Friday, March 29, 2024
Google search engine
Homeಜಸ್ಟ್ ನ್ಯೂಸ್ದೀಪುಗೆ ಜೆಡಿಎಸ್ ಸಾರಥ್ಯ

ದೀಪುಗೆ ಜೆಡಿಎಸ್ ಸಾರಥ್ಯ

ಕೆ.ಬಿ.ದಯಾನಂದ ಗೌಡ

ತುಮಕೂರು; ಜೆಡಿಎಸ್ ಹಿರಿಯ ಮುಖಂಡ, ಬೋರೇಗೌಡ ಅವರ ಪುತ್ರ ಕೆ.ಬಿ.ದಯಾನಂದ ಗೌಡ (ದೀಪು ಬೋರೇಗೌಡ) ಅವರನ್ನು ಜೆಡಿಎಸ್ ಯುವ ಜನತಾ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನೇಮಕ ಮಾಡಿದ್ದಾರೆ.
ಈ ಮೂಲಕ ಪಕ್ಷದ ಯುವ ಘಟಕದ ಚುಕ್ಕಾಣಿ ನೀಡಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ, ತುಮಕೂರು ನಗರ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಬಲವರ್ಧನೆಯಲ್ಲಿ ಬೋರೇಗೌಡ ರು ಹಾಗೂ ದೀಪು ಪ್ರಮುಖ ಪಾತ್ರ ವಹಿಸಿದ್ದರು.

ತುಮಕೂರು ನಗರ ಕ್ಷೇತ್ರದಿಂದ‌ ಬೋರೇಗೌಡ ಅವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಸ್ವ ಪಕ್ಷೀಯರ ಚಿತಾವಣೆಯಿಂದ‌ ಅವರಿಗೆ ಟಿಕೆಟ್ ತಪ್ಪಿತ್ತು.

ಚುನಾವಣೆ ಬಳಿಕ ಈ ಬಗ್ಗೆ ದೇವೇಗೌಡರು ಸಹ ವಿಷಾದಿಸಿದ್ದರು. ಈಗ ದೀಪು ಅವರಿಗೆ ಉನ್ನತ ಸ್ಥಾನ ನೀಡಿದ್ದಾರೆ.

ತುಮಕೂರು ನಗರ ಕ್ಷೇತ್ರದಲ್ಲಿ ತಮ್ಮದೇ ಆದ‌ ಪ್ರಭಾವ ಹೊಂದಿರುದ್ದಾರೆ. ಅವರ ನೇಮಕ ಅವರ ಅಭಿಮಾನಿಗಳು, ಯುವಕರಿಗೆ ಖುಷಿ ಸಂದಿದೆ.

ದೇವೇಗೌಡರು ನನ್ನ ಮೇಲೆ ನಂಬಿಕೆ ಇಟ್ಟು ಇಷ್ಟು ದೊಡ್ಡ ಜವಾಬ್ದಾರಿ ಹೊರಿಸಿದ್ದಾರೆ. ತುಮಕೂರು ಜಿಲ್ಲೆ ಮಾತ್ರ ಅಲ್ಲ, ರಾಜ್ಯದಲ್ಲಿ ಯುವಕರನ್ನು ಪಕ್ಷಕ್ಕೆ ಕರೆ ತಂದು ಪಕ್ಷ ಬಲಪಡಿಸಲು ಪಣ ತೊಟ್ಟು ಕೆಲಸ ಮಾಡುತ್ತೇನೆ ಎಂದು ದೀಪು ಪಬ್ಲಿಕ್ ಸ್ಟೋರಿಗೆ ಪ್ರತಿಕ್ರಿಯಿಸಿದರು.

RELATED ARTICLES

2 COMMENTS

Leave a Reply to Girish Cancel reply

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?