವಾಗುತ್ತಿಲ್ಲ.

ವೈ.ಕೆ.ರಾಮಯ್ಯ ಅವರಿಂದ ಕಲಿತುಬಂದರೂ ಸಹ ವೈ.ಎಚ್. ಹುಚ್ಚಯ್ಯ ಅವರು ಜನರನ್ನು ಆವರಿಸಿಕೊಳ್ಳುವಲ್ಲಿ ಹೆಚ್ಚು ಪ್ರಭಾವ ಬೀರಿದಂತೆ ಕಾಣುತ್ತಿಲ್ಲ.

ದೂರದೃಷ್ಟಿಯ ಹಿನ್ನೆಲೆಯಲ್ಲಿ ವೆಂಕಟೇಶ್ ಅವರನ್ನು ದಲಿತರ ಪ್ರತಿನಿಧಿಯಾಗಿ ಬಳಸುವ ಎಲ್ಲ ಅವಕಾಶವನ್ನು ಜೆಡಿಎಸ್ ತನ್ನೊಂದಿಗಿರಿಸಿಕೊಂಡಿದೆ. ದಲಿತರಲ್ಲದೆಯೋ ಬೇರೆ ಸಮುದಾಯದವರ ನಡುವೆಯೂ ತುಂಬಾನೆ ಒಡನಾಟ ಬೆಳೆಸಿಕೊಂಡಿರುವ ಬೆಳಗುಂಬ ವೆಂಕಟೇಶ್ ಯಾವ ದಾರಿಯಲ್ಲಿ ಸಾಗಿ ಎಲ್ಲಿ ಮುಟ್ಟುತ್ತಾರೆ ಎಂದು ಹೇಳಲು ಇನ್ನೂ ಕೆಲವು ವರ್ಷ ಕಾಯಬೇಕಾಗಿದೆ.

ದಲಿತರಲ್ಲದೆಯೋ ಬೇರೆ ಸಮುದಾಯದವರ ನಡುವೆಯೂ ತುಂಬಾನೆ ಒಡನಾಟ ಬೆಳೆಸಿಕೊಂಡಿರುವ ಬೆಳಗುಂಬ ವೆಂಕಟೇಶ್ ಯಾವ ದಾರಿಯಲ್ಲಿ ಸಾಗಿ ಎಲ್ಲಿ ಮುಟ್ಟುತ್ತಾರೆ ಎಂದು ಹೇಳಲು ಇನ್ನೂ ಕೆಲವು ವರ್ಷ ಕಾಯಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?