Friday, March 29, 2024
Google search engine
Homeಜನಮನತುಮಕೂರು ಟೂಡಾ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಯಾರಿಗೆ ದಕ್ಕಲಿದೆ ಅಧಿಕಾರ?

ತುಮಕೂರು ಟೂಡಾ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಯಾರಿಗೆ ದಕ್ಕಲಿದೆ ಅಧಿಕಾರ?

Publicstory


ತುಮಕೂರು: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯೊಳಗೆ ಪೈಪೋಟಿ ಆರಂಭವಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾರಿಗೆ ತಥಾಸ್ತು ಅನ್ನುತ್ತಾರೆ ಎಂಬ ಕುತೂಹಲ ಗರಿಗೆದರಿದೆ.

ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡರ ನಡುವೆ ಪೈಪೋಟಿ ಆರಂಭವಾಗಿದೆ. ಸಂಘ ಪರಿವಾರದಿಂದ ಜಿ.ಕೆ.ಶ್ರೀನಿವಾಸ್ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.

ನಗರದ ಅಭಿವೃದ್ಧಿ. ಆಸ್ತಿ ಕಬಳಿಕೆದಾರರ ವಿರುದ್ಧ ಹೋರಾಟ, ನಗರದಲ್ಲಿ ಮರಗಳ ಕಡಿಯುವುದರ ವಿರುದ್ಧ ಅವಿರತ ಹೋರಾಟ ಶ್ರೀನಿವಾಸ್ ಅವರದು.ಕಟ್ಟಾ ಹಿಂದೂ ಪ್ರತಿಪಾದಕರು ಆಗಿರುವ ಅವರು ಲಾಗಾಯ್ತಿನಿಂದಲೂ ಬಿಜೆಪಿಗೆ ಅವರ‌ ನಿಷ್ಠೆ. ಮಾಹಿತಿ ಹಕ್ಕು ಕಾರ್ಯಕರ್ತರಾಗಿ ನಗರದ ಎಲ್ಲ ಜನ ಸಮುದಾಯದ ನಡುವೆಯೂ ಅವರು ಚಿರಪರಿಚಿತ. ಅವರ ತೆಕ್ಕೆಗೆ ಬರುವ ಎಲ್ಲ ಜಾತಿ, ಧರ್ಮೀಯರನ್ನು ಬಿಜೆಪಿಗೆ ಎಳೆದು ತರುವ ಚಾಣಾಕ್ಷ. ತುಮಕೂರು ನಗರದಲ್ಲಿ ಬ್ರಾಹ್ಮಣರಿಗೆ ಶಕ್ತಿ ತರುವಲ್ಲಿಯೂ ಅವರ ದುಡಿಮೆ ಕೆಲಸ ಮಾಡಿದೆ.


ಶ್ರೀನಿವಾಸ್ ಅವರು ಆಯ್ಕೆಯಾದರೆ ಬಿಜೆಪಿಯ ಇಬ್ಬರು-ಮೂವರು ಮುಖಂಡರು ಬಿಟ್ಟರೆ ಪಕ್ಷಾತೀತವಾಗಿ ಎಲ್ಲರಿಂದಲೂ ಅವರಿಗೆ ಸ್ವಾಗತ ಸಿಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ರಾಜಕಾರಣದಲ್ಲಿ ಇದೆಲ್ಲ ಲೆಕ್ಕಕ್ಕೆ ಬರುವುದಿಲ್ಲ ಎಂಬುದು ಬೇರೆ ಮಾತು. ಅಧಿಕಾರ ಗದ್ದುಗೆಗೆ ಅದರದೇ ಆದ ಚೆಸ್ ಆಟಗಳಿರುತ್ತವೆ ಎಂಬುದು ಇಷ್ಟು ವರ್ಷ ಹಿಂದುತ್ವಕ್ಕಾಗಿ, ನಗರದ ಅಭಿವೃದ್ಧಿಗಾಗಿ ದುಡಿದಿರುವ ಶ್ರೀನಿವಾಸ್ ಅವರಿಗೆ ಈಗ ಗೊತ್ತಾಗಬಹುದೇನೋ?

