Friday, March 29, 2024
Google search engine
Homeಜನಮನದನ ಕುರಿ ಅಟ್ಟಿದರೂ ಅರಣ್ಯ ಬೆಳೆಯಲಿಲ್ಲ ಏಕೆ?

ದನ ಕುರಿ ಅಟ್ಟಿದರೂ ಅರಣ್ಯ ಬೆಳೆಯಲಿಲ್ಲ ಏಕೆ?

ಉಜ್ಜಜ್ಜಿ ರಾಜಣ್ಣ


ಆಡುಕುರಿ ದನಗಾಯಿಗಳು ಕಾಡಿನೊಳಗೆ ಹೋಗದಂತೆ ಮಾಡಿದರು. ಅದರಿಂದ ವನವನ್ನೇನು ಉದ್ಧಾರ ಮಾಡುವುದು ಕಾಣಲಿಲ್ಲ.

ಪಶುಪಾಲನಾ ಸಮುದಾಯಗಳನ್ನು ಕಳ್ಳರನ್ನು ಓಡಿಸುವವರಂತೆ ಕಾಡಿನಿಂದ ಹೊರದೂಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. Local Environment Fecility ಗಳನ್ನು ಆಡುಕುರಿ ದನಗಾಯಿಗಳಿಂದ ಕಸಿದುಕೊಳ್ಳಲಾಯಿತು.

ನಮ್ಮ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತಿಗಳು, ತಾಲ್ಲೂಕು ಪಂಚಾಯತಿಗಳು, ಜಿಲ್ಲಾ ಪಂಚಾಯತಿಗಳು‌ ಜೈವಿಕ ಸಂಪನ್ಮೂಲಗಳ ಬಳಕೆದಾರರಿಗೆ ಬಾಯಿಕುಕ್ಕೆ ಇಡುವ ಮೂಲಕ United Nations Development Programs ಗಳಿಗೇ ವಿರುದ್ಧವಾಗಿ ನಡೆದುಕೊಂಡವು.

ಪಶುಪಾಲನೆ ಮತ್ತು ಅರಣ್ಯ ಅಭಿವೃದ್ಧಿ ಜೊತೆಜೊತೆಗೇ ‌ಬೆಳವಣಿಗೆ ಮಾಡುವುದರ ಬದಲಾಗಿ ಜೈವಿಕ ಸಂಪನ್ಮೂಲಗಳು ಮತ್ತು ಜೀವವೈವಿಧ್ಯತೆಯ ಅರಿವುಗಳುಳ್ಳ ಸಮುದಾಯಗಳಿಗೆ ವಂಚನೆ ಮಾಡಿ ಅವುಗಳ ವೃತ್ತಿ ಕೌಶಲಗಳನ್ನು ಕಿತ್ತುಕೊಂಡು ಹಳ್ಳೇರು, ಹಳ್ಳೇವು ಎಂದು ಕಡೆಗಣಿಸಿ ಅವರನ್ನು ಅವರ ಬದುಕಿನ ವಲಯದಿಂದಲೇ ಹೊರ ಹೋಗುವಂತೆ ಮಾಡಲಾಯಿತು.

ಪಶುಪಾಲನೆಯಂತಹ ವೃತ್ತಿ ಜೀವನ ಶೈಲಿಯನ್ನು ಹೊಂದಿದ್ದ ಸಮುದಾಯಗಳನ್ನು ಅಕುಶಲ ಕಾರ್ಮಿಕರೆಂದು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೆಲಸಕ್ಕಾಗಿ ಕರೆಯಲಾಗುತ್ತಿದೆ.‌

ಸದರಿ ಯೋಜನೆಯ ಅಡಿಯಲ್ಲಿ ವಿದಿ ಇಲ್ಲದೆ ಇವರು job card ಗಳನ್ನು ಪಡೆಯುವುದು ಅನಿವಾರ್ಯವಾಗಿದೆ. ಆಡುಕುರಿ ಎತ್ತುಎಮ್ಮೆ‌ ಕರಮರಿ ಆಳಿದ ಸಮುದಾಯಗಳನ್ನು ಅವುಗಳ ವೃತ್ತಿ ಜೀವನದ ವಿಶೇಷ ಆರ್ಥಿಕ ವಲಯದಲ್ಲಿ ಸಲ್ಲದ ಅಭಿವೃದ್ಧಿ ಯೋಜನೆ ಜಾರಿಗೆ ತಂದವು ಸರ್ಕಾರಗಳು. ಈಗ ಅವರನ್ನು ರಸ್ತೆ ಡಾಂಬಾರು, ಚರಂಡಿ, ಕೂಲಿ ಕೆಲಸಕ್ಕಾಗಿ ಕರೆಯಲಾಗುತ್ತಿದೆ. ಇವರ ಮಹದಾಸೆ ಸಾಮ್ರಾಜ್ಯ ಕಟ್ಟಿ ಸಾಂಮ್ರಾಟರಾಗಬೇಕೆಂಬುದಾಗಿರಲಿಲ್ಲ. ಈಗಲೂ ಈ ಸಮುದಾಯಗಳ ಮಹದಾಸೆ ದನಕುರಿ ಆಳುವುದಾಗಿದೆ.

