Tuesday, April 16, 2024
Google search engine
Homeಸಾಹಿತ್ಯ ಸಂವಾದನಾನರಿಯೆ ನಿನ್ನ ಪ್ರೇಮದ ಪರಿಯ...!!!

ನಾನರಿಯೆ ನಿನ್ನ ಪ್ರೇಮದ ಪರಿಯ…!!!

ಮಮತಾ ಗೌಡ


ಬದುಕಿದರೆ ಹೀಗೆಯೇ ಬದುಕಬೇಕು ಎಂದು ನಿರ್ಧರಿಸಿದ್ದನೇನೋ! ಅಂವ ಆಕೆಯನ್ನು ಮೋಹಿಸಿದ. ಆಕೆಯೊಳಗೆ ಕನಸುಗಳನ್ನು ಹುಟ್ಟು ಹಾಕಿದ, ಕಳೆದೇಳು ಜನುಮದ ಫಲ ನೀನೆಂದ. ಎದ್ದು ಬಿದ್ದು ಕುಣಿದಾಡಿತ್ತು ಆಕೆಯ ಮನಸ್ಸು. ಅರಿಯದ ಹುಡುಗಿಗೆ ಅರೆ ಅಮಲೇರಿಸಿ ಈಗ ಈತ ಸುಮ್ಮನಾದ!

ಹೆಸರಿಗಾಕೆ ಆತನ ಪತ್ನಿ, ಮನದನ್ನೆ. ಒಂದು ದಿನ ಕರೆದು ಮುದ್ದಿಸುತ್ತಾನೆ. ಮತ್ತೊಂದು ವರುಷ ಮುಖ ತಿರುಗಿಸಿಯೇ ನಿಂತಾನು. ಅಲ್ಲಿಯವರೆಗೆ ಈಕೇ ಕಾಯುತ್ತಲೆ ಇರಬೇಕು. ಅವನ ಬಗ್ಗೆಯೇ ಕನಸು ಹೆಣೆಯುತ್ತಿರಬೇಕು! ಆಕೆ ಸಿಡುಕಿ ಎಂದು ಸುತ್ತಮುತ್ತಲೆಲ್ಲ ಬುಡ ಬುಡಕೆ ಹಬ್ಬಿಸಿ ಮೌನವಾಗಿ ಮನೆಯೊಳಗೆ ಕುಳಿತ. ಸಿಡುಕಲಿಲ್ಲ ಆಕೆ!

ಅವರೆಲ್ಲ ಸರಿ ಇಲ್ಲ, ಮನೆಯೊಳಗೆ ಇದ್ದು ಬಿಡು ಎಂದ ಮರು ಮಾತನಾಡಲಿಲ್ಲ. ಆತನಿಂದ ಸಿಗದ ಪ್ರೀತಿಗೆ ಹಂಬಲಿಸಿ ಮನದೊಳಗಿದ್ದ ಆಸೆ,ಕನಸುಗಳೆಲ್ಲ ಹಳಸಲಾಗಿದೆ.

ಮನಸ್ಸು ಸಾವಿರ ಬಾರಿ ರೋಧಿಸುತ್ತದೆ. ಈಗ ಕಣ್ಣೀರೂ ಯಾಂತ್ರಿಕ. ಒಂದೊಂದು ಸಲ ಬಾರಿ ಒತ್ತರಿಸಿ ಆಳು ಬಂದರೆ ಯಾರಿಗೂ ಹೇಳದೆ ತನ್ನ, ಮನ ಎಷ್ಟು ಬಾದಿಸಿರಬೇಕು ಹೆಣ್ಣು ಮಕ್ಕಳು ತಾಳ್ಮೆಯ ಪ್ರತಿಬಿಂಬ ಆ ಕಟ್ಟೆ ಒಮ್ಮೆ ಒಡೆದು ಹೋದರೆ ಮತ್ತೆಂದು ಅವಳು ಅವನನ್ನು ಬಯಸುವುದಿಲ್ಲ.

ಹೆಣ್ಣು ದಿನದ ಬೆಳಗು. ಮನೆಯೆದುರು ಚೆಂದದ ರಂಗೋಲಿ ಬಿಡಿಸಿ ತನ್ನ ಮನಕ್ಕು ರಂಗೋಲಿ ಬಿಡಿಸಿಕ್ಕೂಳುವ ಕಲೆ ಅರಿತವರು ಅಂತಹ ಹೆಂಡತಿಯನ್ನು ಕೇವಲ ಒಂದು ಮನೆ ಕೆಲಸಕ್ಕೆ ಸೇರಿದವಸ್ತುವಂತೆ ಕಾಣುವ ಪ್ರತಿ ಗಂಡನ ವಿರುದ್ಧ ನನ್ನದೊಂದು ಧಿಕ್ಕಾರ. ಆದರೆ ಇಂದೆಕೋ ಆಕೆ ಸುಮ್ಮನೆ ಇದ್ದಾಳೆ.

ಆಕೆಗೆ ತನಗೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದ ಅಪ್ಪನ ನೆನಪು ಅಮ್ಮನ ಪ್ರೀತಿ ಎಂದು ನೆನಪು ಬರಲಿಲ್ಲ. ಕಾರಣ ಗಂಡನ ಮನೆಯ ಮಾನದ ವಿಷಯ. ಆಕೆಗೆ ಆಕಯೇ ಒಂದು ಚೌಕಟ್ಟು. ಆಕೆಯ ಗಂಡನಿಗೆ ಇದೆಲ್ಲ ಅರ್ಥವಾಗುತ್ತದೆ ಒಂದು ದಿನ ಎಂಬ ಕಾರಣಕ್ಕೆ ಅವನನ್ನು ಸಹಿಸಿಕೊಂಡಿರಬಹುದು. ಆತನ ಪ್ರೀತಿ ಒಂದೊಂದು ದಿನ ನಾಜೂಕಿನ ಪ್ರೀತಿ ಮರುದಿನ ಅದೇ ಹಳೆಯ ಚಾಳಿ.

ಪ್ರತಿ ಮನೆಯೊಳಗೊ ಹೆಣ್ಣಿನ ಮನದಲ್ಲಿ ಹೀಗೊಂದು ವೇದನೆ ಇರಬಹುದು ಎಂದು ತನ್ನನ್ನು ತಾನೇ ಸಂತೈಸಿಕೂಳ್ಳುತ್ತಾಳೆ. ಬದಲಾಗದ ಬದುಕಲ್ಲಿ ಆತನ ಬದಲಾವಣೆಗಾಗಿ ಕಾಯುವುದೊಂದೇ ಆಕೆಯ ಗುರಿ. ಅಲ್ಲಿಯವರೆಗೆ ಏಕಾಂತ ಕಳೆಯಲು ಆ ಹಾಡಿದೆ, ನೀ ಮಿಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ…..

RELATED ARTICLES

2 COMMENTS

Leave a Reply to Mamtaa Cancel reply

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?