ಇದೇನೆ ಇರಲಿ, ಹೋಟೆಲ್ ಉದ್ಯಮ ಸೇರಿದಂತೆ ನಗರದ ಅಭಿವೃದ್ಧಿಗಾಗಿ ಹಲವು ದಶಕಗಳಿಂದ ದುಡಿಯುತ್ತಿರುವ ಶ್ರೀನಿವಾಸ್ ಅವರ ಪರ ನಗರ ಜನರ ಒಲವು ಹೆಚ್ಚಿದೆ
ಕಟ್ಟಾ ಹಿಂದೂ ಪ್ರತಿಪಾದಕರು ಆಗಿರುವ ಅವರು ಲಾಗಾಯ್ತಿನಿಂದಲೂ ಬಿಜೆಪಿಗೆ ಅವರ‌ ನಿಷ್ಠೆ. ಮಾಹಿತಿ ಹಕ್ಕು ಕಾರ್ಯಕರ್ತರಾಗಿ ನಗರದ ಎಲ್ಲ ಜನ ಸಮುದಾಯದ ನಡುವೆಯೂ ಅವರು ಚಿರಪರಿಚಿತ. ಅವರ ತೆಕ್ಕೆಗೆ ಬರುವ ಎಲ್ಲ ಜಾತಿ, ಧರ್ಮೀಯರನ್ನು ಬಿಜೆಪಿಗೆ ಎಳೆದು ತರುವ ಚಾಣಾಕ್ಷ. ತುಮಕೂರು ನಗರದಲ್ಲಿ ಬ್ರಾಹ್ಮಣರಿಗೆ ಶಕ್ತಿ ತರುವಲ್ಲಿಯೂ ಅವರ ದುಡಿಮೆ ಕೆಲಸ ಮಾಡಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ವಿ.ಸೋಮಣ್ಣ, ಸುರೇಶ್ ಕುಮಾರ್ ಅವರು ಸಹ ಶ್ರೀನಿವಾಸ್ ಅವರಿಗೆ ಸ್ಥಾನ ಸಿಗಲಿ ಎಂಬ ಆಶಯ ಹೊಂದಿದ್ದಾರೆ. ಶ್ರೀನಿವಾಸ್ ಪರ ಗಟ್ಟಿಯಾಗಿ ನಿಂತಿದ್ದಾರೆ ಎನ್ನುತ್ತವೆ ಬಿಜೆಪಿ ಮೂಲಗಳು.

ಇನ್ನು, ಪಾಲಿಕೆ ಮಾಜಿ ಸದಸ್ಯ, ಮಾಜಿ ಸಚಿವ ಸೊಗಡು ಶಿವಣ್ಣ ಅವರ ಭಾವಮೈದ ನಾಗಣ್ಣ ಸಹ ಪೈಪೋಟಿಯಲ್ಲಿದ್ದಾರೆ. ನಾಗಣ್ಣ ಪರ ಸದ್ಯಕ್ಕೆ ಜಿಲ್ಲೆಯಲ್ಲಿ ಯಾರು ಇದ್ದಂತೆ ತೋರುತ್ತಿಲ್ಲ. ಆದರೆ ಶಿವಣ್ಣ ಅವರೊಂದಿಗಿನ ಯಡಿಯೂರಪ್ಪ ಅವರ ಸಂಬಂಧದ ಕಾರಣ ನಾಗಣ್ಣ ಅವರ ಪರ ಒಲವು ಮುಖ್ಯಮಂತ್ರಿಗಿದೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಎಲ್ಲ ಕಡೆಯೂ ಲಿಂಗಾಯತರೇ ಆಗುತ್ತಾರೆ, ಲಿಂಗಾಯತಯೇತರರಿಗೂ ಅಧಿಕಾರ ಕೊಡಬೇಕಾದರೆ ಶ್ರೀನಿವಾಸ ಅವರಿಗೆ ನೀಡಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಶಾಸಕ ಜ್ಯೋತಿ ಗಣೇಶ್ ಸಹ ಜಿ.ಕೆ.ಶ್ರೀನಿವಾಸ್ ಪರ ಇದ್ದಾರೆ ಎಂದು ಹೇಳಲಾಗುತ್ತಿದೆ.

