Tuesday, April 16, 2024
Google search engine
Homeತುಮಕೂರು ಲೈವ್ದೇವರ ಕುದುರೆಗೆ ವೀಚಿ ಪ್ರಶಸ್ತಿಯ ಗರಿ

ದೇವರ ಕುದುರೆಗೆ ವೀಚಿ ಪ್ರಶಸ್ತಿಯ ಗರಿ

Publicstory. in


ತುಮಕೂರು: ಕಥೆಗಾರ ಎಸ್ ಗಂಗಾಧರಯ್ಯ, ಸುರೇಶ್ ನಾಗಲಮಡಿಕೆ ಮತ್ತು ಭುವನಾ ಹಿರೇಮಠ ಅವರು 2019ನೇ ಸಾಲಿನ ವೀಚಿ ಸಾಹಿತ್ಯ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ.

2018ರಲ್ಲಿ ಪ್ರಕಟವಾಗಿದ್ದ ಆಯ್ಕೆಗೆ ಬಂದಿದ್ದ 162 ಕೃತಿಗಳನ್ನು ಅವಲೋಕನ ಮಾಡಿ ಈ ಆಯ್ಕೆಯನ್ನು ಮಾಡಲಾಗಿದೆ.

ಎಸ್. ಗಂಗಾಧರಯ್ಯ ಅವರ ‘ದೇವರ ಕುದುರೆ’ ಕಥಾಸಂಕಲನ ಮತ್ತು ಸುರೇಶ್ ನಾಗಲಮಡಿಕೆ ಅವರ ‘ಹಲವು ಬಣ್ಣದ ಹಗ್ಗ’ ವಿಮರ್ಶಾ ಕೃತಿ ವೀಚಿ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದು ಪ್ರಶಸ್ತಿಯನ್ನು ಇಬ್ಬರಿಗೂ ಸಮನಾಗಿ ಹಂಚಿಕೆ ಮಾಡಲಾಗಿದೆ. ಪ್ರಶಸ್ತಿಯು ರೂ.25000/- ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

ಸುರೇಶ್ ನಾಗಲಮಡಿಕೆ

ಭುವನಾ ಹಿರೇಮಠ ಅವರ ‘ಟ್ರಯಲ್ ರೂಮಿನ ಅಪ್ಸರೆಯರು’ ಎಂಬ ಕವನ ಸಂಕಲನ ವೀಚಿ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಗೆ ಪಾತ್ರವಾಗಿದ್ದು, ಪ್ರಶಸ್ತಿಯು ರೂ.5000/-ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

ಲೇಖಕರಾದ ಡಾ.ಕರೀಗೌಡ ಬೀಚನಹಳ್ಳಿ, ಡಾ.ವಸುಂಧರಾ ಭೂಪತಿ ಮತ್ತು ಡಾ.ರವಿಕುಮಾರ್ ನೀಹ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಈ ಸಾಲಿನ ಈ ಪ್ರಶಸ್ತಿಗಳನ್ನು ಆಯ್ಕೆಮಾಡಿದೆ.

ಭುವನ ಹಿರೇಮಠ

ಫೆಬ್ರವರಿ 23 ರಂದು ತುಮಕೂರು ಕನ್ನಡ ಭವನದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಎಲ್ಲಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

RELATED ARTICLES

2 COMMENTS

  1. ಅಭಿನಂದನೆಗಳು ಎಲ್ಲರಿಗೂ.
    ಪುಸ್ತಕಕ್ಕಾಗಿ ಸಂಪರ್ಕಿಸಬೇಕಾದ ಮೊಬೈಲ್ ನಂಬರ್ ನೀಡಿ

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?