Friday, March 29, 2024
Google search engine
Homeತುಮಕೂರು ಲೈವ್ನೀಲಗಿರಿ ನೆಟ್ಟರೆ ಕೊಳವೆಬಾವಿಯೇ ಬಂದ್

ನೀಲಗಿರಿ ನೆಟ್ಟರೆ ಕೊಳವೆಬಾವಿಯೇ ಬಂದ್

ಲಕ್ಷ್ಮೀಕಾಂತರಾಜು ಎಂಜಿ


ತುಮಕೂರು: ಹೌದು. ನೀಲಗಿರಿ ಎಂಬುದು ಅಂತರ್ಜಲವನ್ನ ಕೊಳವೆ ಬಾವಿಗಿಂತಲೂ ಅಧಿಕವಾಗಿ ಹೀರುವ ಬಕಾಸುರ ಮರವಾಗಿದೆ. ಈ ನೀಲಗಿರಿ ಮರಗಳಲ್ಲಿ ಹಸಿ ನೀರಿನಾಂಶವಿದ್ದರೂ ಬೆಂಕಿ‌ ಇಟ್ಟರೆ ಹಸಿ ಮರವೇ ಧಗ ಧಗ ಎಂದು ದಹಿಸುವ ಮರ ಇದಾಗಿದೆ.

ಈ ಪರಿಣಾಮದಿಂದ ನೀಲಗಿರಿಯು ಭೂಮಿಯಲ್ಲಿನ ಅಂತರ್ಜಲ ಬಸಿಯುವ ಯಂತ್ರಗಳಾದ ಬೋರ್ ವೆಲ್ ನ ಸಬ್ ಮರ್ಸಿಬಲ್ ಮೊಟಾರ್ ಪಂಪುಗಳಂತಾಗಿ‌ಬಿಟ್ಟಿವೆ. ಅಂತರ್ಜಲ ಹೀರಿಕೊಳ್ಳುವುದರಲ್ಲಿ ನೀಲಗಿರಿಯು ಕೊಳವೆ ಬಾವಿಗಳಷ್ಟೆ ಪಾತ್ರವಹಿಸುತ್ತವೆ .

ನೆಡದಿರಿ‌ ನೀಲಗರಿ ಎಂಬ ಜಾಗೃತಿ ಪುಸ್ತಕವೊಂದನ್ನ ಲೇಖಕ ಚಳ್ಳಕೆರೆ ಯರ್ರಿಸ್ವಾಮಿ ದಶಕಗಳ ಹಿಂದೆಯೇ ಬರೆದು ನೀಲಗಿರಿ ಕುರಿತು ಬಾಧಕಗಳ ಕುರಿತು ಎಚ್ಚರಿಸಿದ್ದಾರೆ.

ನೀಲಗಿರಿಯನ್ನ ಈ ಹಿಂದಿನಿಂದಲೂ ಬೆಂಗಳೂರು, ಕೋಲಾರ,ಬೆಂಗಳೂರು‌ ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ‌ ಅತಿ ಹೆಚ್ಚಾಗಿ ಒಂದು ಬೆಳೆಯನ್ನಾಗಿ ರೈತರು ತಮ್ಮ ಜಮೀನುಗಳಲ್ಲಿ ದೀರ್ಘಾವಧಿಯಲ್ಲಿ ಬೆಳೆದು ಸೌದೆಯಾಗಿ ಮಾರಾಟ ಮಾಡುವ‌ ಪರಿಪಾಠ ಹೊಂದಿರುತ್ತಾರೆ.

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ತನ್ನ ಅರಣ್ಯ ಪ್ರದೇಶದಲ್ಲಿ ಅತಿ ಹೆಚ್ಚಾಗಿ ನೀಲಗಿರಿ‌ ನೆಡೆಸಿ‌ ಪೋಷಿಸಿಸುತ್ತಿದೆ. ಇಂಥಹ ನೀಲಗಿರಿ ಮರಗಳು ಪ್ರತಿದಿನಕ್ಕೆ ಭೂಮಿಯಲ್ಲಿನ ನಲವತ್ತು ಲೀಟರ್ ನೀರನ್ನ ಹೀರಿಕೊಳ್ಳಲಿದೆ ಎಂದು ಪ್ರಾಯೋಗಿಕವಾಗಿ ಸಾಬೀತಾಗಿದೆ.

ಈ ಪರಿಣಾಮದಿಂದ ನೀಲಗಿರಿಯು ಭೂಮಿಯಲ್ಲಿನ ಅಂತರ್ಜಲ ಬಸಿಯುವ ಯಂತ್ರಗಳಾದ ಬೋರ್ ವೆಲ್ ನ ಸಬ್ ಮರ್ಸಿಬಲ್ ಮೊಟಾರ್ ಪಂಪುಗಳಂತಾಗಿ‌ಬಿಟ್ಟಿವೆ. ಅಂತರ್ಜಲ ಹೀರಿಕೊಳ್ಳುವುದರಲ್ಲಿ ನೀಲಗಿರಿಯು ಕೊಳವೆ ಬಾವಿಗಳಷ್ಟೆ ಪಾತ್ರವಹಿಸುತ್ತವೆ .