Biological diversity ಬಳಕೆಯ ನಿಸರ್ಗ ಸಹಜ ಜ್ಞಾನ ಹೊಂದಿರುವ ಆಡುಕುರಿ ಕಾಯುವವರನ್ನು ಸರ್ಕಾರಗಳು ಕಾಡು ತೊರೆಸಿದ ನಂತರದಲ್ಲಿ ದೇವರ ದೈಮಾರರ ಕಾಲದ ಕಾಡೇನು ದೇಶದಲ್ಲಿ ನಿರ್ಮಾಣವಾಗಿಲ್ಲ. ಆಗಾಗಿ, National biodiversity authority, State biodiversity board and Biodiversity management committees ಗಳಿಂದಲೂ ಕರ್ನಾಟಕ ಹಾಗು ಭಾರತೀಯ ಪಶುಪಾಲನಾ ಸಮುದಾಯಗಳು ವಂಚನೆಗೆ ಒಳಗಾಗಿವೆ.

ಈ ಸಮುದಾಯಗಳು ಕಾಡಿನಲ್ಲಿ ಬೆಳೆಯುವ ಮರಮಂಡಿಗಳ Timber ಗಳಲ್ಲಿ, ಹಾಗು ಖನಿಜ ನಿಕ್ಷೇಪಗಳನ್ನು ಭಾಗ ಕೇಳಿಲ್ಲ. ಹುಲ್ಲು ಬೆಳೆಯುತ್ತಿರುವ ಪ್ರದೇಶದಲ್ಲಿ ಪರಂಪರೆಯ ಪಶುಪಾಲನಾ ವೃತ್ತಿಗೆ ಜಾಗ ಹಿಡಿದುಕೊಂಡಿದ್ದವು. ಭಾರತೀಯ ಭಾಷೆಗಳನ್ನೂ ಬೆಳೆಸಲು ಕಾವ್ಯಗಳನ್ನು ಕಟ್ಟಿ ಬೆಳೆಸಿದರು.

ದೇವರದೈಮಾರ, ಜುಂಜಪ್ಪ, ಸಿವು ಸಿತ್ರುಲಿಂಗ, ಗಂಗಮಾಳಿ, ಹರಿಯಾಲ್ದ ದೇವಿ, ಕುಮಾರ ರಾಮ, ಈರಬೊಮ್ಮಕ್ಕ, ಜಡೆಗೊಂಡ, ಹೊನ್ನಜ್ಜಿ ಸಿರಿಯಪ್ಪ, ಚಿತ್ತಯ್ಯ, ಕಾಟಯ್ಯ, ಅಜ್ಜಪ್ಪ, ಸುರುಹೊನ್ನೆ ಮರದ ಈರಣ್ಣ, ವೀರಕರಿಯಣ್ಣ, ಸಿಡ್ಲು ಪಾಲಯ್ಯ, ಇಂತಹ ಹಲವಾರು ಕನ್ನಡದ ಗಣೆ ಕಾವ್ಯಗಳನ್ನು ಕರ್ನಾಟಕದ ಪಶುಪಾಲನಾ ಸಮುದಾಯಗಳು ಇಂದಿಗೂ ಬಾಳಿ ಬದುಕುತ್ತಿವೆ.

Non timber forest products groups ಗಳಾಗಿರುವ ಪಶುಪಾಲನಾ ಸಮುದಾಯಗಳು ಮತ್ತು ಬುಡಕಟ್ಟು ಜನಾಂಗಗಳನ್ನು ಸ್ಥಳೀಯ ಗ್ರಾಮ ಪಂಚಾಯತಿಗಳ ಹಂತದಲ್ಲಿ ರಚಿಸಲಾಗುವ ಅಥವಾ ಕೆಲಸ ಮಾಡುವ civil society organizations and Technical support group’s ಗಳಿಂದಲೂ ದೂರ ಇಡಲಾಯಿತು.

ಹುಲ್ಲುಗಾವಲು ಪ್ರದೇಶಗಳಲ್ಲಿ ಹುಲ್ಲು ಬೀಜ ಹುಟ್ಟುವ ಜಾಗದಿಂದಲೂವೆ ಹೊರಗಿಟ್ಟು ನಾಮಕಾವಸ್ಥೆಗೆ ಗ್ರಾಮ ಪಂಚಾಯತಿಗಳೂ ಸಹ ಈ ಸಮುದಾಯದಗಳ ಪರವಾಗಿ ಕೆಲಸ ಮಾಡಲೇಬೇಕಾದಂತಹ ಸಮಿತಿಗಳನ್ನು ರಚಿಸಿಕೊಳ್ಳುತ್ತಿವೆ.


ಉಜ್ಜಜ್ಜಿ ರಾಜಣ್ಣ: 9 4 4 8 7 4 7 3 6 0

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?