Thursday, March 28, 2024
Google search engine
Homeತುಮಕೂರ್ ಲೈವ್ಪೇಜಾವರ ಶ್ರೀಗೆ ಮುಸ್ಲಿಂ ರಿಂದ ಭಾವಪೂರ್ಣ ಶ್ರದ್ಧಾಂಜಲಿ

ಪೇಜಾವರ ಶ್ರೀಗೆ ಮುಸ್ಲಿಂ ರಿಂದ ಭಾವಪೂರ್ಣ ಶ್ರದ್ಧಾಂಜಲಿ

ತಿಪಟೂರಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಲ್ಲಾ ಬಕಾಶ್

ತಿಪಟೂರು: ಗಾಂಧಿನಗರ ದ ಮದೀನಾ ಶಾಧಿ ಮಹಲ್ ನಲ್ಲಿ ಸೇರಿದ್ದ ತಿಪಟೂರು ನಗರದ ಎಲ್ಲಾ ಮಸೀದಿಗಳ ಜಮಾಯತ್ ನ ವತಿಯಿಂದ ವಿಶ್ವೇಶ್ವರ ತೀರ್ಥ ಪೇಜಾವರ ಸ್ವಾಮಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಲ್ಲಾಬಕಾಶ್ ಎ ರವರು ಪೇಜಾವರ ಮಠ ಹಲವಾರು ಜನಪರ ಕಾರ್ಯಗಳನ್ನು ಹಮ್ಮಿಕೊಂಡಿದ್ದು ತಮ್ಮ ಮಠದಲ್ಲಿ ಹಲವಾರು ವೀರೋಧಗಳ ನಡುವೆಯು ಮುಸ್ಲಿಂರಿಗೆ ರಂಜಾನ್ ಹಬ್ಬದ ಇಪ್ತಾರ್ ಕೂಟವನ್ನು ಹಮ್ಮಿ ಕೊಳ್ಳುವ ಮೂಲಕ ಭಾವಕ್ಯತೆಯನ್ನುಸಾರಿದ ಸಂತ ಎಂದರು.

ಸೋಮವಾರ ಎನ್ ಆರ್ ಸಿ ವೀರೋದಿಸಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಪೇಜಾವರ ಶ್ರೀ ಗಳಿಗೆ ಶ್ರದ್ಧಾಂಜಲಿ ಅರ್ಪಿಸಿ ಮುಂದೂಡ ಲಾಗಿದೆ ಎಂದರು.

ಬಿಲಾಲ್ ಮಸೀದಿಯ ಮುತವಲ್ಲಿ ಶಫೀಉಲ್ಲಾ ಶರೀಫ್ ಮಾತನಾಡಿ ಪೇಜಾವರ ಸ್ವಾಮಿಗಳು ಧರ್ಮಗಳ ಬಗ್ಗೆ ಸಾಮರಸ್ಯ ಹೊಂದಿದ್ದರು ಎಂಬುದಕ್ಕೆ ಅವರ ಕಾರಿನ ಚಾಲಕ ಮುಸ್ಲಿಂ ಆಗಿದ್ದು ಅವರ ಸಾಮರಸ್ಯಕ್ಕೆ ಸಾಕ್ಷಿ ಎಂದರು.

ಅಲ್ಪಸಂಖ್ಯಾತ ರ ಘಟಕದ ಅಧ್ಯಕ್ಷ ರಾದ ಸೈಫುಲ್ಲಾ ಮಾತನಾಡಿ ನಮ್ಮ ರಾಜ್ಯದ ಅತಿ ಉನ್ನತ ಮಠದ ಪೇಜಾವರ ಶ್ರೀಗಳ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ .ಅವರ ಕೊಡುಗೆ ದೇಶಕ್ಕೆ ಅಪಾರ ಎಂದ ಅವರು ಸೋಮವಾರ ನಾವು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಕೈಬಿಟ್ಟಿದ್ದು . ಇಡೀ ರಾಜ್ಯವೇ ಶೋಕದಲ್ಲಿದ್ದು ನಾವು ಅದರಲ್ಲಿ ಭಾಗಿ ಎಂದರು.

ಸಭೆಯಲ್ಲಿ ಮದೀನಾ ಮಸೀದಿಯ ಮುತವಲ್ಲಿಯವರಾದ ಮಹಬೂಬ್ ಜಾನ್ ,ಟಿ ಎಲ್ ಶಫೀಕ್, ಜಾಮೀಯಾ ಮಸೀದಿಯ ಸಮೀವುಲ್ಲಾ ಖಾನ್, ಮಹಜರೀನ್ ಮಸೀದಿಯ ಮುನೀರ್, ಸೈಯದ್ ಮಹಮೂದ್, ನೂರಾನಿ ಮಸೀದಿಯ ಶೌಕತ್ ಪಾಷ, ಶಬ್ಬಿರ್ ಅಹಮದ್, ಅನ್ಸರ್ ಪಾಷ,ಸಿದ್ದಿಕೆ ಅಕ್ಬರ್ ಮಸೀದಿಯ ಆದಿಲ್, ಅನ್ಸಾರ್ ಮಸೀದಿಯ ಮುತವಲ್ಲಿ ಗೌಸ್ ಪೀರ್, ರಶೀದಿಯಾ ಮಸೀದಿಯ ಮುತವಲ್ಲಿ ರಹಮತ್, ಮುಸ್ಲಿಂ ಮುಖಂಡರಾದ ಹಬೀಬುಲ್ಲಾ, ಮುಯೀನ್ ಖಾನ್, ದಸ್ತು ಹಬೀಬ್ ಖಾನ್, ಪೈರೋಜ್, ಸೇರಿದಂತೆ ಎಲ್ಲಾ ಮಸೀದಿಯ ಮುಖ್ಯಸ್ಥರು ಗಳು ಸೇರಿದಂತೆ ಗಾಂಧಿನಗರದ ಜನತೆ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?