Friday, March 29, 2024
Google search engine
Homeತುಮಕೂರು ಲೈವ್ನೊಣವಿನಕೆರೆ, ಸಿ.ಎಸ್.ಪುರ ಸೇರಿ 67 ಗ್ರಾ.ಪಂ‌.ಗಳು ಕೊರೊನಾ ಹಾಟ್ಸ್ಪಾಟ್

ನೊಣವಿನಕೆರೆ, ಸಿ.ಎಸ್.ಪುರ ಸೇರಿ 67 ಗ್ರಾ.ಪಂ‌.ಗಳು ಕೊರೊನಾ ಹಾಟ್ಸ್ಪಾಟ್

Publicstory


ತುಮಕೂರು:
ನಗರದಲ್ಲಿ ಹಾಟ್ ಸ್ಪಾಟ್ ಪ್ರದೇಶಗಳನ್ನು ಗುರುತಿಸಿರುವ ಮಾದರಿಯಲ್ಲಿಯೇ ಹೆಚ್ಚು ಕೊರೋನಾ ಪ್ರಕರಣಗಳಿರುವ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯನ್ನು ಹಾಟ್ ಸ್ಪಾಟ್ ಪ್ರದೇಶಗಳನ್ನಾಗಿ ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿಯೂ ಕೊರೋನಾ ನಿಯಂತ್ರಣ ಸಂಬಂಧ ಹೆಚ್ಚಿನ ಕ್ರಮ ಕೈಗೊಳ್ಳಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

ಕುಣಿಗಲ್ ತಾಲೂಕಿನ ಜಿನ್ನಾಗರ; ಕೊರಟಗೆರೆಯ ಹುಲಿಕುಂಟೆ ಹಾಗೂ ಮಾವತ್ತೂರು; ಚಿಕ್ಕನಾಯಕನಹಳ್ಳಿಯ ಕಂದೀಕೆರೆ, ಶೆಟ್ಟಿಕೆರೆ, ಜೆ.ಸಿ.ಪುರ; ತುರುವೇಕೆರೆಯ ಮುನಿಯೂರು, ಕಣತ್ತೂರು, ಗೋಣಿ ತುಮಕೂರು, ಲೋಕಮ್ಮನಹಳ್ಳಿ;

ತಿಪಟೂರಿನ ಹುಚ್ಚಗೌಡನಹಳ್ಳಿ, ಬಿಳಿಗೆರೆ, ನೊಣವಿನಕೆರೆ; ಗುಬ್ಬಿಯ ಹಾಗಲವಾಡಿ, ಅಂಕಸಂದ್ರ, ಚೇಳೂರು, ತ್ಯಾಗಟೂರು, ನಿಟ್ಟೂರು, ಕಡಬ, ಸಿ.ಎಸ್. ಪುರ;

ತುಮಕೂರು ತಾಲೂಕಿನ ಬೆಳಗುಂಬ, ಕೆಸ್ತೂರು, ತಿಮ್ಮರಾಜನಹಳ್ಳಿ, ಸ್ವಾಂದೇನಹಳ್ಳಿ, ಊರುಕೆರೆ, ಬೆಳ್ಳಾವಿ, ದೊಡ್ಡನಾರವಂಗಲ, ಬುಗುಡನಹಳ್ಳಿ, ಮಲ್ಲಸಂದ್ರ, ಹಿರೇಹಳ್ಳಿ, ಮೈದಾಳ, ಗೂಳೂರು, ಹೆತ್ತೇನಹಳ್ಳಿ, ಹೆಬ್ಬೂರು, ಗಂಗೋನಹಳ್ಳಿ, ಬಳ್ಳಗೆರೆ,

ನಾಗವಲ್ಲಿ, ಹೆಬ್ಬೂರು; ಶಿರಾ ತಾಲೂಕಿನ ಬರಗೂರು, ಹಂದಿಕುಂಟೆ,‌ ನಾದೂರು, ತಾವರೆಕೆರೆ, ಭುವನಹಳ್ಳಿ,‌ ಲಕ್ಷ್ಮಿಸಾಗರ, ಮೇಲುಕುಂಟೆ,‌ ಕೊಟ್ಟ, ಮದಲೂರು, ಭೂಪಸಂದ್ರ, ತರೂರು,

ಚನ್ನೇನಹಳ್ಳಿ,‌ ಕಳ್ಳಂಬೆಳ್ಳ,‌ ಗೋಪಾಲದೇವರಹಳ್ಳಿ, ಸೀಬಿ ಅಗ್ರಹಾರ, ದೊಡ್ಡ ಅಗ್ರಹಾರ, ನೇರಳೇಗುಡ್ಡ, ಬುಕ್ಕಾಪಟ್ಟಣ; ಮಧುಗಿರಿಯ ಮಿಡಿಗೇಶಿ,ಬ್ಯಾಲ್ಯ, ದೊಡ್ಡೇರಿ, ಚಂದ್ರಗಿರಿ; ಪಾವಗಡದ ವೆಂಕಟಪುರ, ರಾಜವಂತಿ, ಕನ್ನಮೇಡಿ, ಅಚಮ್ಮನಹಳ್ಳಿ, ಕೆ.ಟಿ.ಹಳ್ಳಿ, ಕೋಟಗುಡ್ಡ, ವೈ.ಎನ್. ಹೊಸಕೋಟೆ ಗ್ರಾಮ ಪಂಚಾಯತಿಗಳನ್ನು ಹಾಟ್ ಸ್ಪಾಟ್ ಪ್ರದೇಶಗಳೆಂದು ಗುರುತಿಸಿ ಈ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದ್ದು, ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಈ ಪ್ರದೇಶಗಳಲ್ಲಿ ಜನರು ಹೊರಗಡೆ ತಿರುಗಾಡಬಾರದು. ಸೋಂಕಿನ ಲಕ್ಷಣಗಳು ಕಂಡು ಬಂದ ತಕ್ಷಣವೇ ಕೋವಿಡ್ ಪರೀಕ್ಷೆಗೊಳಪಡಬೇಕು ಎಂದು ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?