ತಾವು ಹೇಳಿದ ಇಬ್ಬರಿಗೆ ಸದಸ್ಯರಾಗಿ ಮಾಡಬೇಕು. ಟೂಡಾ ಅಧ್ಯಕ್ಷ ಯಾರಿಗಾದರೂ ಕೊಡಿ. ಮಾಜಿ ಸಚಿವ ಶಿವಣ್ಣ, ಶಾಸಕ ಜ್ಯೋತಿಗಣೇಶ್ ಅವರು ಹೇಳಿದವರಿಗೆ ಅಧ್ಯಕ್ಷ ಸ್ಥಾನ ಕೊಡಲಿ. ಇದರಲ್ಲಿ ನಾನು ಮೂಗು ತೂರಿಸುವುದಿಲ್ಲ ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸುರೇಶ ಗೌಡ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಶಿವಣ್ಣ ಅವರೊಂದಿಗೆ ಸುರೇಶಗೌಡ ಸಂಬಂಧ ಚೆನ್ನಾಗಿರುವ ಕಾರಣ ಶಿವಣ್ಣ ಯಾರ ಕಡೆ ಹೇಳುತ್ತಾರೋ ಅವರ ಪರ ಸುರೇಶಗೌಡ ಒಲವು ವ್ಯಕ್ತಪಡಿಸುತ್ತಾರೆ ಎಂದು ಹೇಳಲಾಗಿದೆ.

ಆದರೆ ಶಿವಣ್ಣ ಅವರೊಂದಿಗೆ ಸುರೇಶಗೌಡ ಸಂಬಂಧ ಚೆನ್ನಾಗಿರುವ ಕಾರಣ ಶಿವಣ್ಣ ಯಾರ ಕಡೆ ಹೇಳುತ್ತಾರೋ ಅವರ ಪರ ಸುರೇಶಗೌಡ ಒಲವು ವ್ಯಕ್ತಪಡಿಸುತ್ತಾರೆ ಎಂದು ಹೇಳಲಾಗಿದೆ.

ಜಿ.ಕೆ.ಶ್ರೀನಿವಾಸ್ ಅವರು ಮೃದು ಸ್ವಭಾವಿ. ಪ್ರಾಮಾಣಿಕ. ಇವರು ಅಧ್ಯಕ್ಷರಾದರೆ ಕಷ್ಟ ಎಂಬ ಕಾರಣದಿಂದ ಭೂಗಳ್ಳರು ಸಹ ಶ್ರೀನಿವಾಸ್ ವಿರುದ್ಧ ಕೆಲಸ ಮಾಡಲು ಆರಂಭಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಚುನಾವಣೆ ವೇಳೆಯಲ್ಲಿ ಹೋರಾಟಗಾರ, ಆರ್ ಟಿಐ ಕಾರ್ಯಕರ್ತರಾದ ಇಮ್ರಾನ್ ಪಾಷ ಅವರ ಜೊತೆಗೆ ಜಿ.ಕೆ.ಶ್ರೀನಿವಾಸ್ ಇದ್ದ ಫೋಟೊವನ್ನು ಬಳಸಿಕೊಂಡು ಕೆಲವರು ಅವರ ವಿರುದ್ಧ ತಂತ್ರ ಹೆಣೆಯುವ ಕೆಲಸ ಆರಂಭಿಸಿದ್ದಾರೆ.

ನಗರ ಶಾಸಕ ಜ್ಯೋತಿಗಣೇಶ್ ಅವರ ನಿರ್ಧಾರವೇ ಹೆಚ್ಚು ಪ್ರಭಾವ ಬೀರುವುದರಿಂದ ಅವರ ಗಟ್ಟಿ ನಿರ್ಧಾರದ ಮೇಲೆ ಶ್ರೀನಿವಾಸ್ ಅಥವಾ ನಾಗಣ್ಣ ಅವರ ಭವಿಷ್ಯ ಅಡಗಿದೆ‌
ಇದೆಲ್ಲರ ನಡುವೆ, ಈ ಸಲದ ಟೂಡ ಅಧ್ಯಕ್ಷ ಸ್ಥಾನದ ಆಯ್ಕೆಯ ಹಿಂದೆ ರಾಜ್ಯ ಬಿಜೆಪಿಯಲ್ಲಿರುವ ಒಳ ಜಗಳ, ಬಲವನ್ನು ಗಟ್ಟಿಗಳಿಸಿಕೊಳ್ಳುವ ಎರಡು ಗುಂಪುಗಳ ನಡುವಿನ ಲೆಕ್ಕಾಚಾರದ ಮೇಲೆಯೂ ನಿಂತಿದೆ ಎಂಬುದು ಬಿಜೆಪಿಯ ಬಹುತೇಕರಿಗೆ ಗೊತ್ತಿರುವ ವಿಚಾರವೇ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?