Friday, March 29, 2024
Google search engine
Homeಸಾಹಿತ್ಯ ಸಂವಾದಕವನಭಾನುವಾರದ ಕವಿತೆ 'ಯುಗಾದಿ'

ಭಾನುವಾರದ ಕವಿತೆ ‘ಯುಗಾದಿ’

ಡಾ//ರಜನಿ. ಎಂ

ಅಪ್ಪ ಎಡಗಾಲ ನೀಚಿ
ಮಾವಿನ ತೋರಣ ಕಟ್ಟಲು ಕುಳಿತರೆ
ಅಂಚಿಕಡ್ಡಿ… ಸುತ್ತಲಿ ದಾರ ಹಿಡಿದು ನಿಲ್ಲಬೇಕು

ಮನೆ ಬಾಗಿಲಲಿ ನಿಲ್ಲಿಸಿ ಹರಳೆಣ್ಣೆ
ತಿಕ್ಕಿ ಮೈಗೆ ..
ಕಲ್ಲಲ್ಲಿ ಉಜ್ಜಿ ಗಸಗಸ

ಬೆಲ್ಲ, ಬೇವಿನ ಚಿಗುರು ಹೂವು
ಹುಣಿಸೆ ಚಿಗುರು, ಮಾವಿನ ಮಿಡಿ

ತೋತಾಪುರಿ ಮಾವಿನ…. ವಾಟೆ ವಾಟೆ
ಯಾರು?

ಬೇಳೆ ಒಬ್ಬಟ್ಟಿನ ಹೂರಣ
ಬಾಗಿಲಲಿ ಕುಳಿತು ತಿಂದು…

ಹದವಾದ ಬಳಪ ಕಲ್ಲ ಮೇಲೆ ಬೆಂದ
ಒಬ್ಬಟ್ಟು…ಕಾದ ತುಪ್ಪ

ಕಡ್ಲೆ ಗೊಜ್ಜು
ಕೋಸಂಬರಿ

ಹಬೇ ನೀರಿನ ಸ್ನಾನ
ನಮ್ಮ ಬಣ್ಣ ಕಾಗೆ ತಗೊಂಡು
ಕಾಗೆ ಮಿಂಚು ನಾವು ತಗೊಂಡು

ಹೊಸ ಬಟ್ಟೆ ಸದ್ದು..
ಮೇಲೆ ಮಣಿ ಸರ

ಹೊಂಗೆ ಮರದ ಹೂ ಉದುರಿ
ಜಿಂವ್…..ಜಿಂವ್
ಮಕರಂದ ಹೀರಿ

ಅಪ್ಪ ಕೊಟ್ಟ ಬೆಲ್ಲ ಹೆಚ್ಚು
ಒಂದೇ ಎಲೆ ಬೇವು

ಅಮ್ಮನ ಫುಲ್ ವಾಯಲ್
ಹೊಸ ಸೀರೆ

ಆಡಿ ಮನೆಗೆ ಬಂದರೆ
ಅಪ್ಪನ ಕೈಗೆ ಎಲೆ ಮಡಚಿ ಕೊಡುತ್ತಿರುವ
ಅಮ್ಮ..

ಸಂಜೆ 7 ಮನೆ ಚೌಕಾಬಾರ
ಅಪ್ಪ ಕವಡೆ ಹಿಡಿದು ಹಾಕಿ…
ತಿನ್ನುವ ಗುದ್ದು

ತಗಾದಿ ಆಗದೆ
ಮುಗಿಯದ ಯುಗಾದಿ
ಅಪರೂಪ

ನಾಳೆಗೆ
ಕಾದಿದೆ ಒಳ್ಳೇ ಹೊಸ ತಡಕು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?