Saturday, April 13, 2024
Google search engine
Homeಜಸ್ಟ್ ನ್ಯೂಸ್ನೈರ್ಮಲ್ಯೀಕರಣ ಸುರಂಗ ಕ್ಕೆ ಚಾಲನೆ

ನೈರ್ಮಲ್ಯೀಕರಣ ಸುರಂಗ ಕ್ಕೆ ಚಾಲನೆ

ಪಾವಗಡ:  ಪಟ್ಟಣದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ಶುಕ್ರವಾರ ಹಿರಿಯ ಸಿವಿಲ್  ನ್ಯಾಯಾದೀಶ ವಿ.ಹನುಮಂತಪ್ಪ ನೈರ್ಮಲ್ಯೀಕರಣ ಸುರಂಗ (ATS Elgi Disinfectant Spraying Machine) ಉದ್ಘಾಟಿಸಿದರು.

ವೈದ್ಯ ಡಾ. ಜಿ. ವೆಂಕಟರಾಮಯ್ಯ, ನೈರ್ಮಲ್ಯೀಕರಣ ಸುರಂಗದಿಂದ ಆಸ್ಪತ್ರೆ ಸಿಬ್ಬಂದಿ, ವೈದ್ಯರು ನರ್ಭೀತಿಯಿಂದ ಕಾರ್ಯ ನಿರ್ವಹಿಸಬಹುದು. ಆಸ್ಪತ್ರೆಗೆ ಬರುವ ರೋಗಿಗಳಿಗೂ ಇದರಿಂದ ಅನುಕೂಲವಾಗುತ್ತದೆ. ಕೊರೊನಾ ನಿಯಂತ್ರಿಸುವಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದರು.

ಪಾವಗಡದ ಕೊಳಚೆ ಪ್ರದೇಶಗಳು, ಕಾಲೋನಿಗಳು ಮತ್ತು ಬುಡಕಟ್ಟು ಜನಾಂಗದವರು ಇರುವ ಸ್ಥಳಗಳಿಗೆ ಭೇಟಿ ನೀಡಿ ಶುಚಿತ್ವದ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡುತ್ತಾ ಆರಂಭಿಸಿದ ಯೋಜನೆ ಇಂದಿಗೂ ಅತ್ಯಂತ ಮಹತ್ತರವಾದ ಪರಿಣಾಮವನ್ನು ಸಾರ್ವಜನಿಕರಲ್ಲಿ ಬೀರಿದೆ ಎಂದು ವಿವರಿಸಿದರು.

ಆಶ್ರಮ ಹಾಗೂ ಇನ್ ಫೋಸಿಸ್   ವಿತಿಯಿಂದ ನಡೆಸಲಾದ   ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಇಂದಿಗೂ ಪ್ರಸ್ತುತವಾಗಿ ಜನತೆಯ ಮನಸ್ಸಿನಲ್ಲಿ ಮುದ್ರಿತವಾಗಿದೆ.  ಸಾವಿರಾರು ಜನಕ್ಕೆ ಉಚಿತ ಊಟ, ದಿನಸಿ, ಆಹಾರ ಪದಾರ್ಥ   ನಿರಂತರವಾಗಿ ನೀಡುತ್ತಾ ಬರುತ್ತಿರುವುದನ್ನು ಸ್ಮರಿಸಿದರು. ಇದೆಲ್ಲದರ ಜೊತೆ ಪಾವಗಡದ ಸುಮಾರು 850 ಕಾರ್ಮಿಕರ ಖಾತೆಗಳಿಗೆ ಪ್ರತಿದಿನ ರೂ.200/- ಜಮಾ ಆಗುತ್ತಿರುವುದು ಅತ್ಯುತ್ತಮವಾದ ಕೆಲಸ.  ಒಂದು ಸ್ವಯಂ ಸೇವಾ ಸಂಸ್ಥೆ ಈ ತೆರನಾದ ಕೆಲಸಗಳನ್ನು ಕೈಗೊಂಡಿರುವುದು ದೇಶಕ್ಕೆ   ಮಾದರಿ ಎಂದು ಪೂರ್ಣ ಕಂಠದಿಂದ ಪೂಜ್ಯ ಸ್ವಾಮೀಜಿ ಹಾಗೂ ಇನ್ಫೋಸಿಸ್ ಫೌಂಡೇಷನ್ ರವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಸ್ವಾಮಿ ಜಪಾನಂದಜಿ, ನ್ಯಾಯಾದೀಶ ವಿ.ಹನುಮಂತಪ್ಪ,  ಜಗದೀಶ್ ಬಿಸೆರೊಟ್ಟಿ,  ಭರತ್ ಯೋಗೇಶ್ ಕರಗುದರಿ, ಸರ್ಕಾರಿ ವಕೀಲ  ವಿ.ಮಂಜುನಾಥ್,  ವಕೀಲ ಯಜ್ಞನಾರಾಯಣ ಶರ್ಮ,  ಎಂ.ಭಗವಂತಪ್ಪ, ಪುರಸಭೆ ಸದಸ್ಯ ಸುದೇಶ್ ಬಾಬು  ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?