ಅರಣ್ಯದಲ್ಲಿ ನೀಲಗಿರಿಗೆ ಇತಿಶ್ರೀ

ತಾಲ್ಲೂಕು ಜಾಗೂ, ಶಿರಾ ತಾಲ್ಲೂಕಿನ ಭೌಗೋಳಿಕ‌ ಪ್ರದೇಶದಲ್ಲಿರುವ ಅಂಕಸಂದ್ರ ಮೀಸಲು ಅರಣ್ಯದಲ್ಲಿ ಸುಮಾರು 2 ಸಾವಿರ ಎಕರೆಯಲ್ಲಿ‌ ನೀಲಗಿರಿ ಇದೆ.ಕಳೆದ ಐದು ವರ್ಷದಿಂದ ಸರ್ಕಾರದ ಆದೇಶದಂತೆ ನಾವು ನೀಲಗಿರಿ ಮತ್ತು ಅಕೇಶಿಯಾ ಸಸಿಗಳನ್ನ ನಾವು ನೆಟ್ಟಿಲ್ಲ.ಯಾವುದೇ ಆದೇಶವಿಲ್ಲದೆ ನಾವು ಅರಣ್ಯದಲ್ಲಿನ ನೀಲಗಿರಿಯನ್ನ ತೆಗೆಯುವುದಾಗಲಿ , ಕತ್ತರಿಸುವುದಾಗಲಿ ಮಾಡುವುದಿಲ್ಲ. ಅರಣ್ಯ ಇಲಾಖೆಯಲ್ಲಿನ ನೀಲಗಿರಿಯನ್ನ ಸಸಿ ಹಾಕಿಸಿದ ನಂತರದ 30 ವರ್ಷದ ನಂತರ ನೀಲಗಿರಿಯನ್ನ ಇಲಾಖೆಯ ಅನುಮತಿಯಂತೆ ತೆಗೆದು ಹೊಸ ಪ್ಲಾಂಟೇಶನ್ ಮಾಡಲಾಗುವುದು.

ರವಿ, ವಲಯ ಅರಣ್ಯಾಧಿಕಾರಿಗಳು.‌

ಗುಬ್ಬಿ ವಲಯ



ನೀಲಗಿರಿಯ ಹಿನ್ನೆಲೆ

ನೀಲಗಿರಿಯು ಆಸ್ಟ್ರೇಲಿಯಾ ದ ಸ್ಥಳೀಯ ಸಸ್ಯವಾಗಿದ್ದು ಗುಂಪಾಗಿ ಬೆಳೆಯುವ ಪೊದೆ ರೂಪವಾಗಿ ಬೆಳೆಯುವ ಮರಗಳಾಗಿವೆ. ಇದು ನೈಸರ್ಗಿಕ‌ ಕೀಟನಾಶಕವಾಗಿದ್ದು ನೀಲಗಿರಿ ಎಣ್ಣೆಯು ಅತ್ಯಂತ ಉಷ್ಣಾಂಶವಾಗಿದೆ. ಇದರ ಅಂತರ್ಜಲ ಹೀರುವಿಕೆಯ ಉದಾಹರಣೆಯೆಂದರೆ ಜೌಗು ನೆಲಗಳನ್ನ ಒಣಗಿಸಲು ನೀಲಗಿರಿ ಬೆಳೆಸುತ್ತಾರೆಂದರೆ ನೀಲಗಿರಿ ಮಹಾತ್ಮೆಯನ್ನ ಊಹಿಸಿಕೊಳ್ಳಲೂ ಅಸಾಧ್ಯ.

ನೀಲಗಿರಿಯು ಅತ್ಯಂತ ಉಷ್ಣಾಂಶ ಇರುವ ಮರಗಳಾಗಿದ್ದು ಕಾಳ್ಗಿಚ್ಚು ಉದ್ಬವವಾಗಲು ನೀಲಗಿರಿಯೂ ಪ್ರಮುಖ ಕಾರಣ . ಪ್ರಸ್ತು‌ತ ಆಸ್ಟ್ರೇಲಿಯಾದ ಕಾಡಿನ ಕಾಳ್ಗಿಚ್ಚಿಗೆ ಅಲ್ಲಿನ ನೀಲಗಿರಿಯೇ ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು.

