Friday, April 19, 2024
Google search engine
Homeತುಮಕೂರು ಲೈವ್ತುರುವೇಕೆರೆಯಲ್ಲಿ 84 ರೌಡಿಗಳ ಪರೇಡ್

ತುರುವೇಕೆರೆಯಲ್ಲಿ 84 ರೌಡಿಗಳ ಪರೇಡ್

Publicstory


ತುರುವೇಕೆರೆ: ಗ್ರಾಮ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ 84ಕ್ಕೂ ಹೆಚ್ಚು ರೌಡಿಶೀಟರ್ಗಳ ಪೆರೇಡ್, ಕುಣಿಗಲ್ ಡಿವೈಎಸ್ಪಿ ಕೆ.ಎಸ್.ಜಗದೀಶ್ ಮತ್ತು ಪಿಎಸ್ಐ.ಪ್ರೀತಂ ನೇತೃತ್ವದಲ್ಲಿ ನಡೆಸಲಾಯಿತು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆವರಣದಲ್ಲಿ ರೌಡಿಶೀಟರ್ಗಳನ್ನು ನಿಲ್ಲಿಸಿ ಹಾಜರಾತಿ ಪಡೆದರು. ನಂತರ ಕುಣಿಗಲ್ ಡಿವೈಎಸ್ಪಿ ಕೆ.ಎಸ್.ಜಗದೀಶ್ ರೌಡಿಶೀಟರ್ಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಡಿ.27ರಂದು ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಕೂಡದು. ಇಂತಹವರಿಗೆ ವೋಟ್ ಹಾಕಬೇಕೆಂದು ಜನರಲ್ಲಿ ಒತ್ತಡ ಹೇರಬಾರದು ಎಂದು ಎಚ್ಚರಿಸಿದರು.

ಸಾರ್ವಜನಿಕರಿಗೆ ಮುಕ್ತಮತದಾನ ನಡೆಯಲು ಅವಕಾಶ ನೀಡಬೇಕು. ನಿಮ್ಮ ನಿಮ್ಮ ಊರುಗಳಲ್ಲಿ ಚುನಾವಣೆಗೆ ಪೂರಕವಾದ ವಾತಾವರಣ ನಿರ್ಮಿಸಬೇಕು. ಒಂದು ವೇಳೆ ಜನರಲ್ಲಿ ಸಂಘರ್ಷ ಉಂಟು ಮಾಡಲು ಯತ್ನಿಸಿದರೆ ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಶಿಸ್ತಿನ ಕ್ರಮ ಜರುಗಿಸಲಾಗುವುದು. ಜೊತೆಗೆ ನೀವು ಹೀಗಾಗಲೇ ನೀಡಿರುವ 5 ಲಕ್ಷ ರೂಪಾಯಿಗಳ ಬಾಂಡ್ ಒವರ್ ಹಣವನ್ನು ಸರ್ಕಾರಕ್ಕೆ ಮಟ್ಟಗೋಲು ಹಾಕಿಕೊಳ್ಳಬೇಕಾದೀತು ಎಚ್ಚರಿಕೆ. ನೀವು ಒಳ್ಳೆಯ ವರ್ತನೆ ಬೆಳೆಸಿಕೊಂಡು ಸಜ್ಜನ ವ್ಯಕ್ತಿಗಳಾಗಿ ಬಾಳಿ ಎಂದು ತಿಳಿ ಹೇಳಿದರು.

ಈ ವೇಳೆ ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ 66 ಮತ್ತು ದಂಡಿನಶಿವರ ಠಾಣಾ ವ್ಯಾಪ್ತಿಯ 18 ರೌಡಿಶೀಟರ್ಗಳಿಂದ ನಾವು ಕಾನೂನುಬದ್ದವಾಗಿರುತ್ತೇವೆಂದು ಬಾಂಡ್ ಒವರ್ ಮಾಡಿಸಿ ತಹಶೀಲ್ದಾರ್ಗೆ ಸಲ್ಲಿಸಿ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಪಿಎಸ್ಐ ಶಿವಲಿಂಗಪ್ಪ, ಎಎಸ್ಐ ಶಿವಲಿಂಗಪ್ಪ, ಸಿಬ್ಬಂದಿಗಳಾದ ಸುಪ್ರೀತ್, ಕೇಶವಮೂರ್ತಿ,ನಾಗರಾಜು, ಶಶಿಧರ್, ಸತೀಶ್, ವಿಜಯಕುಮಾರ್, ಗಂಗಾವತಿ ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?