Friday, March 29, 2024
Google search engine
Homeತುಮಕೂರ್ ಲೈವ್ಬಿಲ್ಡರಗಳ ಹಿತಕ್ಕಾಗಿ ಕಾಮಿ೯ಕರನ್ನು ಬಲಿ ಕೊಡುತ್ತಿರುವ ರಾಜ್ಯ ಸಕಾ೯ರ ಸಿಪಿಐ(ಎಂ) ಖಂಡನೆ

ಬಿಲ್ಡರಗಳ ಹಿತಕ್ಕಾಗಿ ಕಾಮಿ೯ಕರನ್ನು ಬಲಿ ಕೊಡುತ್ತಿರುವ ರಾಜ್ಯ ಸಕಾ೯ರ ಸಿಪಿಐ(ಎಂ) ಖಂಡನೆ

Publicstory. in


ಬೆಂಗಳೂರು; ರಾಜ್ಯ ಸಕಾ೯ರವು ಲಾಕ್ಡೌನ್ ಆರಂಭದಿಂದಲೂ ದೊಡ್ಡ ಬಿಲ್ಡರಗಳ ಹಿತಕಾಯಲು ಹರಸಾಹಸ ಪಡುತ್ತಿದೆ. ಅವರ ಹಿತಕ್ಕಾಗಿ ಕಾಮಿ೯ಕರನ್ನು ಬಲಿಕೊಡುತ್ತಿದೆ. ರಾಜ್ಯ ಸಕಾ೯ರದ ಈ ಯತ್ನಗಳು ಕಾಮಿ೯ಕರ ಜೀವಕ್ಕೆ ಕಂಟಕ ವಾಗಲಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.

ರಾಜ್ಯ ಸಕಾ೯ರವು ಈ ಕಾರಣಕ್ಕಾಗಿಯೇ ಹೊರ ರಾಜ್ಯದ ವಲಸೆ ಕಾಮಿ೯ಕರಿಗೆ ತಡವಾಗಿ ರೈಲು ವ್ಯವಸ್ಥೆ ಮಾಡಿದೆ.ಅದನ್ನು ಸಹಾ ಗುಪ್ತವಾಗಿ ನಗರದಿಂದ ದೂರದ ಚಿಕ್ಕಬಾಣಾವರ ಮತ್ತು ಮಾಲೂರು ರೈಲು ನಿಲ್ದಾಣದಿಂದ ಮಾಡಿದೆ.

ಕನ್ನಡ ಮತ್ತು ಇಂಗ್ಲಿಷ್ ಎರಡೂ ಬಾರದ ಹೊರ ರಾಜ್ಯದ ವಲಸೆ ಕಾಮಿ೯ಕರಿಗೆ ಸೇವಾ ಸಿಂಧು ಆಪ್ ಮೂಲಕವೇ ಊರಿಗೆ ಹೋಗಲು ಅಜಿ೯ ಸಲ್ಲಿಸಲು ಕಡ್ಡಾಯಗೊಳಿಸಿದೆ. ಸ್ಥಳೀಯ ಪೋಲಿಸರಿಗೂ ರೈಲುಗಳು ಹೊರಡುವ ಮಾಹಿತಿ ನೀಡದೆ ಅವರನ್ನು ಕತ್ತಲಲ್ಲಿ ಇಟ್ಟು ತಮಗೆ ಬೇಕಾದ ಬಿಲ್ಡರಗಳ ಹಿತಕ್ಕಾಗಿ ಅವರ ಕಾಮಿ೯ಕರನ್ನು ಮಾತ್ರ ರೈಲಿನಲ್ಲಿ ಗುಪ್ತವಾಗಿ ಕಳುಹಿಸಲು ಮುಂದಾಗಿದೆ.

ಹೊರ ರಾಜ್ಯದ ವಲಸೆ ಕಾಮಿ೯ಕರನ್ನು ತಮ್ಮ ಊರುಗಳಿಗೆ ಹಿಂತಿರುಗಿ ಹೋಗದಂತೆ ತಡೆಯಲು ಅಧಿಕಾರಿಗಳಿಗೆ ತಾಕೀತು ಮಾಡುತ್ತಿದೆ. ಉತ್ತರ ಪ್ರದೇಶ ಮತ್ತು ಬಿಹಾರದ ಸಾವಿರಾರು ಯುವ ವಲಸೆ ಕಾಮಿ೯ಕರು ಬೆಂಗಳೂರಿನ ಹೊರವಲಯದಿಂದ ನೆಡೆದು ಬಂದು ನೆನ್ನೆ ಮಧ್ಯಾಹ್ನದಿಂದಲೂ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದಿದ್ದಾರೆ.

ಅವರ ನೆರೆವಿಗೆ ರಾಜ್ಯ ಸಕಾ೯ರವು ಇಲ್ಲ ಕೇಂದ್ರದ ರೈಲ್ವೆ ಇಲಾಖೆಯು ಇಲ್ಲವಾಗಿದೆ. ವಾಪಸ್ಸು ಕೆಲಸದ ಸ್ಥಳಕ್ಕೆ ಹಿಂತಿರುಗಿ ಹೋಗಲು ಅವರಿಗೆ ಸ್ಥಳೀಯ ಅಧಿಕಾರಿಗಳು ತಾಕೀತು ಮಾಡುತ್ತಿದ್ದಾರೆ ಹೇಳುತ್ತಿದ್ದಾರೆ.

ಇಂತಹ ಹಲವು ಪ್ರಕರಣಗಳಿವೆ ಒಟ್ಟಾರೆ ರಾಜ್ಯ ಸಕಾ೯ರವು ಬಿಲ್ಡರಗಳ ಹಿತಕಾಯಲು ವಲಸೆ ಕಾಮಿ೯ಕರನ್ನು ಬಲಿ ಕೊಡುತ್ತಿದೆ. ಮುಂದೊಂದು ದಿನ ಇತರೆ ರಾಜ್ಯಗಳ ದೃಷ್ಟಿಯಲ್ಲಿ ರಾಜ್ಯವು ಕೆಟ್ಟ ಆಡಳಿತದ ರಾಜ್ಯವೆಂಬ ಅಪಕೀತಿ೯ಗೆ ಬಿಜೆಪಿಯ ಬಿಲ್ಡರಗಳ ಪರ ಧೋರಣೆಯಿಂದಾಗಿ ಪಾತ್ರವಾಗಲಿದೆ ಎಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾಯ೯ದಶಿ೯ಕೆ. ಎನ್. ಉಮೇಶ್ ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಾಯ೯ದಶಿ೯ ಎನ್.ಪ್ರತಾಪ್ ಸಿಂಹ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?