ಇಂಥಹ ಅಂತರ್ಜಲ ಮತ್ತು‌ಅರಣ್ಯಕ್ಕೂ ಮಾರಕವಾಗಿರುವ ನೀಲಗಿರಿಯನ್ನ ಅರಣ್ಯ ಇಲಾಖೆ ಇನ್ನೂ ನಾಟಿ ಮಾಡಿ ಪೋಷಿಸುತ್ತಿದೆ.

ಗುಬ್ಬಿ ತಾಲ್ಲೂಕು ಅಂಕಸಂದ್ರ ಮೀಸಲು‌ ಅರಣ್ಯವು ಸುಮಾರು‌ 7 ಸಾವಿರ ಎಕರೆಯಷ್ಟು ಅರಣ್ಯ ಭೂಮಿಯಿದ್ದು ಅದರಲ್ಲಿ ಸುಮಾರು ಎರೆಡು ಸಾವಿರ ಎಕರೆಯಷ್ಟು ಅರಣ್ಯ ಭೂಮಿಯಲ್ಲಿ ನೀಲಗಿರಿ‌ ಕುರುಚಲು ಕಾಡಿದೆ ಎನ್ನುತ್ತಾರೆ ಗುಬ್ಬಿಯ ವಲಯ ಅರಣ್ಯ‌ಅಧಿಕಾರಿಗಳಾದ ರವಿ ಅವರು.

ಈ ಮೀಸಲು ನೀಲಗಿರಿ ಅರಣ್ಯದ ಆಸು ಪಾಸಿನಲ್ಲಿರುವ ರೈತರ ಜಮೀನುಗಳಲ್ಲಿ ಅಂತರ್ಜಲ ಬತ್ತಲು ಈ ನೀಲಗಿರಿಯೂ ಒಂದು ಪ್ರಮುಖ ಕಾರಣವಾಗಿದೆ. ಈ ಪರಿಣಾಮವನ್ನ ಅರಿತ‌ ಬೆಂಗಳೂರು‌ ಗ್ರಾಮಾಂತರ ಜಿಲ್ಲಾಧಿಕಾರಿಗಳು ರಾಜ್ಯ ಉಚ್ಛನ್ಯಾಯಾಲಯದ‌ ಆದೇಶದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೆಳೆದಿರುವ ರೈತರೆಲ್ಲರೂ ನೀಲಗಿರಿಯನ್ನ ತೆರವು ಮಾಡುವಂತೆ ಆದೇಶ ಮಾಡಿದ್ದಾರೆ.

ಈ ಬಗೆಯ ಆದೇಶಗಳು ನೀಲಗಿರಿ ಹೊಂದಿರುವ ಎಲ್ಲ‌ ಜಿಲ್ಲೆಗಳಲ್ಲೂ ಆಗಿ ಅರಣ್ಯ ಮತ್ತು ಖಾಸಗಿ ರೈತರ ಜಮೀನಿನಲ್ಲಿರುವ ನೀಲಗಿರಿಯನ್ನ ತೆಗೆಸುವ ನಿರ್ಧಾರವನ್ನ ಸರ್ಕಾರವನ್ನ ಶೀಘ್ರವಾಗಿ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ರೈತಾಪಿ ವರ್ಗ.

ಅಂತರ್ಜಲ ವೃದ್ಧಿಸಲು ಸಣ್ಣನೀರಾವರಿ ಇಲಾಖೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಇದರ ಜೊತೆಗೆ ಅಂತರ್ಜಲ ಕಸಿಯುತ್ತಿರುವ ನೀಲಗಿರಿಯನ್ನ ಸರ್ಕಾರ ನಿಷೇಧಿಸುವ ಅಗತ್ಯತೆ ಇದೆ.

ನೀಲಗಿರಿ ತೆಗೆಯಿರಿ


ನಮ್ಮ ಊರು ಅರಣ್ಯದಂಚಿನಲ್ಲಿದ್ದು ಅತಿ ಹೆಚ್ಚು ನೀಲಗಿರಿ ಇದೆ. ಇದರಿಂದ ನಮ್ಮ ಭಾಗದಲ್ಲಿ ಅಂತರ್ಜಲ ಕುಸಿಯಲಿಕ್ಕೆ ನೀಲಗಿರಿಯು ಪ್ರಮುಖ ಕಾರಣ. ಆದ್ದರಿಂದ ಅರಣ್ಯ ಇಲಾಖೆಯು ಇಲ್ಲಿನ ನೀಲಗಿರಿ ತೆಗೆದು ಇತರೆ ಜಾತಿ ಮರಗಳ ಸಸಿಗಳನ್ನ ಬೆಳೆಸಬೇಕು.

ಗಜೇಂದ್ರ ,ಬಿ ಇ‌ ವಿದ್ಯಾರ್ಥಿ ಅಂಕಸಂದ್ರ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?